Viral News: ಕುತ್ತಿಗೆಗೆ ಹೆಬ್ಬಾವು ಸುತ್ತಿಕೊಂಡು ಉಸಿರುಗಟ್ಟಿ 60 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ನಡೆದಿದೆ. ಹೆಬ್ಬಾವು ಸುತ್ತಿಕೊಂಡು ಹಣ ಸಂಪಾದಿಸಲು ಯತ್ನಿಸಿದ ವ್ಯಕ್ತಿ ದುರಂತ ಸಾವನ್ನಪ್ಪಿದ್ದಾನೆ. 


COMMERCIAL BREAK
SCROLL TO CONTINUE READING

ಹಣ ಸಂಪಾದಿಸುವ ಉದ್ದೇಶದಿಂದ ಜನರ ಸಮ್ಮುಖದಲ್ಲಿ ವ್ಯಕ್ತಿ ಹೆಬ್ಬಾವು ಸುತ್ತಿಕೊಂಡಿದ್ದ. ಈ ವೇಳೆ ಏಕಾಏಕಿ ಹಾವು ಗಂಟಲಿಗೆ ಬಿಗಿದುಕೊಂಡಿದೆ. ಪರಿಣಾಮ ಆತನಿಗೆ ಉಸಿರಾಡಲು ಸಾಧ್ಯವಾಗದೆ ಸಾವನ್ನಪ್ಪಿದ್ದಾನೆ. 


ಇದನ್ನೂ ಓದಿ: ಅಂಬಾನಿಯ ʻಅಂಟಿಲಿಯಾʼನಿರ್ಮಿಸಲು ಎಷ್ಟು ವರ್ಷ ಬೇಕಾಯಿತು ಗೊತ್ತಾ? ಇದರ ಬೆಲೆ ಕೇಳಿದ್ರೆ ನೀವು ಶಾಕ್‌ ಆಗೋದು ಖಂಡಿತ!


ವ್ಯಕ್ತಿ ಸಾವನ್ನಪ್ಪುತ್ತಿದ್ದಂತೆಯೇ ಹಾವು ಬಿಗಿಯನ್ನು ಸಡಿಲಗೊಳಿಸಿತು ಅಂತಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. 


ನಂತರ ತಜ್ಞರ ಸಹಾಯ ಪಡೆದು ಹಾವು ಹಿಡಿದು ಅರಣ್ಯ ಅಧಿಕಾರಿಗಳ ಮೂಲಕ ಕಾಡಿಗೆ ಬಿಟ್ಟಿದ್ದಾರೆ. ಇತ್ತ ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ʼಲಡ್ಡುʼ ವಿಚಾರದಲ್ಲಿ ತಿಮ್ಮಪ್ಪನ ಭಕ್ತರಿಗೆ ಶಾಕ್‌ ಕೊಟ್ಟ ಟಿಟಿಡಿ..! ತಿರುಪತಿಯಲ್ಲಿ ಇನ್ಮುಂದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.