Ashwin Talks About KL Rahul: ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಅವರ ನಿವೃತ್ತಿ ಬಳಿಕ ಟೀಂ ಇಂಡಿಯಾದಲ್ಲಿ ಫಿನಿಶರ್ ಸ್ಥಾನ ತುಂಬುತ್ತಿರುವ ಆಟಗಾರನ ಬಗ್ಗೆ ಟೀಂ ಇಂಡಿಯಾದ ರೈಟ್ ಆರ್ಮ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ಭಾರತದ ಈ ಕ್ರಿಕೆಟಿಗನೆಂದರೆ ತುಂಬಾ ಇಷ್ಟ, ಈತನಲ್ಲಿ ನನ್ನನ್ನು ನಾನು ಕಂಡೆ”: ವಿವಿಯನ್ ರಿಚರ್ಡ್ಸ್


ಟೀಂ ಇಂಡಿಯಾದಲ್ಲಿ ಫಿನಿಶರ್ ಸ್ಥಾನ ತುಂಬುತ್ತಿರುವ ಏಕೈಕ ಆಟಗಾರನೆಂದರೆ ಅದು ಕೆಎಲ್ ರಾಹುಲ್. “ಪರಿಣತಿಯೊಂದಿಗೆ ಆ ಸ್ಥಾನಕ್ಕೆ ನ್ಯಾಯ ನೀಡಿದ್ದಾರೆ. ಮುಂಬರುವ ಏಷ್ಯಾ ಕಪ್ 2023 ರ ಸಮಯದಲ್ಲಿ ಭಾರತಕ್ಕೆ ಐದನೇ ಸ್ಥಾನದಲ್ಲಿ ಖಚಿತವಾಗಿ ಅವರು ಆಡಿದರೆ ಉತ್ತಮ” ಎಂದು ಆರ್ ಅಶ್ವಿನ್ ಹೇಳಿದ್ದಾರೆ.


ರಾಹುಲ್ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಬಹುಮುಖ ಕ್ರಿಕೆಟಿಗರಾಗಿ ಕೊಡುಗೆ ನೀಡುತ್ತಿದ್ದಾರೆ, ಬ್ಯಾಟಿಂಗ್ ಕ್ರಮಾಂಕದಲ್ಲಿ ಹಲವಾರು ವಿಭಿನ್ನ ಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


ಮುಂಬರುವ ಏಷ್ಯಾಕಪ್ ಮತ್ತು ವಿಶ್ವಕಪ್‌’ಗೆ ಸಿದ್ಧರಾಗಲು ರಾಹುಲ್ ಕಳೆದ ಕೆಲವು ತಿಂಗಳಿನಿಂದ ಫಿಟ್ನೆಸ್ ಬಗ್ಗೆ ಮುತುವರ್ಜಿ ವಹಿಸುತ್ತಿದ್ದಾರೆ, ಇನ್ನು ಏಷ್ಯಾಕಪ್‌’ನ 17 ಸದಸ್ಯರ ತಂಡದಲ್ಲಿ ಕರ್ನಾಟಕದ ಬ್ಯಾಟರ್‌’ಗೆ ಸ್ಥಾನ ಸಿಕ್ಕಿರುವುದು ಸಂತಸದ ಸಂಗತಿ.


ಇದನ್ನೂ ಓದಿ: 2011ರಲ್ಲಿ ವಿಶ್ವಕಪ್ ಗೆದ್ದಿದ್ದು ಧೋನಿಯಿಂದಲ್ಲ, ಈ ಆಟಗಾರರ ಬ್ಯಾಟಿಂಗ್-ಬೌಲಿಂಗ್’ನಿಂದ…!


ಅಶ್ವಿನ್ ಯೂಟ್ಯೂಬ್ ಚಾನೆಲ್‌’ವೊಂದರ ಸಂದರ್ಶನಲ್ಲಿ ಮಾತನಾಡುತ್ತಾ ಈ ಬಗ್ಗೆ ಹೇಳಿದ್ದಾರೆ. “ಧೋನಿ ಮತ್ತು ಯುವರಾಜ್ ಅವರ ನಿವೃತ್ತಿಯ ನಂತರ ಭಾರತವು ಮಧ್ಯಮ ಕ್ರಮಾಂಕದ ಕಾಯುತ್ತಿತ್ತು. ರಾಹುಲ್ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ ಮತ್ತು ತಂಡದಲ್ಲಿ ನಂ.5 ಗೆ ಖಚಿತವಾದ ಆಟಗಾರ ಎಂದೆನಿಸಿಕೊಂಡಿದ್ದಾರೆ” ಎಂದು ಆಫ್ ಸ್ಪಿನ್ನರ್ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.