ಕೊಲೆ ಆರೋಪಿ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜೈಲಿನ ಅವ್ಯವಸ್ಥೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ. ಘಟನೆಗೆ ಕಾರಣರಾದವರನ್ನು ಅಮಾನತು ಮಾಡುವಂತೆ ಆದೇಶಿಸಿದ್ರು. ಅತ್ತ ಸರ್ಕಾರದ ವೈಫಲ್ಯದಿಂದಲೇ ಕೈದಿಗೆ ಪಂಚತಾರ ವ್ಯವಸ್ಥೆ ನೀಡಲಾಗ್ತಿದೆ ಅಂತ ಬಿಜೆಪಿ-ಜೆಡಿಎಸ್‌ ನಾಯಕರು ಕಿಡಿಕಾರಿದ್ರು. ಈ ಕುರಿತು ಒಂದು ವರದಿ...