Suryakumar Yadav Statement, IND vs SA: ಭಾರತ ತಂಡವು ಭಾನುವಾರ ಅಂದರೆ ಡಿಸೆಂಬರ್ 10 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ T20 ಸರಣಿಯನ್ನು ಪ್ರಾರಂಭಿಸಲಿದೆ. ಸರಣಿಯ ಮೊದಲ ಟಿ20 ಪಂದ್ಯವು ಡರ್ಬನ್‌’ನ ಕಿಂಗ್ಸ್‌’ಮೀಡ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ತಂಡದ ನಾಯಕರಾಗಿದ್ದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಆರಂಭಿಕರಾಗಿ ಮಾತನಾಡಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದುಡ್ಡು ರೇಡಿಯಾಗಿಡಿ, ಈ ದಿನದಿಂದ ಆಗ್ಗದ ದರದಲ್ಲಿ ಚಿನ್ನ ಸಿಗಲಿದೆ, ಚಾನ್ಸ್ ಮಿಸ್ ಮಾಡ್ಕೊಬೇಡಿ!


ಟಿ20 ಸರಣಿಯಲ್ಲಿ ತಂಡದ ಸಂಯೋಜನೆಯ ಬಗ್ಗೆ ನಾಯಕ ಸೂರ್ಯಕುಮಾರ್ ಯಾದವ್ ಬಳಿ ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನೆ ಕೇಳಲಾಯಿತು. ಈ ಬಗ್ಗೆ ಏನನ್ನೂ ಹೇಳದ ಅವರು ಟೀಮ್ ಕಾಂಬಿನೇಷನ್ ನನ್ನ ಮನಸ್ಸಿನಲ್ಲಿದೆ ಎಂದಿದ್ದಾರೆ. “ಸಂಯೋಜನೆಯು ನಮ್ಮ ಮನಸ್ಸಿನಲ್ಲಿದೆ. ನಾಳೆ ಯಾರು ಇನ್ನಿಂಗ್ಸ್ ತೆರೆಯುತ್ತಾರೆ ಎಂಬುದು ನಮಗೆ ತಿಳಿದಿದೆ ಮತ್ತು ಅಭ್ಯಾಸದ ನಂತರವೇ ನಾವು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಹೌದು, ಆರನೇ ಬೌಲರ್‌’ಗಾಗಿ ನಮ್ಮಲ್ಲಿ ಸಾಕಷ್ಟು ಆಯ್ಕೆಗಳಿವೆ” ಎಂದಿದ್ದಾರೆ.


ವಿಶ್ವಕಪ್ ಫೈನಲ್‌’ನಲ್ಲಿ (ಒಡಿಐ ವಿಶ್ವಕಪ್ ಫೈನಲ್) ನಿರಾಶಾದಾಯಕ ಸೋಲನ್ನು ಮರೆಯುವುದು ತುಂಬಾ ಕಷ್ಟ ಎಂದು ಸೂರ್ಯಕುಮಾರ್ ಯಾದವ್ ಭಾನುವಾರ ಒಪ್ಪಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿನ ಇತ್ತೀಚಿನ ಗೆಲುವು ತಂಡಕ್ಕೆ ಸ್ಥೈರ್ಯ ತುಂಬಿದೆ ಎಂದು ಬಣ್ಣಿಸಿದರು.


ಇದನ್ನೂ ಓದಿ: ಬಿಳಿ ಬಟ್ಟೆ ಮೇಲೆ ಹಳದಿ ಕಲೆಗಳಾಗಿದ್ಯಾ? 5 ರೂ. ಬೆಲೆಯ ಈ ವಸ್ತುವಿನಿಂದ ಸುಲಭವಾಗಿ ಹೋಗಲಾಡಿಸಬಹುದು


ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದ ಮುನ್ನಾದಿನದಂದು ಮಾತನಾಡಿದ ಅವರು, “ವಿಶ್ವಕಪ್ ಸೋಲು ನಿರಾಶಾದಾಯಕವಾಗಿತ್ತು ಮತ್ತು ಅದನ್ನು ಮರೆಯುವುದು ತುಂಬಾ ಕಷ್ಟ. ಆದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿನ ಗೆಲುವು ನೈತಿಕ ಬೂಸ್ಟ್ ಆಗಿದೆ” ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ