Vinayaka Chaturthi 2024: ಸನಾತನ ಧರ್ಮದಲ್ಲಿ ಗಣೇಶನ ಆರಾಧನೆಗೆ ವಿಶೇಷ ಮಹತ್ವವಿದೆ. ವಿಘ್ನ ನಿವಾರಕ ವಿನಾಯಕನನ್ನು ಧರ್ಮಗ್ರಂಥಗಳಲ್ಲಿ ಮೊದಲ ಪೂಜನೀಯ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಗಣಪತಿಯ ಹೆಸರಿನಲ್ಲಿ ಯಾವುದೇ ಕೆಲಸವನ್ನು ಆರಂಭಿಸಿದರೆ ಆ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಎಂದು ಹೇಳಲಾಗುತ್ತದೆ. ಚತುರ್ಥಿಯಂದು ಗಣಪತಿಯನ್ನು ಪೂಜಿಸುವುದರಿಂದ ಭಕ್ತರು ಶುಭ ಫಲವನ್ನು ಪಡೆಯುತ್ತಾರೆ. 


COMMERCIAL BREAK
SCROLL TO CONTINUE READING

ವಿನಾಯಕ ಚತುರ್ಥಿಯಂದು ಭಕ್ತಿಯಿಂದ ಉಪವಾಸ ಆಚರಿಸಿದರೆ ಬಪ್ಪನ ಆಶೀರ್ವಾದವು ಯಾವಾಗಲೂ ಭಕ್ತರ ಮೇಲೆ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೈಶಾಖ ಶುಕ್ಲ ಪಕ್ಷದ ಚತುರ್ಥಿ ದಿನಾಂಕದಂದು ಗಣೇಶ ಮಂತ್ರಗಳನ್ನು ಪಠಿಸುವುದು ಗಣೇಶನ ಆಶೀರ್ವಾದ, ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗಿದೆ. 


ವಿನಾಯಕ ಚತುರ್ಥಿ ಶುಭ ಸಮಯ 


ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯು ಮೇ 11ರಂದು ಮಧ್ಯಾಹ್ನ 2.50ಕ್ಕೆ ಪ್ರಾರಂಭವಾಗಲಿದ್ದು, ತಿಥಿಯು ಮೇ 12ರಂದು ಮಧ್ಯಾಹ್ನ 2.3ಕ್ಕೆ ಕೊನೆಗೊಳ್ಳಲಿದೆ. ಇದರಲ್ಲಿ ಮೇ 11ರಂದು ವಿನಾಯಕ ಚತುರ್ಥಿ ಆಚರಿಸಲಾಗುವುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ದಿನದಂದು ಪೂಜೆಗೆ ಶುಭ ಸಮಯವು ಬೆಳಗ್ಗೆ 10.57 ರಿಂದ 1.39ರವರೆಗೆ ಇರುತ್ತದೆ.
ಗಣೇಶನ ಆಶೀರ್ವಾದ ಪಡೆಯಲು ಈ ಮಂತ್ರ ಪಠಿಸಿರಿ.


ಇದನ್ನೂ ಓದಿ: ತುಳಸಿಯನ್ನು ಈ ವಿಧಾನದಲ್ಲಿ ಬಳಸಿದರೆ ಕೂದಲು ದಷ್ಟಪುಷ್ಟವಾಗಿ ಮಾರುದ್ದ ಬೆಳೆಯುತ್ತೆ


ಗಣೇಶ ಗಾಯತ್ರಿ ಮಂತ್ರ


"ಓಂ ಏಕದಂತಾಯ ವಿದ್ಮಹೇ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್"


ʼʼಓಂ ಮಹಾಕರ್ಣಾಯ ವಿದ್ಮಹೇ
ವಕ್ರತುಂಡಾಯ ಧೀಮಹಿ
ತನ್ನೋ ದಾಂತಿ ಪ್ರಚೋದಯಾತ್ʼʼ


ʼʼಓಂ ಗಜಾನನಯ ವಿದ್ಮಹೇ
ವಕ್ರತುಂಡಾಯ ಧೀಮಹಿ
ತನ್ನೋ ದಾಂತಿ ಪ್ರಚೋದಯಾತ್ʼʼ


​ಗಣೇಶನ ಶಕ್ತಿಯುತ ಕಾರ್ಯ ಸಿದ್ದಿ ಮಂತ್ರ


"ಓಂ ನಮೋ ಸಿದ್ಧಿ ವಿನಾಯಕಾಯ ಸರ್ವ ಕಾರ್ಯ ಕರ್ತ್ರೇ ಸರ್ವಾ ವಿಘ್ನ ಪ್ರಶಮ್ನಾಯ ಸರ್ವರ್ಜಯ ವಶ್ಯಕರ್ಣಾಯ ಸರ್ವಜನ ಸರ್ವಸ್ತ್ರೀ ಪುರುಷ ಆಕರ್ಷಣಾಯ ಶ್ರೀಂ ಓಂ ಸ್ವಾಹಾ"


ಗಣೇಶ ಬೀಜ ಮಂತ್ರ


''ಓಂ ಗಣ ಗಣಪತಯೇ ನಮೋ ನಮಃ ।


ಗಣೇಶನ ಮಂತ್ರ


''ಶ್ರೀ ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭಾ|
ನಿರ್ವಿಘ್ನಂ ಕುರೂ ಮೇ ದೇವ ಸರ್ವ ಕಾರ್ಯೇಷು ಸರ್ವದಾ||''


ನಮಸ್ಕಾರ ಗಣೇಶ ಮಂತ್ರಗಳು


"ಓಂ ವಕ್ರತುಂಡಾಯ ನಮಃ"
"ಓಂ ಏಕದಂತಾಯ ನಮಃ"
"ಓಂ ಗಜ ಕಾರ್ಣಿಕಾಯ ನಮಃ"
"ಓಂ ಲಂಬೋದರಾಯ ನಮಃ"
"ಓಂ ಬಾಲಚಂದ್ರಾಯ ನಮಃ"


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿನಾಯಕ ಚತುರ್ಥಿಯ ದಿನದಂದು ಗಣೇಶನ ಪೂಜೆಯಲ್ಲಿ ಕೆಲವು ವಸ್ತುಗಳನ್ನು ಅರ್ಪಿಸುವುದರಿಂದ ಗಣೇಶನ ಆಶೀರ್ವಾದ ಸಿಗುತ್ತದೆ. ಈ ದಿನದಂದು ಪೂಜೆಯ ಸಮಯದಲ್ಲಿ ದೂರವನ್ನು ಅರ್ಪಿಸಿ. ಇದರಿಂದ ಭಕ್ತರ ಎಲ್ಲಾ ಕೆಲಸ ಕಾರ್ಯಗಳು ಆಗುತ್ತವೆ. ಇದಲ್ಲದೆ ವಿನಾಯಕ ಚತುರ್ಥಿಯಂದು ಗಣಪತಿಗೆ ಐದು ಏಲಕ್ಕಿ ಮತ್ತು ಐದು ಜೊತೆ ಲವಂಗವನ್ನು ಅರ್ಪಿಸಿ. ಇದನ್ನು ಮಾಡುವುದರಿಂದ ಯಾವುದೇ ಒಬ್ಬ ಒಬ್ಬ ವ್ಯಕ್ತಿಯು ತನ್ನ ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾನೆ. 


ಇದನ್ನೂ ಓದಿ: ವೀಳ್ಯದೆಲೆ ಕೂದಲಿಗೆ ಅಮೃತವಿದ್ದಂತೆ… ಹೀಗೆ ಬಳಸಿದರೆ ಕೂದಲು ದಪ್ಪ-ಸಮೃದ್ಧವಾಗಿ ಸೊಂಟದವರೆಗೆ ಬೆಳೆಯುತ್ತೆ!


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.