ನವದೆಹಲಿ: Human Life On Earth - ಮಾನವ ಸಂಕುಲದ ಉಗಮದ ಜೊತೆಗೆ, ಪ್ರಪಂಚದ ಸೃಷ್ಟಿ ಮತ್ತು ವಿನಾಶದ ಬಗ್ಗೆ ಇರುವ ಅನೇಕ ಪರಿಕಲ್ಪನೆಗಳ ನಡುವೆ, ಭೂಮಿ ಅಥವಾ ಮಾನವರ ಅಂತ್ಯ ಯಾವಾಗ? ಎಂಬ ಪ್ರಶ್ನೆಯೂ ಆಗಾಗ ಉದ್ಭವಿಸುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಜೀವನದ ಸೃಷ್ಟಿ ಮತ್ತು ಅಂತ್ಯವು ದೇವರ ಕೈಯಲ್ಲಿದೆ. ವಿಷ್ಣು ಸ್ವತಃ ಕಾಲಕಾಲಕ್ಕೆ ಅವತಾರಗಳನ್ನು ತೆಗೆದುಕೊಂಡು ಭೂಮಿಯನ್ನು ಮತ್ತು ಮಾನವಕುಲವನ್ನು ಉಳಿಸಿದ್ದಾನೆ. ಇದನ್ನು ಪ್ರತಿಯೊಂದು ಧರ್ಮದಲ್ಲೂ ವಿಭಿನ್ನವಾಗಿ ವ್ಯಾಖ್ಯಾನಿಸಲಾಗಿದೆ. ಇಂದಿನ ಯುಗದಲ್ಲಿ, ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ದೃಷ್ಟಿಕೋನದಿಂದ, ಪ್ರಪಂಚದ ಅನೇಕ ವಿಜ್ಞಾನಿಗಳು ಮಾನವರ ಹಾಗೂ ಪ್ರಪಂಚದ ಅಂತ್ಯದ ಕುರಿತು ಹಲವು ವಾದಗಳನ್ನು ಮಂಡಿಸಿದ್ದಾರೆ. ಪ್ರಪಂಚದ ಚಲನಚಿತ್ರಗಳು ಹಾಗೂ ವಿಶ್ವದ ಪ್ರಾಚೀನ ನಾಗರಿಕತೆಗಳ ಉಲ್ಲೇಖದ ಮೂಲಕ ಕೂಡ ವಿಶ್ವ ವಿನಾಶ, ಭೂಮಿಯ ಸರ್ವನಾಶದ ಕಾಲದ ಕುರಿತು ಹಲವು ಚರ್ಚೆಗಳು ಆಗಾಗ ಕೇಳಿಬರುತ್ತವೆ.


COMMERCIAL BREAK
SCROLL TO CONTINUE READING

ಭವಿಷ್ಯದ ಕುರಿತಾದ ದೊಡ್ಡ ಪ್ರಶ್ನೆ
ಈ ಚರ್ಚೆ ಈಗ್ಯಾಕೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿಯೂ ಮೂಡಿರಬಹುದು. ನಿಜ ಹೇಳುವುದಾದರೆ, ಹಾರ್ವರ್ಡ್ ವಿಶ್ವವಿದ್ಯಾಲಯದ (Harvard University) ಪ್ರಾಧ್ಯಾಪಕ ಮತ್ತು ವಿಜ್ಞಾನಿ ಅವಿ ಲೋಯೆಬ್ (Avi Loeb) ವಿಜ್ಞಾನಿಗಳಿಗೆ ಈ ಪ್ರಶ್ನೆಯನ್ನು ಕೇಳಿದ್ದಾರೆ. ಜಗತ್ತು ಎಷ್ಟು ಕಾಲ ಉಳಿಯುತ್ತದೆ? ಭೂಮಿಯ ಅಂತ್ಯದ ದಿನಾಂಕ ಅಥವಾ ಮಾನವರ ಅಂತ್ಯ ಯಾವುದು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವ ಮೂಲಕ ಅವರು ಜಾಗತಿಕ ತಾಪಮಾನ ಏರಿಕೆಯನ್ನು (Global Warming) ತಡೆಯಲು ಅವರೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ. ಇದರೊಂದಿಗೆ ವ್ಯಾಕ್ಸಿನ್ ತಯಾರಿಕೆಯ ಜೊತೆಗೆ  ಸುಸ್ಥಿರ ಶಕ್ತಿಗೆ ಶುದ್ಧ ಪರ್ಯಾಯವನ್ನು ಕಂಡುಕೊಳ್ಳಲು ಅವರು ಆಗ್ರಹಿಸಿದ್ದಾರೆ.


Pandemic) ಹಾಗೂ ದೇಶಗಳ ನಡುವಿನ ಯುದ್ಧಗಳು.  ಈ ಎಲ್ಲಾ ಸಂಗತಿಗಳನ್ನು ಸಕಾರಾತ್ಮಕವಾಗಿ ನಿರ್ವಹಿಸದಿದ್ದರೆ, ಭೂಮಿ ತನ್ನಷ್ಟಕ್ಕೆ ತಾನೇ ಮನುಷರನ್ನು ಅಂತ್ಯಗೊಳಿಸಲಿದೆ ಅಥವಾ ತನ್ನಷ್ಟಕ್ಕೆ ತಾನೇ ನಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Corona Death: ವರದಿಯಾಗಿರುವುದು ಕೆಲವೇ ಅಂಕಿ-ಅಂಶ, ವಾಸ್ತವಿಕ ಸಂಖ್ಯೆ ದ್ವಿಗುಣವಾಗಿರಬಹುದು- WHO


ವಿವಿಧ ದೇಶಗಳ ಹವಾಮಾನ ಸ್ಥಿತಿಗತಿಗಳು ಅನಿರೀಕ್ಷಿತವಾಗಿ ನಿರಂತರವಾಗಿ ಬದಲಾಗುತ್ತಿವೆ ಎಂದು ಲೋಯೆಬ್ ಹೇಳಿದ್ದಾರೆ. ಹಿಮನದಿಗಳು ಕರಗುತ್ತಿವೆ. ಸಮುದ್ರ ಮಟ್ಟ ಏರುತ್ತಿದೆ. ನೂರಾರು ವರ್ಷಗಳಿಂದ ನಿದ್ರಿಸುತ್ತಿದ್ದ ಜ್ವಾಲಾಮುಖಿಗಳು ಮತ್ತೆ ಪ್ರಜ್ವಲಿಸುತ್ತಿವೆ. ಅಮೆಜಾನ್ ಕಾಡು ಮತ್ತು ಇತರ ಪ್ರಮುಖ ಭಾಗಗಳಂತಹ ಭೂಮಿಯ ಮೇಲಿನ ಆಮ್ಲಜನಕದ ಮೂಲಗಳು ಬೆಂಕಿಯಿಂದ ನಾಶವಾಗುತ್ತಿವೆ. ಆಸ್ಟ್ರೇಲಿಯಾದ ಕಾಡ್ಗಿಚ್ಚು ಯಾರು ಹೇಗೆ ಮರೆಯಲು ಸಾಧ್ಯ. ಲಕ್ಷಾಂತರ ಪ್ರಾಣಿಗಳು ಅದರಲ್ಲಿ ನಶಿಸಿ ಹೋಗಿವೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-ಚೀನಾದ ವಾಯುವ್ಯ ಕಿಂಗ್‌ಹೈ ಪ್ರಾಂತ್ಯದಲ್ಲಿ 7.4 ತೀವ್ರತೆಯ ಭೂಕಂಪನ


'ನಿಸರ್ಗದ ಜೊತೆಗೆ ಚೆಲ್ಲಾಟ ನಿಂತುಹೋಗಲಿ'
ಹಿರಿಯ ವಿಜ್ಞಾನಿ ಮತ್ತು ಪ್ರಾಧ್ಯಾಪಕರು ಆಗಿರುವ ಅವಿ ಲೋಯೇಬ್, ಭೌತಶಾಸ್ತ್ರದ ಸರಳ ಮಾದರಿ  ನಾವೆಲ್ಲರೂ ಧಾತುರೂಪದ ಕಣಗಳಿಂದ ಕೂಡಿದ್ದೇವೆ ಎಂದು ಹೇಳುತ್ತದೆ ಎಂದಿದ್ದಾರೆ. ನಮ್ಮಲ್ಲಿ ಪ್ರತ್ಯೇಕವಾಗಿ ಏನನ್ನೂ ಸೇರಿಸಲಾಗಿಲ್ಲ. ಆದ್ದರಿಂದ, ಪ್ರಕೃತಿಯ ನಿಯಮಗಳ ಆಧಾರದ ಮೇಲೆ, ಮೂಲಭೂತ ಮಟ್ಟದಲ್ಲಿ ಅವುಗಳನ್ನು ಹಾಳುಮಾಡುವ ಯಾವುದೇ ಹಕ್ಕು ನಮಗಿಲ್ಲ. ಒಂದು ವೇಳೆ ಪ್ರಕೃತಿಯ ನಿಯಮಗಳ ಜೊತೆಗೆ ಇದೆ ರೀತಿ ಚೆಲ್ಲಾಟ ಮುಂದುವರೆದಿದ್ದೆ ಆದಲ್ಲಿ, ಅಂತಿಮವಾಗಿ ಅದು ಎಲ್ಲರಿಗೂ ಸಾಮೂಹಿಕ ನಷ್ಟವನ್ನುಂಟು ಮಾಡಲಿದೆ. ಹೀಗಾಗಿ ಮಾನವ ಹಾಗೂ ಆತನ ಜಟಿಲ ಶಾರೀರಿಕ ಸಂರಚನೆಯ ಕುರಿತು ವೈಯಕ್ತಿಕ ಮಟ್ಟದಲ್ಲಿ ಯಾವುದೇ ವಿಪತ್ತಿನ ಭವಿಷ್ಯವಾಣಿ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Alert: Coronavirus ನಿಂದ ಪುರುಷರಲ್ಲಿ ನಪುಂಸಕತ್ವ ಬರುವ ಸಾಧ್ಯತೆ ಎಂದ ಅಧ್ಯಯನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.