Sarfaraz Khan: ಭಾರತದ ಶ್ರೀಲಂಕಾ ಪ್ರವಾಸ ಕೊನೆಗೊಂಡಿದೆ. ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಅವಮಾನಕರ ಸೋಲನ್ನು ಎದುರಿಸಬೇಕಾಯಿತು. ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಈ ವರ್ಷ ಮುಂಬರುವ ಬುಚಿ ಬಾಬು ಬಹುದಿನದ ಪಂದ್ಯಾವಳಿಯಲ್ಲಿ ಮುಂಬೈ ಪರ ಪಂದ್ಯ ಆಡುವುದನ್ನು ಖಚಿತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಐವರು ವಿದೇಶಿ ಕ್ರಿಕೆಟಿಗರೆಂದರೆ ಭಾರತೀಯರ ಪಾಲಿಗೆ ವಿಲನ್‌ʼಗಳಿದ್ದಂತೆ! ಕಂಡರೆ ಉರಿದುಬೀಳ್ತಾರೆ


ಆಗಸ್ಟ್ 27ರಿಂದ 30ರವರೆಗೆ ಕೊಯಮತ್ತೂರಿನಲ್ಲಿ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ​​ಇಲೆವೆನ್ ವಿರುದ್ಧ ಮುಂಬೈ ಸಿಎ ಇಲೆವೆನ್ ಪರ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಆಡಲಿದ್ದಾರೆ.


ಮುಂಬೈ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿ, “ಸೂರ್ಯಕುಮಾರ್ ಮುಂಬೈ ಪರ ಎರಡನೇ ಪಂದ್ಯ ಆಡಲಿದ್ದಾರೆ. ಅವರು ಭಾರತದ ಪರ ಎಲ್ಲಾ ಮೂರು ಸ್ವರೂಪಗಳನ್ನು ಆಡುತ್ತಾರೆ. ಆದರೆ ಬಿಡುವಿರುವಾಗ ಮುಂಬೈ ತಂಡದ ಪರ ಲಭ್ಯವಿರುತ್ತಾರೆ. ರಣಜಿ ಟ್ರೋಫಿಯ ಹೊರತಾಗಿ, ಅವರು ತಂಡದ ಯುವಕರಿಗೆ ಸ್ಫೂರ್ತಿ ನೀಡಲು ಬುಚ್ಚಿ ಬಾಬು, ಕೆ ಎಸ್‌ ಸಿ ಎ (ಗೋಲ್ಡ್ ಕಪ್) ನಲ್ಲಿ ಆಡಲಿದ್ದಾರೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ: ಅದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಸಮಯ: ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಶಾಕಿಂಗ್‌ ಹೇಳಿಕೆ


ಇನ್ನು ಟೆಸ್ಟ್ ಸ್ಪೆಷಲಿಸ್ಟ್ ಸರ್ಫರಾಜ್ ಖಾನ್ ಅವರನ್ನು ಮುಂಬೈ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಒಂದು ಸಮಯದಲ್ಲಿ ಈ ಆಟಗಾರನಿಗೆ ಫಿಟ್ನೆಸ್‌ ಇಲ್ಲ, ಬೊಜ್ಜು ತುಂಬಿದೆ ಎಂದು ಟೀಂ ಇಂಡಿಯಾದಿಂದ ಹೊರಗಿಡಲಾಗಿತ್ತು. ಆದರೆ ಇದೀಗ ಈ ಆಟಗಾರನಿಗೆ ಮುಂಬೈ ತಂಡದ ನಾಯಕತ್ವ ನೀಡಲಾಗಿದೆ. ಅಷ್ಟೇ ಅಲ್ಲದೆ ಈತನ ನಾಯಕತ್ವದಲ್ಲಿ ಸೂರ್ಯಕುಮಾರ್ ಆಡಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.