Jasprith Bumrah and KL Rahul: ಟೀಂ ಇಂಡಿಯಾಗೆ ಶುಭ ಸುದ್ದಿಯೊಂದು ಹೊರಬಿದ್ದಿದೆ. 2023ರ ವಿಶ್ವಕಪ್‌ ಗೂ ಮುನ್ನ, ಏಷ್ಯಾಕಪ್ 2023ರ ಟೂರ್ನಿಯ ಮೂಲಕ ಭಾರತದ ಈ ಇಬ್ಬರು ಮಾರಕ ಕ್ರಿಕೆಟಿಗರು ಬಹಳ ಸಮಯದ ನಂತರ ಟೀಮ್ ಇಂಡಿಯಾ ಪ್ರವೇಶಿಸಲಿದ್ದಾರೆ. ಈ ಇಬ್ಬರು ಅಪಾಯಕಾರಿ ಕ್ರಿಕೆಟಿಗರ ಸೇರ್ಪಡೆಯ ನಂತರ, 2023 ರ ವಿಶ್ವಕಪ್‌ ನಲ್ಲಿ ಭಾರತದ ಶಕ್ತಿ ನಾಲ್ಕರಿಂದ ಐದು ಪಟ್ಟು ಹೆಚ್ಚಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನಿವೃತ್ತಿಯ ಅಂಚಿನಲ್ಲಿರುವ ಈ 3 ಆಟಗಾರರಿಂದಲೇ ಟೀಂ ಇಂಡಿಯಾ ಗೆಲ್ಲುತ್ತೆ ವಿಶ್ವಕಪ್ ಟ್ರೋಫಿ! ಸಿಗುತ್ತಾ ಅವಕಾಶ?


2023 ರ ವಿಶ್ವಕಪ್‌ ಗೆ ಮೊದಲು ದೇಶದ ಇಬ್ಬರು ದೊಡ್ಡ ಮ್ಯಾಚ್ ವಿನ್ನಿಂಗ್ ಆಟಗಾರರು ಟೀಮ್ ಇಂಡಿಯಾವನ್ನು ಪ್ರವೇಶಿಸಲಿದ್ದಾರೆ ಎಂದು ಭಾರತದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಹೊರಬೀಳುತ್ತಿದೆ. ಜಸ್ಪ್ರೀತ್ ಬುಮ್ರಾ ಮತ್ತು ಕೆಎಲ್ ರಾಹುಲ್ ವಿಶ್ವಕಪ್‌ಗೂ ಮುನ್ನವೇ ಭಾರತದ ಏಕದಿನ ತಂಡದ ಭಾಗವಾಗಲಿದ್ದಾರೆ.


ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಜಸ್ಪ್ರೀತ್ ಬುಮ್ರಾ ಮತ್ತು ಕೆಎಲ್ ರಾಹುಲ್ ಏಷ್ಯಾಕಪ್ 2023 ಮೂಲಕ ಟೀಮ್ ಇಂಡಿಯಾಕ್ಕೆ ಮರಳಲಿದ್ದಾರೆ. ಈ ವರ್ಷ ಏಷ್ಯಾ ಕಪ್ 2023 ಪಂದ್ಯಾವಳಿಯನ್ನು ODI ಸ್ವರೂಪದಲ್ಲಿ ಆಡಲಾಗುತ್ತದೆ. 2023 ರ ಏಷ್ಯಾ ಕಪ್ ಅನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ಆತಿಥ್ಯ ವಹಿಸಲಿದೆ.


ಏಷ್ಯಾ ಕಪ್ 2023 ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ಜಸ್ಪ್ರೀತ್ ಬುಮ್ರಾ ಸೆಪ್ಟೆಂಬರ್ 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದು, ಆ ಬಳಿಕ 9 ತಿಂಗಳ ಕಾಲ ಭಾರತೀಯ ಕ್ರಿಕೆಟ್ ತಂಡದಿಂದ ದೂರವಿದ್ದರು. ಜಸ್ಪ್ರೀತ್ ಬುಮ್ರಾ ಅವರಿಗೆ ನ್ಯೂಜಿಲೆಂಡ್‌ ನಲ್ಲಿ ಯಶಸ್ವಿ ಬೆನ್ನಿನ ಶಸ್ತ್ರಚಿಕಿತ್ಸೆ ನಡೆದಿದ್ದು, ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಏಷ್ಯಾ ಕಪ್ 2023 ರಲ್ಲಿ ಜಸ್ಪ್ರೀತ್ ಬುಮ್ರಾ ವಾಪಸಾತಿಯೊಂದಿಗೆ, ಜಯದೇವ್ ಉನದ್ಕತ್, ಉಮ್ರಾನ್ ಮಲಿಕ್ ಮತ್ತು ಮುಖೇಶ್ ಕುಮಾರ್ ಅವರಂತಹ ವೇಗದ ಬೌಲರ್‌ಗಳು ಟೀಮ್ ಇಂಡಿಯಾದಿಂದ ದೂರ ಉಳಿಯುವ ಭೀತಿ ಹೆಚ್ಚಾಗಿದೆ.


ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ, ಕೆಎಲ್ ರಾಹುಲ್ ಕೂಡ ಏಷ್ಯಾ ಕಪ್ 2023 ಟೂರ್ನಿಯ ಮೂಲಕ ಟೀಮ್ ಇಂಡಿಯಾದಲ್ಲಿ ಪುನರಾಗಮನ ಮಾಡಲಿದ್ದಾರೆ. ಕೆಎಲ್ ರಾಹುಲ್ ಜತೆಗೂಡಿದ ನಂತರ ಟೀಂ ಇಂಡಿಯಾದ ಬಲ ನಾಲ್ಕೈದು ಪಟ್ಟು ಹೆಚ್ಚಲಿದೆ. ರಿಷಬ್ ಪಂತ್ ಅಪಘಾತದ ನಂತರ, ಕೆಎಲ್ ರಾಹುಲ್ ಭಾರತಕ್ಕಾಗಿ ODI ಮತ್ತು T20 ಸ್ವರೂಪದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಆಡುತ್ತಿದ್ದಾರೆ. KL ರಾಹುಲ್ IPL 2023 ರಲ್ಲಿ ಗಾಯಗೊಂಡಿದ್ದರು. ಆ ಬಳಿಕ ಫಿಟ್ ಆಗಿ ಏಷ್ಯಾ ಕಪ್ 2023 ರಲ್ಲಿ ಮರಳಲು ಸಿದ್ಧರಾಗಿದ್ದಾರೆ.


ಇದನ್ನೂ ಓದಿ: ಮೊದಲ ಟೆಸ್ಟ್’ನಲ್ಲೇ 5 ವಿಕೆಟ್ ಕಬಳಿಸಿದ 19 ವರ್ಷದ ಈ ಆಟಗಾರನಿಗೆ ಕೊನೆ ಕ್ಷಣದಲ್ಲಿ ಮಣೆ ಹಾಕಿದ ಸಮಿತಿ!


ಜಸ್ಪ್ರೀತ್ ಬುಮ್ರಾ ಮತ್ತು ಕೆಎಲ್ ರಾಹುಲ್ ಇಬ್ಬರೂ ವಿಶ್ವಕಪ್ 2023 ರ ಆಯ್ಕೆಗೆ ಲಭ್ಯವಿರುತ್ತಾರೆ. ಈ ಇಬ್ಬರು ಆಟಗಾರರನ್ನು ಹೊರತುಪಡಿಸಿ, ಶ್ರೇಯಸ್ ಅಯ್ಯರ್ ಅವರ ಗಾಯದ ಅಪ್ಡೇಟ್ ಇನ್ನೂ ಬರಬೇಕಿದೆ. ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಬೆನ್ನುನೋವಿಗೆ ತುತ್ತಾಗಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.