Ravi Shastri Statement: ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ವಿಶ್ವಕಪ್ 2023ರ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಎಡವಿತು. ಈ ನೋವು ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲ, ಕ್ರೀಡಾ ಅಭಿಮಾನಿಗಳಿಗೆ ನೋವನ್ನುಂಟು ಮಾಡಿತ್ತು. ಇದೀಗ ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಭಾರತದ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೊಹ್ಲಿ, ರೋಹಿತ್ ಕೋಟಿ ಕೋಟಿ ಸಂಪಾದಿಸಿದ್ದು ಕ್ರಿಕೆಟ್’ನಿಂದಲ್ಲ… ಈ ಕಂಪನಿಯ ಡೀಲ್’ನಿಂದ!


“ಅಂದು ಹೃದಯವಿದ್ರಾವಕವಾಗಿತ್ತು. ಆದರೆ ಬಹಳಷ್ಟು ಜನರು ಬಹಳಷ್ಟು ಕಲಿತಿದ್ದಾರೆ. ಭಾರತ ಶೀಘ್ರದಲ್ಲೇ ವಿಶ್ವಕಪ್ ಗೆಲ್ಲುವುದನ್ನು ನಾನು ನೋಡುತ್ತೇನೆ. ಈ 50 ಓವರ್‌’ಗಳ ಸ್ವರೂಪವು ಅಷ್ಟು ಸುಲಭವಲ್ಲ, ನೀವು ಮತ್ತೆ ತಂಡವನ್ನು ಸಿದ್ಧಪಡಿಸಬೇಕು. ಮುಂಬರುವ 20-ಓವರ್ ಕ್ರಿಕೆಟ್‌’ನಲ್ಲಿ ಭಾರತವು ಅತ್ಯಂತ ಗಂಭೀರವಾದ ಸವಾಲನ್ನು ಎದುರಿಸಲಿದೆ. ಇದು ಆಟದ ಚಿಕ್ಕ ಸ್ವರೂಪವಾಗಿದ್ದು, ಆದ್ದರಿಂದ ನಿಮ್ಮ ಗಮನವು ಆ ದಿಕ್ಕಿನಲ್ಲಿರಬೇಕು” ಎಂದಿದ್ದಾರೆ.


ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಮುಂದಿನ ವರ್ಷದ T20 ವಿಶ್ವಕಪ್‌’ನಲ್ಲಿ ಭಾರತವನ್ನು 'ಸೀರಿಯಸ್ ಚಾಲೆಂಜರ್' ಎಂದು ಬಣ್ಣಿಸಿದ್ದಾರೆ. ಆದರೆ ಯಾವುದೇ ಪ್ರಮುಖ ಪಂದ್ಯಾವಳಿಯ ಕೊನೆಯ ಎರಡು ನಾಕ್-ಔಟ್ ಪಂದ್ಯಗಳನ್ನು ಗೆಲ್ಲುವುದು ಪ್ರೀಮಿಯರ್ ತಂಡಕ್ಕೆ ಕಷ್ಟ ಎಂದು ಹೇಳಿದರು.


ಇದನ್ನೂ ಓದಿ: ಗಜಲಕ್ಷ್ಮೀ ರಾಜಯೋಗದಿಂದ 2024ರ ಸಂವತ್ಸರ ಆರಂಭ: ಹೊಸ ವರ್ಷದಲ್ಲಿ ದೀಪದಂತೆ ಬೆಳಗಲಿದೆ ಈ ಜನರ ಭವಿಷ್ಯ, ಮಿಲಿಯನೇರ್ ಆಗೋದು ಗ್ಯಾರಂಟಿ


ಮುಂದಿನ ವರ್ಷ ಜೂನ್ 4 ರಿಂದ ಕೆರಿಬಿಯನ್ ಮತ್ತು ಯುನೈಟೆಡ್ ಸ್ಟೇಟ್ಸ್‌’ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌’ಗೆ ಮುನ್ನ ಟೀಂ ಇಂಡಿಯಾ ಸನ್ನದ್ಧವಾಗಬೇಕಿದೆ.  


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ