ಬೆಂಗಳೂರು: ಧನ ಕುಬೇರ ಹಾಗೂ ಬುಧ ಗ್ರಹದ ಜೊತೆಗೆ ಮನಿಪ್ಲಾಂಟ್ ನೇರ ಸಂಬಂಧವನ್ನು ಹೊಂದಿದೆ. ವಾಸ್ತು ಶಾಸ್ತ್ರದಲ್ಲಿ ಹಲವಾರು ಸಸ್ಯಗಳ ಕುರಿತು ಉಲ್ಲೇಖಿಸಲಾಗಿದ್ದು, ಅವುಗಳನ್ನು ಮನೆಯಲ್ಲಿ ನೆಡುವುದರಿಂದ ವ್ಯಕ್ತಿಯೋಬನ ದಿನಗಳೇ ಬದಲಾಗುತ್ತವೆ ಮತ್ತು  ಆತನ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹೆಸರೇ ಸೂಚಿಸುವಂತೆ 'ಮನಿ ಪ್ಲಾಂಟ್' ನೆಡುವುದರಿಂದ ಏನು ಪ್ರಯೋಜನವಾಗುತ್ತದೆ ಎಂಬುದನ್ನು ನೀವು ಊಹಿಸಬಹುದು, ಆದರೆ, ಕೆಲವು ವಿಶೇಷ ನಿಯಮಗಳು ಮತ್ತು ಕ್ರಮಗಳನ್ನು ತೆಗೆದುಕೊಂಡರೆ ಮಾತ್ರ ಮನಿಪ್ಲಾಂಟ್ ನಿಮ್ಮ ಪಾಲಿಗೆ ಲಾಭಕಾರಿ ಸಾಬೀತಾಗಲಿದೆ. (Spiritual News In Kannada)


COMMERCIAL BREAK
SCROLL TO CONTINUE READING

ಮನೆಯಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಧನಾತ್ಮಕತೆಯ ಸಂಚಾರ ಉಂಟಾಗುತ್ತದೆ. ಕುಟುಂಬ ಎಲ್ಲಾ ಸದಸ್ಯರ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಲಾಭಕ್ಕಾಗಿ ಇದನ್ನು ಮನೆ ಅಥವಾ ಕಚೇರಿಯಲ್ಲಿ ನೆದಲಾಗುತ್ತದೆ. ಅಲ್ಲದೆ, ಮನಿ ಪ್ಲಾಂಟ್‌ಗೆ ಸಂಬಂಧಿಸಿದ ಕೆಲವು ನಿಯಮಗಳು ಮತ್ತು ಕ್ರಮಗಳನ್ನು ಅನುಸರಿಸಿದರೆ, ಶೀಘ್ರದಲ್ಲೇ ಅದರ ಸಕಾರಾತ್ಮಕ ಪರಿಣಾಮವು ನಿಮಗೆ ಕಂಡುಬರಲಾರಂಭಿಸುತ್ತದೆ.

ಮನಿ ಪ್ಲಾಂಟ್ ಮತ್ತು ಹಾಲಿನ ಈ ಉಪಾಯ ಅದ್ಭುತವಾಗಿದೆ
ವಾಸ್ತು ಶಾಸ್ತ್ರದಲ್ಲಿ, ಮನಿ ಪ್ಲಾಂಟ್ ಬಗ್ಗೆ ಹಲವು ಉಪಾಯಗಳನ್ನು ಸೂಚಿಸಲಾಗಿದೆ. ಹಾಲಿನ ಜೊತೆಗೆ ಮನಿಪ್ಲಾಂಟ್ ಬಳಕೆ ಅವುಗಳಲ್ಲಿ ಒಂದಾಗಿದೆ. ಮನಿ ಪ್ಲಾಂಟ್‌ಗೆ ಸ್ವಲ್ಪ ಹಾಲನ್ನು ಅರ್ಪಿಸುವುದು ಶುಭ ಫಲ ನೀಡುತ್ತದೆ ಎನ್ನಲಾಗಿದೆ. ಲಕ್ಷ್ಮಿ ದೇವಿಗೆ ಬಿಳಿ ಬಣ್ಣದ ವಸ್ತು ಅಥವಾ ಪ್ರದಾರ್ಥ ತುಂಬಾ ಪ್ರಿಯವಾದುದು ಎಂದು ಧರ್ಮಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೀಗಾಗಿ ಮನಿಪ್ಲಾಂಟ್ ಗೆ ಹಾಲು ಅಸ್ಪಿಸುವುದರಿಂದ ಅದು ಚೆನ್ನಾಗಿ ಬೆಳೆಯುತ್ತದೆ. ಮನಿ ಪ್ಲಾಂಟ್ ಮನೆಯಲ್ಲಿ ಹೇಗೆ ಬೆಳೆಯುತ್ತದೆಯೋ, ಹಾಗೆಯೇ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಈ ರೀತಿ ಮನಿ ಪ್ಲಾಂಟ್‌ಗೆ ಹಾಲು ಅರ್ಪಿಸಿ
ಮನಿ ಪ್ಲಾಂಟ್‌ಗೆ ನೀರುಣಿಸುವಾಗ, ನೀರಿನಲ್ಲಿ ಕೆಲವು ಹನಿ ಹಾಲನ್ನು ಬೆರೆಸಿ. ಇದರಿಂದ ಮನಿ ಪ್ಲಾಂಟ್‌ನ ಬೆಳವಣಿಗೆಯು ಉತ್ತಮವಾಗಿರುತ್ತದೆ ಮತ್ತು ದೇವಿ ಲಕ್ಷ್ಮಿಯ ಆಶೀರ್ವಾದವು ಸದಾ ನಿಮ್ಮ ಮೇಲಿರುತ್ತದೆ. ಹೀಗಿರುವಾಗ ಮನೆಯ ಆರ್ಥಿಕ ಪರಿಸ್ಥಿತಿಯಲ್ಲೂ ಕೂಡ ಸುಧಾರಿಸುತ್ತದೆ.


ಇದನ್ನೂ ಓದಿ-ನಾಲ್ಕು ದಿನಗಳ ಬಳಿಕ ಪವರ್ಫುಲ್ 'ಮಹಾಧನಯೋಗ' ರಚನೆ, ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ ಭಾರಿ ಕನಕವೃಷ್ಟಿ!

ಈ ದಿಕ್ಕಿನಲ್ಲಿ ಮನಿಪ್ಲಾಂಟ್ ಇಡುವುದು ಎಂದಿಗೂ ಪ್ರಯೋಜನಕಾರಿ
ಮನಿ ಪ್ಲಾಂಟ್ ಅನ್ನು ಸರಿಯಾದ ದಿಕ್ಕಿನಲ್ಲಿಟ್ಟರೆ ಅದು ಶುಭ ಫಲಿತಾಂಶಗಳನ್ನು ನೀಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಆಗ್ನೇಯ ದಿಕ್ಕು ಮನಿ ಪ್ಲಾಂಟ್‌ ಅನ್ನು ನೆಡಲು ಅಥವಾ ಇಡಲು ಸರಿಯಾದ ದಿಕ್ಕಾಗಿದೆ. ಮನಿ ಪ್ಲಾಂಟ್ ಅನ್ನು ಒಂದು ವೇಳೆ ನೀವು ಸರಿಯಾದ ದಿಕ್ಕಿನಲ್ಲಿ ಇರಿಸದಿದ್ದರೆ, ಅದು ವಿರುದ್ಧ ಫಲಿತಾಂಶಗಳನ್ನು ನೀಡುತ್ತದೆ. ಮನಿ ಪ್ಲಾಂಟ್ ಮತ್ತು ಹಾಲಿನ ಈ ಪರಿಹಾರವು ವ್ಯಕ್ತಿಯನ್ನು ಶ್ರೀಮಂತನನ್ನಾಗಿಸಬಹುದು.


ಇದನ್ನೂ ಓದಿ-ಎಂಟು ತಿಂಗಳುಗಳ ಬಳಿಕ ರೇವತಿ ನಕ್ಷತ್ರಕ್ಕೆ ರಾಹು ಪ್ರವೇಶ, ಹೊಸ ವರ್ಷದಲ್ಲಿ ಈ ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ ಯೋಗ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ