World Cup 2023, India Playing 11: ಸತತ ನಾಲ್ಕನೇ ವಿಶ್ವಕಪ್ ಪಂದ್ಯ ಗೆಲ್ಲುವ ಉತ್ಸಾಹದಲ್ಲಿರುವ ಭಾರತ ನಾಳೆ ಅಂದರೆ ಅಕ್ಟೋಬರ್ 19ರಂದು ಬಾಂಗ್ಲಾ ವಿರುದ್ಧ ಕಣಕ್ಕಿಳಿಯಲಿದೆ. ಇನ್ನು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಲು ಟೀಂ ಇಂಡಿಯಾ ಇಚ್ಛಿಸುತ್ತಿದೆ ಎಂದು ಭಾರತದ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ಭಾರತವನ್ನು ಸೋಲಿಸಿದ್ರೆ ನಿಮ್ಮ ಜೊತೆ ಡೇಟ್ ಮಾಡ್ತೇನೆ”… ಬಾಂಗ್ಲಾ ಆಟಗಾರರಿಗೆ ಪಾಕ್ ನಟಿಯ ಆಫರ್


ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ ತಮ್ಮ ವಿಶ್ವಕಪ್ ಅಭಿಯಾನಕ್ಕೆ ಉತ್ತಮ ಆರಂಭವನ್ನು ಮಾಡಿದ ಭಾರತವು, ಅಫ್ಘಾನಿಸ್ತಾನ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಏಕಪಕ್ಷೀಯ ಗೆಲುವುಗಳನ್ನು ದಾಖಲಿಸಿತ್ತು.


“ಗೆಲುವಿನ ಆರಂಭವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಇಲ್ಲಿಯವರೆಗೆ ನಮ್ಮ ದೃಷ್ಟಿಕೋನದಿಂದ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಮುಂದಿನ ಪಂದ್ಯದಲ್ಲೂ ಇದೇ ವೇಗವನ್ನು ಕಾಯ್ದುಕೊಳ್ಳಲು ನಾವು ಬಯಸುತ್ತೇವೆ. ಶಮಿ ಮತ್ತು ಅಶ್ವಿನ್ ಅವರಂತಹ ಬೌಲರ್‌’ಗಳನ್ನು ತಂಡದಿಂದ ಹೊರಗಿಡುವ ನಿರ್ಧಾರ ಕಷ್ಟ” ಎಂದು ಮಾಂಬ್ರೆ ಒಪ್ಪಿಕೊಂಡಿದ್ದಾರೆ.


ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಈ ಭಾಗಗಳಲ್ಲಿ 2 ದಿನ ಗುಡುಗು-ಮಿಂಚು ಸಹಿತ ಕುಂಭದ್ರೋಣ ಮಳೆ ಭೀತಿ


“ನಿಜ ಹೇಳಬೇಕೆಂದರೆ, ಇದು ಸುಲಭವಲ್ಲ, ಆದರೆ ನಾವು ಎಲ್ಲಾ ಆಟಗಾರರೊಂದಿಗೆ ಮಾತನಾಡುತ್ತೇವೆ. ನಾವು ತಂಡವನ್ನು ಆಯ್ಕೆ ಮಾಡಿದಾಗಲೆಲ್ಲಾ ಪಿಚ್ ಅನ್ನು ಗಮನದಲ್ಲಿಟ್ಟುಕೊಂಡು ಉತ್ತಮ ತಂಡವನ್ನು ಆಯ್ಕೆ ಮಾಡುತ್ತೇವೆ. ಕೆಲವೊಮ್ಮೆ ನೀವು ತಂಡದಿಂದ ಹೊರಗುಳಿಯಬಹುದು. ಅಶ್ವಿನ್ ಅವರಂತಹ ಬೌಲರ್ ಕೂಡ ತಂಡದಿಂದ ಹೊರಗಿದ್ದಾರೆ. ಸೂರ್ಯಕುಮಾರ್ ಮತ್ತು ಶಮಿ ಪರಿಸ್ಥಿತಿಯೂ ಇದೇ ಆಗಿದೆ” ಎಂದು ಮಾಂಬ್ರೆ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್