ಮುಂಬೈ: ದೇಶದ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಗುರುವಾರ ಬಾಂದ್ರಾ ಉಪನಗರದಲ್ಲಿನ 'ಮಕ್ಕಳ ಉದ್ಯಾನ'ವನ್ನು ಉದ್ಘಾಟಿಸಿದರು. 


COMMERCIAL BREAK
SCROLL TO CONTINUE READING

ರಾಜ್ಯಸಭಾ ಸದಸ್ಯರಾಗಿರುವ ಸಚಿನ್ ತಂಡೂಲ್ಕರ್ ತಮ್ಮ MPLAD ನಿಧಿ ಬಳಸಿ ಈ ಉದ್ಯಾನವನ್ನು ಪುನರ್ ನಿರ್ಮಿಸಿದ್ದಾರೆ.


ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿನ್,   "ಮೊದಲಿಗೆ ಇದು ಆಟದ ಮೈದಾನವಾಗಿತ್ತು, ನಂತರದ ದಿನಗಳಲ್ಲಿ ಇಲ್ಲಿ ಕಸ ಹಾಕುತ್ತಿದ್ದರು. ಈ ಪ್ರದೇಶದಲ್ಲಿ ಮಕ್ಕಳ ಉದ್ಯಾನವನ್ನು ಪುನಃಸ್ಥಾಪಿಸುವ ಬಗ್ಗೆ ನನಗೆ ಯೋಚನೆ ಬಂದಿತು." ಈ ಹಿನ್ನೆಲೆಯಲ್ಲಿ ನನ್ನ ಕೆಲವು ಹಳೆಯ ಸ್ನೇಹಿತರನ್ನು ಭೇಟಿಯಾಗಿ ಉದ್ಯಾನವನ ಪುನಃಸ್ಥಾಪಿಸುವ ಕೆಲಸ ಮಾಡಲಾಯಿತು ಎಂದು ಹೇಳಿದರು.