ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ವಿರುದ್ಧ ಸ್ವಪಕ್ಷದ ನಿಷ್ಠಾವಂತ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದಿದ್ದಾರೆ.. 'ಬಿಜೆಪಿ ಕನಕಗಿರಿ ಕ್ಷೇತ್ರ' ವ್ಯಾಟ್ಸಾಪ್ ಗ್ರೂಪ್‌ನಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ. ಕಾರ್ಯಕರ್ತರ ಸಣ್ಣ ಸಭೆಗಳಂದ್ರೆ ಇವರಿಗೆ ಲೆಕ್ಕಕ್ಕಿಲ್ಲ. ದೊಡ್ಡ ಮೀಟಿಂಗ್ ಆದ್ರೆ ಬೆಂಗಳೂರಲ್ಲಿ ಮಾಡ್ತಾರೆ. ಪಕ್ಷದ ಕಾರ್ಯಕರ್ತರ ಸಮಸ್ಯೆಗಳಿಗೆ ಕಿಂಚಿತ್ತು ಬೆಲೆ ಇಲ್ಲ ಅಂದರೆ ಹೇಗೆ? ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.