ನವದೆಹಲಿ: ಲಾಕ್ ಡೌನ್ ಮುಗಿದ ನಂತರ ಆಟಗಾರರು ತರಬೇತಿಗೆ ಮರಳುವ ವಿಚಾರವಾಗಿ ಬಿಸಿಸಿಐ ವಿಸ್ತೃತವಾದ ಯೋಜನೆಯೊಂದನ್ನು ರೂಪಿಸುತ್ತಿದೆ,ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಲಾಕ್‌ಡೌನ್‌ನ ನಾಲ್ಕನೇ ಹಂತವು ಕೆಲವು ಸಡಿಲಿಕೆಗಳೊಂದಿಗೆ ಮುಂದುವರೆಯಲಿದೆ ಎಂದು ಸೂಚನೆ ನೀಡಿದ ಬೆನ್ನಲೇ ಈಗ ಬಿಸಿಸಿಐ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಆಟಗಾರರನ್ನು ಹೇಗೆ ಸದೃಢವಾಗಿ ಮತ್ತು ಸಿದ್ಧವಾಗಿರಿಸಿಕೊಳ್ಳಬೇಕು ಎಂಬುದರ ಕುರಿತು ಬಿಸಿಸಿಐ ವಿವಿಧ ಆಯ್ಕೆಗಳನ್ನು ಹುಡುಕುತ್ತಿದೆ.ಮೇ 18 ರ ನಂತರ ನಿರ್ಬಂಧಗಳನ್ನು ಸಡಿಲಿಸಿದರೆ, ತಂಡದ ಹಿರಿಯ ಆಟಗಾರರು ತಮ್ಮ ಕೌಶಲ್ಯ ಆಧಾರಿತ ಹೊರಾಂಗಣ ತರಬೇತಿಯನ್ನು ಪ್ರಾರಂಭಿಸಲು ಪ್ರೋತ್ಸಾಹಿಸಬಹುದು ಎನ್ನಲಾಗಿದೆ.


"ಇದೀಗ, ಆಟಗಾರರಿಗಾಗಿ ನಾವು ಮಾರ್ಗಸೂಚಿಯನ್ನು ಹೊಂದಿದ್ದೇವೆ. ಸಡಿಲಿಕೆ ನಿಯಮಗಳು  ಏನೆಂಬುದನ್ನು ಅವಲಂಬಿಸಿ ನಾವು ಭವಿಷ್ಯದ ಯೋಜನೆಯನ್ನು ರೂಪಿಸುತ್ತೇವೆ. ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ಆಟಗಾರರೊಂದಿಗೆ ಸಂಪರ್ಕದಲ್ಲಿದ್ದಾರೆ.ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.ಕೋಚಿಂಗ್ ಸಿಬ್ಬಂದಿ ಈಗ ಆಟಗಾರರೊಂದಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ಹೇಗಿರಬೇಕು ಎನ್ನುವ ವಿಚಾರವಾಗಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.ಲಾಕ್ ಡೌನ್ ನಂತರ,ನಾವು ಕೌಶಲ್ಯ ಆಧಾರಿತ ತರಬೇತಿಯತ್ತ ಗಮನ ಹರಿಸುತ್ತೇವೆ, ”ಎಂದು ಧುಮಾಲ್ ಹೇಳಿದರು.


'ಆಟಗಾರರ ಆರೋಗ್ಯ ಮತ್ತು ಸುರಕ್ಷತೆ ಮತ್ತು ಎಲ್ಲಾ ಸಂಬಂಧಪಟ್ಟ ಜನರು ಪ್ರಮುಖ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ. ಮೇ 18 ರ ನಂತರ ಸರ್ಕಾರ ಏನು ಸೂಚಿಸುತ್ತದೆ ಎಂಬುದನ್ನು ನಾವು ನೋಡುತ್ತೇವೆ ಮತ್ತು ಅದಕ್ಕೆ ತಕ್ಕಂತೆ ನಿರ್ಧರಿಸುತ್ತೇವೆ ಎಂದು ಧುಮಾಲ್ ಹೇಳಿದರು.ಸದ್ಯಕ್ಕೆ ತರಬೇತುದಾರರು - ರವಿಶಾಸ್ತ್ರಿ, ವಿಕ್ರಮ್ ರಾಥೌರ್, ಭಾರತ್ ಅರುಣ್, ಆರ್ ಶ್ರೀಧರ್ ಮತ್ತು ನಿಕ್ ವೆಬ್ - ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಆಟಗಾರರನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ.


ಇತ್ತೀಚೆಗೆ, ಹಾಕಿ ಇಂಡಿಯಾ ತನ್ನ ಎಲ್ಲಾ ಆಟಗಾರರಿಗೆ ತರಬೇತಿಯನ್ನು ಪುನರಾರಂಭಿಸುವ ಮೊದಲು ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಲು ಕೇಳಿಕೊಂಡಿದೆ. ಮತ್ತು ಕೆಲವು ನಿರ್ದಿಷ್ಟ ಮಾರ್ಗಸೂಚಿಗಳಿದ್ದರೆ ಅವರು ಅದನ್ನು ಪಾಲಿಸುತ್ತಾರೆ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.