ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಗೆ ಉಮ್ರಾನ್ ಮಲಿಕ್ ಅವರನ್ನು ಹೆಸರಿಸಿದಾಗಿನಿಂದಲೂ ಹೆಚ್ಚು ಸುದ್ದಿಯಲ್ಲಿದ್ದಾರೆ, ಹೌದು, ಈ ಆಟಗಾರ ನಿಖರ ಮತ್ತು ವೇಗದ ಬೌಲಿಂಗ್ ಗೆ ಹೆಸರು ವಾಸಿಯಾಗಿದ್ದಾರೆ.ಈಗ ಅವರ ಬೌಲಿಂಗ್ ಗೆ ಹಲವು ಮಾಜಿ ಆಟಗಾರರು ಕೂಡ ಫಿದಾ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಅವರು ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ವೇಗದ ಎಸೆತ ದಾಖಲಿಸಿದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಅಷ್ಟೇ ಅಲ್ಲದೆ ಸನ್ ರೈಸರ್ಸ್ ಹೈದರಾಬಾದ್ ಪರವಾಗಿ 22.50 ರ ಸರಾಸರಿ ಮೂಲಕ 24 ವಿಕೆಟ್ ಕಬಳಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು.


ಇದನ್ನೂ ಓದಿ: ಕಾಳಿ ಮಾತೆಯ ಈ ದೇವಾಲಯದಲ್ಲಿ ನೂಡಲ್ಸ್‌ನ್ನು ಪ್ರಸಾದವಾಗಿ ನೀಡ್ತಾರೆ!


ಆದಾಗ್ಯೂ, ಈ ವಾರದ ಆರಂಭದಲ್ಲಿ ಹೊಸದಿಲ್ಲಿಯಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯಕ್ಕಾಗಿ ಯುವ ಆಟಗಾರನಿಗೆ ವಿಶ್ರಾಂತಿ ನೀಡಲಾಗಿತ್ತು.ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ 20 ಐ ಆರಂಭದ ಮೊದಲು ಖಲೀಜ್ ಟೈಮ್ಸ್‌ನೊಂದಿಗೆ ಮಾತನಾಡಿದ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ದಿಲೀಪ್ ವೆಂಗಸರ್ಕಾರ್, ಐಪಿಎಲ್ 2022 ರಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ ನಂತರ ಉಮ್ರಾನ್ ಭಾರತಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: ಕೊಹ್ಲಿ ಮತ್ತು ಬಾಬರ್ ನಡುವೆ ಶ್ರೇಷ್ಠ ಆಟಗಾರ ಯಾರು ? ಆಫ್ರಿದಿ ಹೇಳಿದ್ದು ಹೀಗೆ..!


'ಪ್ರತಿಯೊಬ್ಬರೂ ಆಟದ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ. ಆದರೆ ಐಪಿಎಲ್‌ನಲ್ಲಿ ಆ ರೀತಿಯ ವೇಗ ಮತ್ತು ನಿಖರತೆಯನ್ನು ತೋರಿಸಿದ ನಂತರ ಅವರು ಆಡಲು ಅರ್ಹರು ಎಂದು ನಾನು ಭಾವಿಸುತ್ತೇನೆ.ನೀವು ಸ್ವದೇಶದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವಾಗ, ಅವರಂತಹ ಆಟಗಾರರನ್ನು ಪರೀಕ್ಷಿಸಲು ಇದು ಸರಿಯಾದ ಸಮಯ ಎಂದು ವೆಂಗ ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ.


'ಕಳೆದ 10 ವರ್ಷಗಳಲ್ಲಿ ನಾನು ನೋಡಿದ ಅತ್ಯಂತ ರೋಮಾಂಚಕಾರಿ ನಿರೀಕ್ಷೆಗಳಲ್ಲಿ ಅವರು ಒಬ್ಬರು.ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಅವರು ತುಂಬಾ ಫಿಟ್‌ನಂತೆ ಕಾಣುತ್ತಾರೆ ಮತ್ತು ವೇಗದ ಬೌಲರ್‌ನ ಆಕ್ರಮಣಶೀಲತೆಯನ್ನು ಅವರು ಹೊಂದಿದ್ದಾರೆ. ಅಷ್ಟೇ ಅಲ್ಲದೆ ಅವರು ವೇಗ ಮತ್ತು ನಿಖರತೆಯನ್ನು ಹೊಂದಿದ್ದಾರೆ.ಅವರು ಭಾರತಕ್ಕಾಗಿ ದೀರ್ಘಕಾಲ ಆಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ವೆಂಗ ಸರ್ಕಾರ್ ಉಮ್ರಾನ್ ಬಗ್ಗೆ ಶ್ಲಾಘಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.