ಚಿತ್ರದುರ್ಗದಲ್ಲಿ ಬಿರುಗಾಳಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು ಇಡೀ ರಸ್ತೆಗಳು ಈಜು ಕೊಳಗಳಂತಾಗಿವೆ. ರಸ್ತೆಯ ಮೇಲೆ ಮರಗಳು ಬಿದ್ದಿದ್ದರಿಂದ ಟ್ರಾಫಿಕ್ ಜಾಮ್ ಆಗಿದ್ದು, ರಸ್ತೆ ದಾಟಲಾಗದೇ ವಾಹನ ಸವಾರರು ಪರದಾಡಿದರು. ಅನೇಕ ಕಡೆ ಮನೆಗಳು ಬಿದ್ದಿದ್ದು ಅಧಿಕಾರಿಗಳಿಗೆ ತಲೆನೋವಾಗಿದೆ. ಮೊನ್ನೆ ಮೊನ್ನೆ ರಾಜಧಾನಿ ಬೆಂಗಳೂರು ನಗರ ತಲ್ಲಣಬಾಗಿತ್ತು.