ನವದೆಹಲಿ: ಮದನ್ ಲಾಲ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯು ಚೇತನ್ ಶರ್ಮಾ, ಅಬೆ ಕುರುವಿಲ್ಲಾ ಮತ್ತು ದೇಬಾಶಿಶ್ ಮೊಹಂತಿ ಅವರನ್ನು ಹಿರಿಯ ಆಯ್ಕೆ ಸಮಿತಿಯ ಹೊಸ ಸದಸ್ಯರನ್ನಾಗಿ ಗುರುವಾರ ಮಧ್ಯಾಹ್ನ ಹೆಸರಿಸಿದೆ.


COMMERCIAL BREAK
SCROLL TO CONTINUE READING

ಅಹಮದಾಬಾದ್‌ನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯ ನಂತರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ಹೆಸರುಗಳನ್ನು ಘೋಷಿಸಲಾಗಿದೆ.


ಕೋಟ್ಲಾದಲ್ಲಿ ಅರುಣ್ ಜೈಟ್ಲಿ ಮೂರ್ತಿ ಸ್ಥಾಪನೆ ವಿಚಾರ, ಬಿಷನ್ ಸಿಂಗ್ ಬೇಡಿ ರಾಜೀನಾಮೆ


ಹಿರಿತನದ ಆಧಾರದ ಮೇಲೆ ಹಿರಿಯ ಪುರುಷರ ಆಯ್ಕೆ ಸಮಿತಿಯ ಅಧ್ಯಕ್ಷರ ಪಾತ್ರಕ್ಕಾಗಿ ಚೇತನ್ ಶರ್ಮಾ ಅವರನ್ನು ಸಮಿತಿ ಶಿಫಾರಸು ಮಾಡಿದೆ (ಒಟ್ಟು ಟೆಸ್ಟ್ ಪಂದ್ಯಗಳ ಸಂಖ್ಯೆ). ಸಿಎಸಿ ಒಂದು ವರ್ಷದ ಅವಧಿಯ ನಂತರ ಅಭ್ಯರ್ಥಿಗಳನ್ನು ಪರಿಶೀಲಿಸುತ್ತದೆ ಮತ್ತು ಬಿಸಿಸಿಐಗೆ ಶಿಫಾರಸುಗಳನ್ನು ಮಾಡುತ್ತದೆ.ಮೂವರು ಹೊಸ ಸದಸ್ಯರು ಆಯ್ಕೆ ಸಮಿತಿಯಲ್ಲಿ ಸುನಿಲ್ ಜೋಶಿ ಮತ್ತು ಹರ್ವಿಂದರ್ ಸಿಂಗ್ ಅವರನ್ನು ಸೇರಿಕೊಳ್ಳಲಿದ್ದಾರೆ.


IPL 2022: ಎರಡು ಹೊಸ ತಂಡಗಳಿಗೆ ಬಿಸಿಸಿಐ ಅನುಮೋದನೆ


ಅಂತಿಮಗೊಳಿಸಿದ 11 ಅಭ್ಯರ್ಥಿಗಳನ್ನು ಮದನ್ ಲಾಲ್, ರುದ್ರ ಪ್ರತಾಪ್ ಸಿಂಗ್ ಮತ್ತು ಸುಲಕ್ಷನ ನಾಯಕ್ ಅವರನ್ನೊಳಗೊಂಡ ಬಿಸಿಸಿಐನ ಸಿಎಸಿ ಗುರುವಾರ ಸಂದರ್ಶಿಸಿದೆ.ಈ ಮೊದಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯ ಸಂಯೋಜನೆಗೆ ವಲಯ ಮಾನದಂಡಗಳನ್ನು ಉಳಿಸಿಕೊಳ್ಳಲು ನಿರ್ಧರಿಸಿತು. ಜತಿನ್ ಪರಂಜಪೆ (ಪಶ್ಚಿಮ ವಲಯ), ದೇವಾಂಗ್ ಗಾಂಧಿ (ಪೂರ್ವ) ಮತ್ತು ಸರಂದೀಪ್ ಸಿಂಗ್ (ಉತ್ತರ) ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.


'ಆರ್ ಅಶ್ವಿನ್ ನನ್ನನ್ನು ಜೊತೆಗೆ ಹೋಲಿಕೆ ಮಾಡಿಕೊಳ್ಳಲು ಹೋಗುವುದಿಲ್ಲ'


ವರದಿಗಳ ಪ್ರಕಾರ, ಅಜಿತ್ ಅಗರ್ಕರ್, ಅಬೆ ಕುರುವಿಲ್ಲಾ ಮತ್ತು ನಯನ್ ಮೊಂಗಿಯಾ ಅವರು ಪಶ್ಚಿಮ ವಲಯದಿಂದ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಚೇತನ್ ಶರ್ಮಾ, ಮನಿಂದರ್ ಸಿಂಗ್, ವಿಜಯ್ ದಹಿಯಾ, ಅಜಯ್ ರಾತ್ರ ಮತ್ತು ನಿಖಿಲ್ ಚೋಪ್ರಾ ಉತ್ತರ ವಲಯದಿಂದ ಅರ್ಜಿ ಸಲ್ಲಿಸಿದರು. ಶಿವ್ ಸುಂದರ್ ದಾಸ್, ದೇಬಾಶಿಶ್ ಮೊಹಂತಿ ಮತ್ತು ರಣದೇಬ್ ಬೋಸ್ ಪೂರ್ವ ವಲಯದಿಂದ ಅರ್ಜಿ ಸಲ್ಲಿಸಿದರು.