ರಸ್ತೆಯಲ್ಲಿ ಮಲಗಿ ಸರ್ಕಾರದ ವಿರುದ್ಧ ರೈತ ಮುಖಂಡರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಹಲಗೇರಿ ಗ್ರಾಮದ ಬಳಿ ಈ ವಿಶಿಷ್ಟ ಪ್ರತಿಭಟನೆ ನಡೆಯಿತು. ಹಲಗೇರಿ ಗ್ರಾಮದ ಬಳಿ  ಹಾದುಹೋಗಿರುವ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿ ತಗ್ಗು ಗುಂಡಿಗಳು ಬಿದ್ದಿದ್ದು, ದುರಸ್ತಿಗೆ ರೈತ ಸಂಘಟನೆ ಮುಖಂಡರು ಗುಂಡಿಯಲ್ಲಿ ಮಲಗಿ ಸರ್ಕಾರದ ಗಮನ ಸೆಳೆಯಲು ವಿಶೇಷ ಪ್ರತಿಭಟನೆ ನಡೆಸಿದರು.