ನವದೆಹಲಿ: ಸ್ವಯಂಘೋಷಿತ ದೇವಮಾನ ಸ್ವಾಮಿ ನಿತ್ಯಾನಂದ ಅವರು ತಮ್ಮದೇ ದೇಶವನ್ನು ಸೃಷ್ಟಿಸಲು ಹೊರಟಿದ್ದಾರೆ.


COMMERCIAL BREAK
SCROLL TO CONTINUE READING

ಈಗ ಅದರ ಭಾಗವಾಗಿ ಧ್ವಜ, ಸಂವಿಧಾನ ಮತ್ತು ಲಾಂಛನವನ್ನು ವಿನ್ಯಾಸಗೊಳಿಸಿದ್ದಾರೆ ಎಂದು ಹೇಳಿಕೊಂಡ ನಂತರ ಭಾರತೀಯ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವರು ಆ ಸ್ಥಳಕ್ಕೆ ಹೋಗಲು ವೀಸಾ ಬಗ್ಗೆ ವಿಚಾರಿಸಿದ್ದಾರೆ. "ವೀಸಾ ಪಡೆಯುವ ಕಾರ್ಯವಿಧಾನ ಏನು ?? ಅಥವಾ ಆಗಮನದಲ್ಲಿದೆಯೇ? ಎಂದು ಅಶ್ವಿನ್ ಬುಧವಾರ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.



ಅಹಮದಾಬಾದ್‌ನಲ್ಲಿ ತನ್ನ ಆಶ್ರಮವನ್ನು ನಡೆಸಲು ಅನುಯಾಯಿಗಳಿಂದ ದೇಣಿಗೆ ಸಂಗ್ರಹಿಸಲು ಮಕ್ಕಳನ್ನು ಅಪಹರಿಸಿದ ಆರೋಪದಲ್ಲಿ ಗುಜರಾತ್ ಪೊಲೀಸರು ನಿತ್ಯಾನಂದನನ್ನು ಹುಡುಕುತ್ತಿದ್ದರೂ, ಕೈಲಾಸಾ.ಆರ್ಗ್ ಎಂಬ ವೆಬ್‌ಸೈಟ್ ನಲ್ಲಿ ಅವರು ತಮ್ಮದೇ ಆದ ದೇಶವನ್ನು ಘೋಷಿಸಿಕೊಂಡಿದ್ದಾರೆ.


ಭಾರತದಿಂದ ಪರಾರಿಯಾದ ನಿತ್ಯಾನಂದ 'ಹಿಂದೂ ಸಾರ್ವಭೌಮ ರಾಷ್ಟ್ರ' ಎಂದು ಘೋಷಿಸಿದ್ದಾನೆ ಮತ್ತು ಪ್ರಧಾನ ಮಂತ್ರಿಯೊಂದಿಗೆ ಕ್ಯಾಬಿನೆಟ್ ಕೂಡ ಇದೆ ಎಂದು ವೆಬ್‌ಸೈಟ್ ಘೋಷಿಸಿಕೊಂಡಿದೆ. ಈ ದೇಶಕ್ಕಾಗಿ ದೇಣಿಗೆ ನೀಡುವಂತೆ ಮತ್ತು ಅದರ ಮೂಲಕ ಶ್ರೇಷ್ಠ ಹಿಂದೂ ರಾಷ್ಟ್ರ ಕೈಲಾಸಾದ ಪೌರತ್ವವನ್ನು ಪಡೆಯುವ ಅವಕಾಶವನ್ನೂ ಕೋರಿದೆ ಎನ್ನಲಾಗಿದೆ.