Hardik Pandya: ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು ಗೊತ್ತೇ ಇದೆ. ಇನ್ನು ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಅಭ್ಯಾಸ ನಡೆಸಿದ್ದು, ಈ ಸಂದರ್ಭದಲ್ಲಿ ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಇತರ ಕೋಚಿಂಗ್ ಸಿಬ್ಬಂದಿ  ಮೇಲ್ವಿಚಾರಣೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 43ರ ವಯಸ್ಸಿನಲ್ಲಿ 4ನೇ ಮದುವೆಗೆ ರೆಡಿಯಾದ ದಕ್ಷಿಣದ ಖ್ಯಾತ ನಟಿ!


ಆದರೆ ತರಬೇತಿ ಅವಧಿಯಲ್ಲಿ ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಸಹಾಯಕ ಕೋಚ್ ಅಭಿಷೇಕ್ ನಾಯರ್ ನಡುವೆ ಜಗಳ ನಡೆದಿದ್ದು, ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಜೊತೆ ಹಾರ್ದಿಕ್ ದೀರ್ಘಕಾಲ ಮಾತನಾಡಿದ್ದಾರೆ. ನಂತರ ಇಬ್ಬರು ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರಿಗೆ ಬೌಲಿಂಗ್‌ ಮಾಡಿದ್ದಾರೆ.


ಹೊಸ ಸಹಾಯಕ ಕೋಚ್ ಅಭಿಷೇಕ್ ನಾಯರ್ ಮೇಲ್ವಿಚಾರಣೆಯಲ್ಲಿ ಹಾರ್ದಿಕ್ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಸಿಮ್ಯುಲೇಶನ್ ಅಭ್ಯಾಸದಲ್ಲಿ ಇಬ್ಬರ ನಡುವೆ ಜಗಳ ನಡೆದಂತೆ ತೋರುತ್ತಿದೆ.


ಇದನ್ನೂ ಓದಿ: ನಿಂಬೆರಸಕ್ಕೆ ಈ ಎಣ್ಣೆ ಬೆರೆಸಿ ಹಚ್ಚಿದರೆ ಬಿಳಿ ಕೂದಲು 10 ನಿಮಿಷದಲ್ಲಿ ಕಪ್ಪುಬಣ್ಣಕ್ಕೆ ತಿರುಗುತ್ತೆ! ಮತ್ತೆಂದೂ ಬರುವುದೇ ಇಲ್ಲ


ನೆಟ್ ಸೆಷನ್ʼ​ನಲ್ಲಿ ಹಾರ್ದಿಕ್​ ಬ್ಯಾಟಿಂಗ್​ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಹಾರ್ದಿಕ್ ಪಾಯಿಂಟ್ʼ​ನತ್ತ ಶಾಟ್ ಹೊಡೆದು ಇದು ಬೌಂಡರಿ ಎಂದರು. ಆದರೆ ಅದಕ್ಕೆ ಅಭಿಷೇಕ್ ನಾಯರ್ ಒಪ್ಪದೆ, ಆಗ ನಾನು ಅಲ್ಲಿ ಫೀಲ್ಡರ್​ ನಿಲ್ಲಿಸುತ್ತಿದ್ದೆ ಎಂದರು. ಫೀಲ್ಡರ್​ ನಿಲ್ಲಿಸಿದ್ರೂ ಇದು ಫೋರ್​ ಹೋಗುತ್ತಿತ್ತು ಎಂದು ಹಾರ್ದಿಕ್​ ವಾದಿಸಿದ್ದಾರೆ ಎಂದು ಹೇಳಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ