ನವದೆಹಲಿ:ಇಂಗ್ಲೆಂಡ್‌ನ ಮಾಜಿ ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್ ಅವರು ಆಡುವ ದಿನಗಳಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ವಿರುದ್ಧ ಸಾಕಷ್ಟು ಯಶಸ್ಸನ್ನು ಕಂಡರು. 


COMMERCIAL BREAK
SCROLL TO CONTINUE READING

ಭಾರತದಲ್ಲಿ 2011-12ರ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಇಂಗ್ಲೆಂಡ್ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.ಪನೆಸರ್ ಪ್ರಕಾರ ತಮ್ಮ ಸಮಕಾಲಿನ ಆಟಗಾರರಾಗಿದ್ದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಮತ್ತು ರಾಹುಲ್ ದ್ರಾವಿಡ್ ಅವರಿಗೆ ಇತರ ಬ್ಯಾಟ್ಸ್‌ಮನ್‌ಗಳಿಗಿಂತ ಶ್ರೇಷ್ಠ ಎಂದು ಅವರು ರೇಟ್ ಮಾಡುತ್ತಾರೆ.


50 ಟೆಸ್ಟ್ ಪಂದ್ಯಗಳನ್ನು ಆಡಿ, ಇಂಗ್ಲೆಂಡ್ ಪರ 167 ವಿಕೆಟ್ ಕಬಳಿಸಿದ ಪನೇಸರ್, 2006 ರಲ್ಲಿ ನಾಗ್ಪುರದಲ್ಲಿ ನಡೆದ ಚೊಚ್ಚಲ ಪಂದ್ಯದಲ್ಲಿ ತೆಂಡೂಲ್ಕರ್ ಅವರ ವಿಕೆಟ್ ಕಬಳಿಸಿದ್ದರು.'ಸಚಿನ್ ಅವರನ್ನು ಹೊರಹಾಕುವುದು ಕಷ್ಟಕರವಾಗಿತ್ತು. ಆದರೆ ನೀವು ಸ್ಪರ್ಧಾತ್ಮಕವಾಗಿರಬೇಕು. ಅದನ್ನು ಹೇಳಿದ ನಂತರ, ಅವರನ್ನು ಔಟ್ ಮಾಡಲು ನಾನು ನಿರ್ಧರಿಸಿದೆ' ಎಂದರು.


ಸಚಿನ್ ಹೊರತುಪಡಿಸಿಇತರ ಇಬ್ಬರು ಭಾರತೀಯ ಆಟಗಾರರೆಂದರೆ ದ್ರಾವಿಡ್ ಮತ್ತು ಸೆಹ್ವಾಗ್ ಎಂದು ಪನೇಸರ್ ಹೇಳಿದ್ದಾರೆ. ಪನೇಸರ್ ವೀರೇಂದ್ರ ಸೆಹ್ವಾಗ್ ಅವರನ್ನು ಆ ಯುಗದ ಅತ್ಯಂತ ವಿನಾಶಕಾರಿ ಬ್ಯಾಟ್ಸ್‌ಮನ್ ಎಂದು ರೇಟ್ ಮಾಡಿದ್ದಾರೆ."ಮತ್ತು ಸೆಹ್ವಾಗ್ ಸರಳವಾಗಿ ಅದ್ಭುತವಾಗಿದ್ದರು, ಆ ಸಮಯದಲ್ಲಿ ಅತ್ಯಂತ ವಿನಾಶಕಾರಿ ಬ್ಯಾಟ್ಸ್‌ಮನ್" ಎಂದು ಹೇಳಿದರು. 


ದ್ರಾವಿಡ್ ಬಗ್ಗೆ ಪ್ರತಿಕ್ರಿಯಿಸಿದ ಪನೇಸರ್, ಏಕದಿನ ಮತ್ತು ಟೆಸ್ಟ್ ಎರಡರಲ್ಲೂ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಭಾರತೀಯ ಪನೇಸರ್, ಅವರ ಬ್ಯಾಟ್ ಇತರರಿಗಿಂತ ಅಗಲವಾಗಿತ್ತು. ದ್ರಾವಿಡ್ ಅವರು ಗೋಡೆಯಂತೆ ಮತ್ತೊಬ್ಬ ಶ್ರೇಷ್ಠ ಆಟಗಾರ. ಅವರ ಬ್ಯಾಟ್ ಇನ್ನೊಬ್ಬರಿಗಿಂತ ಅಗಲವಾಗಿದೆ ಎಂದು ನೀವು ಭಾವಿಸಬಹುದು 'ಎಂದರು.