ODI World Cup Final: ಏಕದಿನ ವಿಶ್ವಕಪ್ 2023ಕ್ಕೆ ಭಾರತವು ಆತಿಥ್ಯ ವಹಿಸಿತ್ತು. ಆದರೆ ನವೆಂಬರ್ 19 ರಂದು ಆಸ್ಟ್ರೇಲಿಯಾ ಫೈನಲ್‌’ನಲ್ಲಿ ಟೀಂ ಇಂಡಿಯಾವನ್ನು ಸೋಲಿಸುವ ಮೂಲಕ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕನಸು ಭಗ್ನಗೊಂಡಿತು. ಇದೀಗ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ಅಹಮದಾಬಾದ್‌’ನಲ್ಲಿ ನಡೆದ ಏಕದಿನ ವಿಶ್ವಕಪ್‌’ನ ಫೈನಲ್‌’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲನ್ನು ಅನುಭವಿಸಿತ್ತು. ಈ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್‌’ನಲ್ಲಿ ಕಣ್ಣೀರು ಹಾಕಿದ್ದರು ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.


ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ರೋಹಿತ್ ಶರ್ಮಾ ಬದಲು ಈತನಿಗೆ ನಾಯಕತ್ವ


ನವೆಂಬರ್ 19 ರಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತವನ್ನು 6 ವಿಕೆಟ್‌’ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ತನ್ನ ಆರನೇ ODI ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಭಾರತದ ಸೋಲಿನ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಟೀಂ ಇಂಡಿಯಾದ ಡ್ರೆಸ್ಸಿಂಗ್ ಕೋಣೆಗೆ ತೆರಳಿ ರೋಹಿತ್ ಮತ್ತು ಕೊಹ್ಲಿಯನ್ನು ಪ್ರೋತ್ಸಾಹಿಸಲು ಪ್ರಯತ್ನಿಸಿದರು ಆದರೆ ಡ್ರೆಸ್ಸಿಂಗ್ ರೂಮ್‌’ನಲ್ಲಿನ ವಾತಾವರಣ ಬಹಳಷ್ಟು ನೋವಿನಿಂದ ಕೂಡಿತ್ತು ಎಂದು ಅಶ್ವಿನ್ ಹೇಳಿದ್ದಾರೆ.


ತಮ್ಮ ಯೂಟ್ಯೂಬ್ ಚಾನೆಲ್‌’ನಲ್ಲಿ ಮಾಜಿ ಕ್ರಿಕೆಟಿಗ ಸುಬ್ರಮಣ್ಯಂ ಬದರಿನಾಥ್ ಅವರೊಂದಿಗಿನ ಸಂಭಾಷಣೆಯಲ್ಲಿ ಮಾತನಾಡಿದ ಅಶ್ವಿನ್, “ನಾವು ನೋವು ಅನುಭವಿಸುತ್ತಿದ್ದೇವೆ. ರೋಹಿತ್ ಮತ್ತು ವಿರಾಟ್ ಅವರ ಕಣ್ಣಲ್ಲಿ ನೀರು ಬಂದಿದ್ದು ನೋಡಿ ತುಂಬಾ ಬೇಸರವಾಯಿತು. ಏನೇ ಆಗಲಿ, ಹೀಗಾಗಬಾರದಿತ್ತು. ತಂಡದಲ್ಲಿ ತುಂಬಾ ಅನುಭವಿಗಳಿದ್ದರು. ಮತ್ತು ಎಲ್ಲರಿಗೂ ಏನು ಮಾಡಬೇಕೆಂದು ತಿಳಿದಿತ್ತು” ಎಂದರು.


“ಭಾರತ ವಿಶ್ವಕಪ್ ಗೆಲ್ಲದಿದ್ದರೂ, ಕೊಹ್ಲಿ ಮತ್ತು ರೋಹಿತ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌’ನಿಂದ ಪ್ರಭಾವಿತರಾದರು. ರೋಹಿತ್ ಒಬ್ಬ ಅತ್ಯುತ್ತಮ ಬ್ಯಾಟ್ಸ್‌ಮನ್ ಮತ್ತು ನಾಯಕ. ಭಾರತೀಯ ಕ್ರಿಕೆಟ್ ನೋಡಿದರೆ ಎಲ್ಲರೂ ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ಅತ್ಯುತ್ತಮ ನಾಯಕ ಎಂದು ಹೇಳುತ್ತಾರೆ, ಆದರೆ ರೋಹಿತ್ ಕೂಡ ಅದ್ಭುತ ವ್ಯಕ್ತಿ. ತಂಡದ ಪ್ರತಿಯೊಬ್ಬ ಆಟಗಾರನ ಬಗ್ಗೆಯೂ ಅವರಿಗೆ ಉತ್ತಮ ತಿಳುವಳಿಕೆ ಇದೆ” ಎಂದರು.


“ರೋಹಿತ್‌ಗೆ ಪ್ರತಿಯೊಬ್ಬ ಆಟಗಾರನ ಇಷ್ಟ ಮತ್ತು ಇಷ್ಟವಿಲ್ಲದಿರುವಿಕೆ ತಿಳಿದಿದೆ. ಅವರ ತಿಳುವಳಿಕೆ ತುಂಬಾ ಉತ್ತಮವಾಗಿದೆ. ಪ್ರತಿಯೊಬ್ಬ ಆಟಗಾರನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನವನ್ನು ಮಾಡುತ್ತಾರೆ” ಎಂದರು.


ಇಡೀ ವಿಶ್ವಕಪ್‌’ನಲ್ಲಿ ಅಶ್ವಿನ್ ಆಡಿದ್ದು ಒಂದೇ ಒಂದು ಪಂದ್ಯ. ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆದ ಭಾರತದ ಮೊದಲ ಪಂದ್ಯದಲ್ಲಿ ಅವರು 34 ರನ್‌’ಗಳಿಗೆ ಒಂದು ವಿಕೆಟ್ ಪಡೆದರು.


ಇದನ್ನೂ ಓದಿ: ಬಿಳಿಕೂದಲಿಗೆ ಶಾಶ್ವತ ಕಪ್ಪು ಬಣ್ಣ ನೀಡುತ್ತೆ ಆಲೂಗಡ್ಡೆ ಸಿಪ್ಪೆ! ಹೀಗೆ ಬಳಸಿದ್ರೆ 5 ನಿಮಿಷದಲ್ಲಿ ರಿಸಲ್ಟ್ ಪಕ್ಕಾ


'ಫೈನಲ್‌ನಲ್ಲಿ ನಾನು ಆಡುವ ವಿಷಯಕ್ಕೆ ಸಂಬಂಧಿಸಿದಂತೆ, ತಂಡದ ಸಂಯೋಜನೆ ಮುಖ್ಯ. ಇತರ ವಿಷಯಗಳು ನಂತರ ಬರುತ್ತವೆ. ಬೇರೊಬ್ಬರ ಸ್ಥಾನದಲ್ಲಿ ನಿಂತು, ಆ ವ್ಯಕ್ತಿಯ ದೃಷ್ಟಿಕೋನದಿಂದ ವಿಷಯಗಳನ್ನು ನೋಡಬೇಕು. ರೋಹಿತ್ ಸ್ಥಾನದಲ್ಲಿ ನಾನಿದ್ದರೆ ಸತತವಾಗಿ ಗೆಲ್ಲುವ ತಂಡದಲ್ಲಿ ಬದಲಾವಣೆ ಮಾಡುವ ಮುನ್ನ 100 ಬಾರಿ ಯೋಚಿಸುತ್ತಿದ್ದೆ. ತಂಡದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ನಿಜ ಹೇಳಬೇಕೆಂದರೆ ರೋಹಿತ್‌ ಆಲೋಚನೆ ನನಗೆ ಅರ್ಥವಾಯಿತು. ಫೈನಲ್‌’ನಲ್ಲಿ ಆಡುವುದು ದೊಡ್ಡ ವಿಷಯ ಮತ್ತು ನಾನು ಅದಕ್ಕೆ ಸಿದ್ಧನಾಗಿದ್ದೆ. ಆದರೆ ಅದೇ ಸಮಯದಲ್ಲಿ ನಾನು ಹೊರಗೆ ಕುಳಿತು ತಂಡವನ್ನು ಪ್ರೋತ್ಸಾಹಿಸುತ್ತಾ, ಆಟಗಾರರಿಗೆ ನೀರು ನೀಡಲು ಸಿದ್ಧನಾಗಿದ್ದೆ” ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ