ನವದೆಹಲಿ: ಇಂದೋರ್ ನಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಮೊದಲು ಫಿಲ್ಡಿಂಗ್ ಗೆ ಇಳಿಯಿತು.


COMMERCIAL BREAK
SCROLL TO CONTINUE READING

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಿರ್ಧಾರ ಸರಿ ಎನ್ನುವುದು ಆರಂಭದಲ್ಲೇ ಸ್ಪಷ್ಟವಾಯಿತು. ಶ್ರೀಲಂಕಾ ತಂಡದ ಮೊತ್ತ 38 ಆಗಿದ್ದಾಗ ಅವಿಷ್ಕಾ ಫೆರ್ನಾಂಡೊ ಅವರ ವಿಕೆಟ್ ಕಳೆದುಕೊಂಡಿತು. ಇದಾದ ನಂತರ ಭಾರತದ ಬೌಲರಗಳು ಮಾರಕವಾಗಿ ಪರಿಣಮಿಸಿದರು. ಶಾರ್ದುಲ್ ಠಾಕೂರ್ 3, ನವದೀಪ್ ಶೈನಿ 2, ಕುಲದೀಪ್ ಯಾದವ್ 2, ವಿಕೆಟ್ ಗಳನ್ನು ಪಡೆಯುವ ಮೂಲಕ  ಶ್ರೀಲಂಕಾವನ್ನು 20 ಓವರ್ ಗಳಲ್ಲಿ 142 ರನ್ ಗಳಿಗೆ ಕಟ್ಟಿ ಹಾಕಿದರು.



ಇದಾದ ನಂತರ 143 ರನ್ ಗಳ ಗುರಿಯನ್ನು ಬೆನ್ನತ್ತಿದ ಭಾರತ ತಂಡದ ಪರವಾಗಿ ಲೋಕೇಶ್ ರಾಹುಲ್ 45 ಹಾಗೂ ಶಿಖರ್ ಧವನ್ 32 ರನ್ ಗಳನ್ನು ಗಳಿಸುವುದರ ಮೂಲಕತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಕೊನೆಯಲ್ಲಿ ವಿರಾಟ್ ಕೊಹ್ಲಿ 30 ಹಾಗೂ ಶ್ರೇಯಸ್ ಅಯ್ಯರ್ 34 ರನ್ ಗಳಿಸಿದರು.