Hardik Pandya out of World Cup: 2023ರ ವಿಶ್ವಕಪ್‌’ನಲ್ಲಿ ಸೆಮಿಫೈನಲ್ ತಲುಪಿದ ಭಾರತ ತಂಡಕ್ಕೆ ಭಾರೀ ಆಘಾತವಾಗಿದ್ದು, ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸಂಪೂರ್ಣ ಟೂರ್ನಿಯಿಂದ ಹೊರಬಿದ್ದಿದ್ದಾರೆ.


COMMERCIAL BREAK
SCROLL TO CONTINUE READING

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಅವರು, ಆ ಬಳಿಕ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ಕಾರಣದಿಂದ ಕಳೆದ ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾರ್ದಿಕ್ ಪಾದಕ್ಕೆ ಗಾಯವಾಗಿದ್ದು, ಪುನರ್ವಸತಿಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ.


ಇದನ್ನೂ ಓದಿ: ಮಳೆಯಿಂದ ಪಾಕ್-ಕೀವೀಸ್ ಪಂದ್ಯ ರದ್ದಾದರೆ ಯಾವ ತಂಡ ಸೆಮಿಫೈನಲ್ ಪ್ರವೇಶಿಸುತ್ತೆ ಗೊತ್ತಾ?


ಬದಲಿ ಆಟಗಾರ ಯಾರು?


ಹಾರ್ದಿಕ್ ಪಾಂಡ್ಯ ಅವರ ಸ್ಥಾನಕ್ಕೆ ಪ್ರಸಿದ್ಧ್ ಕೃಷ್ಣ ಅವರನ್ನು ಬದಲಿಯಾಗಿ ಸೇರ್ಪಡೆಗೊಳಿಸಲಾಗಿದೆ. ಇವರು ಕರ್ನಾಟಕ ಮೂಲದವರಾಗಿದ್ದು, ಟೀಂ ಇಂಡಿಯಾ ಬಲ ತುಂಬಲಿದ್ದಾರೆ.  


ಪ್ರಸ್ತುತ ಟೀಂ ಇಂಡಿಯಾ ಸತತ 7 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ತಲುಪಿರುವುದು ಗಮನಾರ್ಹ. ತಂಡವು ತನ್ನ ಮುಂದಿನ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ನವೆಂಬರ್ 5 ರಂದು ಕೋಲ್ಕತ್ತಾದಲ್ಲಿ ಆಡಬೇಕಾಗಿದೆ.


ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ಒಂದು ನಿಮಿಷದ ಆದಾಯ ಎಷ್ಟು ಗೊತ್ತಾ? ಸಾಮಾನ್ಯ ಆಟಗಾರರ ತಿಂಗಳ ವೇತನಕ್ಕಿಂತ ಹೆಚ್ಚೇ..!


ಪ್ರಸಿದ್ಧ್ ಕೃಷ್ಣ ಆಶ್ಚರ್ಯಕರ ಆಯ್ಕೆ:


ಹಾರ್ದಿಕ್ ಪಾಂಡ್ಯ ಬದಲಿಗೆ ಪ್ರಸಿದ್ಧ್ ಕೃಷ್ಣ ತಂಡಕ್ಕೆ ಆಯ್ಕೆಯಾಗಿರುವುದು ಅಚ್ಚರಿ ಮೂಡಿಸಿದೆ. ಏಕೆಂದರೆ ಹಾರ್ದಿಕ್ ಆಲ್ ರೌಂಡರ್ ಮತ್ತು ಕೃಷ್ಣ ವೇಗದ ಬೌಲರ್. ಆಲ್ ರೌಂಡರ್ ಮಾತ್ರ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಇಂದು ಟೂರ್ನಿಯ ಈವೆಂಟ್ ಟೆಕ್ನಿಕಲ್ ಕಮಿಟಿಯಿಂದ ಅನುಮತಿ ಪಡೆದು ಈ ಪ್ರಸಿದ್ಧ್ ಕೃಷ್ಟ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ ಅಜಿತ್ ಅಗರ್ಕರ್ ಸಮಿತಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ