ನವದೆಹಲಿ: WhatsApp Friend In Need Scam - ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಆ್ಯಪ್‌ಗಳ ಬಳಕೆ ಹೆಚ್ಚಾಗಿದೆ. ಎಲ್ಲಾ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲಿ ಹೆಚ್ಚು ಜನಪ್ರಿಯ ಮತ್ತು ಪ್ರಚಲಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಅಂದರೆ ಅದು WhatsApp. ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳು ಜನರ ಜೀವನವನ್ನು ತುಂಬಾ ಸರಳ ಮತ್ತು ಆಸಕ್ತಿದಾಯಕವಾಗಿದ್ದರೂ, ಕಾಲಾನಂತರದಲ್ಲಿ, ಸೈಬರ್ ಕ್ರೈಮ್ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ.  ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ನಲ್ಲಿ ಸಾಮಾನ್ಯವಾಗಿರುವ ಹಗರಣವೆಂದರೆ ಅದು ‘ಫ್ರೆಂಡ್ ಇನ್ ನೀಡ್’ ಹಗರಣ


COMMERCIAL BREAK
SCROLL TO CONTINUE READING

ಏನಿದು ವಾಟ್ಸಾಪ್‌ನ 'ಫ್ರೆಂಡ್ ಇನ್ ನೀಡ್' ಹಗರಣ?
WhatsApp ನ ಈ ಇತ್ತೀಚಿನ ಹಗರಣದಲ್ಲಿ, ಬಳಕೆದಾರರು ತಮ್ಮ 'ಸ್ನೇಹಿತರಿಂದ' ಹಣದ ಅವಶ್ಯಕತೆಯಿದೆ ಎಂದು ಸಂದೇಶಗಳನ್ನು ಪಡೆಯುತ್ತಾರೆ. ಎಲ್ಲೋ ವಿದೇಶದಲ್ಲಿ ಸಿಲುಕಿಕೊಂಡಿದ್ದು ಮತ್ತು ತಮಗೆ ಮನೆಗೆ ಮರಳಲು ಹಣದ ಅಗತ್ಯವಿದೆ ಎಂದು ತಮ್ಮ ಸ್ನೇಹಿತರಿಂದ ವಾಟ್ಸಾಪ್‌ನಲ್ಲಿ ಬಳಕೆದಾರರಿಗೆ ಸಂದೇಶಗಳು ಬರುತ್ತಿವೆ.  ಮತ್ತು ಈ ರೀತಿಯ ವಂಚನೆಯಲ್ಲಿ ಸಾಕಷ್ಟು ಮಂದಿ ಸಿಕ್ಕಿಬಿದ್ದಿದ್ದಾರೆ.


ಹೀಗೆ ವಂಚನೆ ಎಸಗಲಾಗುತ್ತದೆ
UK ಯ ರಾಷ್ಟ್ರೀಯ ವ್ಯಾಪಾರ ಮಾನದಂಡಗಳ ಪ್ರಕಾರ, UK ಯಲ್ಲಿ ವಾಸಿಸುವವರಲ್ಲಿ ಕನಿಷ್ಠ ಶೇ. 59 ಜನರು ಈ ಹಗರಣವನ್ನು ಎದುರಿಸಿದ್ದಾರೆ ಮತ್ತು WhatsApp ಸ್ವತಃ ಈ ಹಗರಣವನ್ನು ದೃಢೀಕರಿಸಿ, ಜನರು ಎಚ್ಚರಿಕೆಯಿಂದರಬೇಕು ಎಂದು ಹೇಳಿದೆ. ನ್ಯಾಷನಲ್ ಟ್ರೇಡಿಂಗ್ ಸ್ಟ್ಯಾಂಡರ್ಡ್ಸ್ ಸ್ಕ್ಯಾಮ್ಸ್ ತಂಡದ ಲೂಯಿಸ್ ಬ್ಯಾಕ್ಸ್ಟರ್ ಪ್ರಕಾರ, ಸಂದೇಶವನ್ನು ಕಳುಹಿಸುವವರು ಸ್ನೇಹಿತ ಅಥವಾ ಸಂಬಂಧಿ ಎಂದು ಹೇಳಿಕೊಳ್ಳುವ ಸ್ಕ್ಯಾಮ್‌ಸ್ಟರ್‌ಗಳು  ಅವರ ಪರವಾಗಿ ಸಂದೇಶಗಳನ್ನು ಕಳುಹಿಸುತ್ತಾರೆ. ಈ ಮೂಲಕ ಹಣ ಸುಲಿಗೆ ಮಾಡುವುದು ಸುಲಭವಾಗುತ್ತದೆ. ನಿಮಗೆ ಸಂದೇಶ ಕಳುಹಿಸುವ ಮೂಲಕ, ಈ ಜನರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳುತ್ತಾರೆ, ಹಣವನ್ನು ಕೇಳುತ್ತಾರೆ ಅಥವಾ ಖಾತೆ ವಿವರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. 


ಇದನ್ನೂ ಓದಿ-ಮಾರುಕಟ್ಟೆಗೆ ಲಗ್ಗೆ ಇಡಲಿದೆ Redmiಯ ಈ ಸುಂದರ 5G ಸ್ಮಾರ್ಟ್‌ಫೋನ್, ವೈಶಿಷ್ಟ್ಯಗಳನ್ನು ತಿಳಿಯಿರಿ


ತಿಳಿದವರಿಂದ ಸಂದೇಶಗಳು ಹೇಗೆ ಬರುತ್ತವೆ
ವಾಟ್ಸಾಪ್‌ನಲ್ಲಿ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಹೆಸರಿನಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸಂದೇಶಗಳು ಹೇಗೆ ಬರುತ್ತವೆ ಎಂದು ನೀವು ಆಶ್ಚರ್ಯಪಡಬಹುದು. ಸ್ಕ್ಯಾಮ್‌ಸ್ಟರ್ ನಿಮಗೆ ತಿಳಿದಿರುವ ಜನರ ಸಂಖ್ಯೆ ಮತ್ತು ಖಾತೆಯನ್ನು ಹ್ಯಾಕ್ ಮಾಡಿದಾಗ ಇದು ಸಂಭವಿಸುತ್ತದೆ ಮತ್ತು ನಂತರ ನಿಮಗೆ ತಿಳಿದಿರುವ ಜನರಿಂದ ಈ ಸಂದೇಶಗಳು ಬರುತ್ತವೆ. ಈ ಸಂಖ್ಯೆಗಳು. ನಿಮ್ಮ ಪರಿಚಯಸ್ಥರ ಸ್ಮಾರ್ಟ್‌ಫೋನ್ ಕಳೆದುಹೋದ ಸಂದರ್ಭದಲ್ಲಿಯೂ ಕೂಡ ವಂಚಕರು ಹಣವನ್ನು ಸುಲಿಗೆ ಮಾಡಲು ಅವರ ಸಂಖ್ಯೆಯನ್ನು ಬಳಸಬಹುದು.


ಇದನ್ನೂ ಓದಿ-BSNL ಗ್ರಾಹಕರಿಗೆ ಸಿಹಿ ಸುದ್ದಿ : ₹36 ಗೆ ಸಿಗಲಿದೆ ಡೇಟಾ ಮತ್ತು ಹಲವು ಪ್ರಯೋಜನಗಳು!


ಈ ಹಗರಣದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಬಯಸಿದರೆ, ಮೊದಲು ಮಾಡಬೇಕಾದದ್ದು ಅಂತಹ ಸಂದೇಶಗಳ ಬಗ್ಗೆ ಎಚ್ಚರದಿಂದಿರಿ. ಅಲ್ಲದೆ, ನಿಮಗೆ ತಿಳಿದಿರುವ ಯಾರಾದರೂ ಸಹಾಯಕ್ಕಾಗಿ ಸಂದೇಶವನ್ನು ಸ್ವೀಕರಿಸಿದರೆ, ಅದಕ್ಕೆ ಪ್ರತ್ಯುತ್ತರ ನೀಡುವ ಬದಲು, ಮೊದಲು ಕರೆ ಮಾಡಿ, ಇದರಿಂದ ಸಂದೇಶವು ನಿಮಗೆ ತಿಳಿದಿರುವವರಿಂದಲೇ ಬಂದಿದೆಯೇ ಹೊರತು ಕಳ್ಳನಿಂದಲ್ಲ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬಹುದು. ಯಾವುದೇ ಸಂದರ್ಭದಲ್ಲಿ ಪಠ್ಯದ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ.


ಇದನ್ನೂ ಓದಿ-Reels ಪೋಸ್ಟ್ ಮಾಡಿ, 7.4 ಲಕ್ಷ ರೂ. ಬೋನಸ್ ಗೆಲ್ಲಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ