ನವದೆಹಲಿ: ಬೆಂಗಳೂರು ತಂಡವು ಇಲ್ಲಿನ ಫಿರೋಜ್ ಜಾ ಕೋಟ್ಲಾ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. 


COMMERCIAL BREAK
SCROLL TO CONTINUE READING

ಟಾಸ್ ಸೋತು ಇನ್ನಿಂಗ್ಸ್ ಆರಂಭಿಸಿದ ದೆಹಲಿ ತಂಡವು  20 ಓವರ್ ಗಳಲ್ಲಿ  ನಾಲ್ಕು ವಿಕೆಟ್ 181 ರನ್ ಗಳಿಸಿತು. ದೆಹಲಿ ಪರ ರಿಶಬ್ ಪಂತ್ (61) ಮತ್ತು ಅಭಿಷೇಕ್ ಶರ್ಮಾ ಅವರ(46)ಅವರ ಇನ್ನಿಂಗ್ಸ್ ನೆರವಿನಿಂದ ಉತ್ತಮ ಮೊತ್ತ ಗಳಿಸಲು ಸಾಧ್ಯವಾಯಿತು.




182 ರನ್ ಗಳ ಗುರಿಯನ್ನು ಬೆನ್ನತ್ತಿದ ಬೆಂಗಳೂರು ತಂಡವು ನಾಯಕ ವಿರಾಟ್ ಕೊಹ್ಲಿ(70) ಮತ್ತು ಡಿವಿಲಿಯರ್ಸ್(72) ರನ್ ಗಳ ನೆರವಿನಿಂದ 19 ಓವರ್ ಗಳಲ್ಲಿ  ಐದು ವಿಕೆಟ್ ಕಳೆದುಕೊಂಡು  187 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿತು.