ನವದೆಹಲಿ: ವಿಶ್ವದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಅಪ್ರತಿಮ ಆಟಗಾರ. ಜುಲೈ 7, 1981ರಲ್ಲಿ ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯಲ್ಲಿ ಜನಿಸಿದ ಎಂಎಸ್ ಧೋನಿ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮೈದಾನದಲ್ಲಿ 'ಕ್ಯಾಪ್ಟನ್ ಕೂಲ್' ಎಂದು ಹೆಸರಾದ ಧೋನಿ ಗೆದ್ದಾಗ ಹಿಗ್ಗದ, ಸೋತಾಗ ಕುಗ್ಗದ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ.



COMMERCIAL BREAK
SCROLL TO CONTINUE READING

ಸತತ 15 ವರ್ಷಗಳಿಂದ ಭಾರತ ತಂಡದಲ್ಲಿ ಮಿಂಚಿದ ತಾರೆ, ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಅವರ ಜನ್ಮದಿನದ ಒಂದು ದಿನ ಮುಂಚೆ ಧೋನಿ ತನ್ನ ವೃತ್ತಿಜೀವನದ 500 ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟ್ವೆಂಟಿ -20 ಸರಣಿಯ ಎರಡನೇ ಪಂದ್ಯದಲ್ಲಿ ಅವರು ಭಾಗವಹಿಸಿದ್ದರು. 


ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರು. ಆರಂಭದಲ್ಲಿ ಅತಿ ಅಬ್ಬರದ ಮತ್ತು ಆಕ್ರಮಣಕಾರಿ ಬ್ಯಾಟ್ಸ್‌ಮ್ಯಾನ್‌ ಎಂದು ಗುರುತಿಸಿಕೊಂಡರೂ ಸಹ ನಂತರ ಭಾರತದ ಏಕದಿನ (ODI) ತಂಡದ ಶಾಂತ ಸ್ವಭಾವದ ನಾಯಕರಾಗಿ ಗುರುತಿಸಿಕೊಂಡು 'ಕ್ಯಾಪ್ಟನ್ ಕೂಲ್' ಎಂದೇ ಖ್ಯಾತಿ ಪಡೆದರು.



ಬಲಗೈ ಬ್ಯಾಟ್ಸ್‌ಮನ್‌ ಮತ್ತು ವಿಕೆಟ್‌-ಕೀಪರ್‌ ಆದ ಧೋನಿ, ಪಾರ್ಥಿವ್ ಪಟೇಲ್‌, ಅಜೇಯ್ ರಾತ್ರಾ ಮತ್ತು ದಿನೇಶ್ ಕಾರ್ತಿಕ್‌ರಂತೆ ಎಳೆವಯಸ್ಸಿನಲ್ಲೇ ಭಾರತ 'ಎ' ಕ್ರಿಕೆಟ್‌ ತಂಡಗಳಲ್ಲಿನ ಉತ್ತಮ ಪ್ರದರ್ಶನದ ಮೂಲಕ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಹಲವು ವಿಕೆಟ್‌-ಕೀಪರ್‌ಗಳಲ್ಲಿ ಒಬ್ಬರಾಗಿದ್ದಾರೆ.



ಧೋನಿಯವರು, 2005/06 ಕೊನೆಯವರೆಗಿನ ODI ಕ್ರಿಕೆಟ್‌ನಲ್ಲಿನ ಆಕರ್ಷಕ ಸುಸ್ಥಿರ ಪ್ರದರ್ಶನದಿಂದಾಗಿ ICC ODI ಶ್ರೇಯಾಂಕ ಪಟ್ಟಿಯಲ್ಲಿ No. 1 ಬ್ಯಾಟ್ಸ್‌ಮ್ಯಾನ್‌ ಆಗಿ ಹೊರಹೊಮ್ಮಿದರು. 


ಇವರ ನಾಯಕತ್ವದಲ್ಲಿ ಭಾರತವು 2007 ICC ವಿಶ್ವ ಟಿ-20 ಮತ್ತು 2008ರಲ್ಲಿ ಆಸ್ಟ್ರೇಲಿಯಾವನ್ನು 2-0 ಅಂತರದಲ್ಲಿ ಸೋಲಿಸಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ಗೆದ್ದಿತ್ತು. ಅವರು ಶ್ರೀಲಂಕಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆದ ಉಭಯ ODI ಸರಣಿಯನ್ನು ಮೊದಲ ಬಾರಿಗೆ ಗೆದ್ದ ತಂಡದ ನಾಯಕರಾಗಿದ್ದರು. ಧೋನಿಯು ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ 2008 ಮತ್ತು 2009ರಲ್ಲಿ ವರ್ಷದ ICC, ಏಕದಿನ ಅಂತರಾಷ್ಟ್ರೀಯ ಪಂದ್ಯದ ಉತ್ತಮ ಆಟಗಾರ ಪ್ರಶಸ್ತಿ (ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ)ಯನ್ನು ನೀಡಿ ಗೌರವಿಸಿತು. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಮತ್ತು ಪದ್ಮ ಶ್ರೀ 2009ರಲ್ಲಿ ಭಾರತದ ನಾಲ್ಕನೇ ಅತಿ ದೊಡ್ಡ ನಾಗರಿಕ ಸೇವಾ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.