ಸಾರಿಗೆ ಇಲಾಖೆ ರಾಜ್ಯದ ಖಾಸಗಿ ಬಸ್ ಮಾಲೀಕರಿಗೆ ಬಿಗ್ ಶಾಕ್ ನೀಡಿದೆ. ಗೌರಿ -ಗಣೇಶ ಹಬ್ಬದ ವೇಳೆ ಹಗಲು ದರೋಡೆಗೆ ಬ್ರೇಕ್ ಹಾಕಲಾಗಿದೆ. ಹಬ್ಬದ ಹೆಸರಿನಲ್ಲಿ ಟಿಕೆಟ್ ಹೆಚ್ಚಳ ಮಾಡೋ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಬಸ್‌ ಪರಿಶೀಲನೆ ಮಾಡಿದ್ದಾರೆ.