ತಿರುವನಂತಪುರಂ: ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟದ ವೇಳೆ ಜೇನುನೊಣಗಳ ದಾಳಿಯಿಂದಾಗಿ ಅಲ್ಲಿದ್ದ ಜನರು ಮೈದಾನ ಬಿಟ್ಟು ಓಡಿದ ಘಟನೆ ನಗರದ ಗ್ರೀನ್ ಫೀಲ್ಡ್ ಸ್ಟೇಡಿಯಂನಲ್ಲಿ ಇತ್ತೀಚಿಗೆ ನಡೆದಿದೆ. 


COMMERCIAL BREAK
SCROLL TO CONTINUE READING

ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್ ನಡುವಣ ನಾಲ್ಕನೇ ಅನಧಿಕೃತ ಪಂದ್ಯದ ಸಂದರ್ಭದಲ್ಲಿ ಜೇನ್ನೊಣಗಳು ಅಲ್ಲಿದ್ದವರ ಮೇಲೆ ಏಕಾಈಕಿ ದಾಳಿ ನಡೆಸಿದ ಕಾರಣ ಪಂದ್ಯವನ್ನು 15 ನಿಮಿಷಗಳ ಕಾಲ ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಯಿತು. 


ಇಂಗ್ಲೆಂಡ್ ಲಯನ್ಸ್ ಬ್ಯಾಟಿಂಗ್ ವೇಳೆ ಪಂದ್ಯದ 28ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ವೆಸ್ಟ್ ಸ್ಟ್ಯಾಂಡ್‌ನಲ್ಲಿದ್ದ ಕೆಲವು ಅಭಿಮಾನಿಗಳು ಜೇನ್ನೊಣಗಳಿಗೆ ಕಲ್ಲೆಸೆದಿರುವುದೇ ಏಕಾಏಕಿ ದಾಳಿಗೆ ಕಾರಣ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.