ಕ್ಷಮೆ ಕೇಳುವುದು ಒಂದು ಧೈರ್ಯ, ಹೇಡಿಗಳು ಮಾತ್ರ ವಾದ ಮಾಡ್ತಾರೆ. ಹೇಡಿಗಳಲ್ಲಿ ಅಂಜಿಕೆ ಇರುತ್ತದೆ. ಆಕಸ್ಮಾತಾಗಿ ನಾನು ಕ್ಷಮೆ ಕೇಳಿದ್ರೆ ಮುಂದೆ ನಮ್ಮ ಮೇಲೆ ಅಧಿಕಾರ ಚಲಾಯಿಸ್ತಾರೆ ಅನ್ನೋ ಭಾವನೆ ಕ್ಷಮೆ ಕೇಳದವರಲ್ಲಿ ಇರುತ್ತೆ. ತಪ್ಪು ಇಲ್ಲವೆಂದರೂ ಕ್ಷಮೆ ಕೇಳುವವನು ತುಂಬ ದೊಡ್ಡ ವ್ಯಕ್ತಿ ಆಗ್ತಾನೆ. ಕ್ಷಮೆ ಕೇಳಿದ್ರೆ ವಾತಾವರಣ ತಿಳಿ ಆಗತ್ತೆ. ದಯವಿಟ್ಟು ಈ ರೀತಿಯ ರಿಯಾಕ್ಟ್‌ ಮಾಡಿ. ಕ್ಷಮೆ ಕೇಳಿ. ನಿಮ್ಮ ಮನಸ್ಸು ತಿಳಿಯಾಗುತ್ತದೆ.