ಕಳೆದ ಕೆಲವು ದಿನಗಳ ಹಿಂದೆ ಯುವಕನೋರ್ವ ಜನರ ಮುಂದೆ ಅಣೆಕಟ್ಟು ಏರುವ ಸಾಹಸ ಮಾಡಲು ಹೋಗಿ ಸಾರ್ವಜನಿಕರನ್ನು ದಂಗಾಗುವಂತೆ ಮಾಡಿದ್ದಾನೆ. ಇದೀಗ ಯುವಕನ ಸಾಹಸದ ದೃಶ್ಯ ಎಲ್ಲೆಡೆ ವೈರಲ್‌ ಆಗಿದೆ. ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ದೊಡ್ಡ ಅಣೆಕಟ್ಟಿನ ಗೋಡೆ ಏರಲು ಈ ಯುವಕ ಮುಂದಾಗಿದ್ದು, ಜನರನ್ನು ಒಂದು ಬಾರಿ ಉಸಿರುಗಟ್ಟಿಸುವಂತೆ ಮಾಡಿದ್ದಾನೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಮದುವೆಗೂ ಮುನ್ನ ತಂದೆಯಾದ ಕ್ರಿಕೆಟ್‌ ದಿಗ್ಗಜರಿವರು!


ಮೋಜು ಮಾಡುವುದು ಕೆಲವೊಮ್ಮೆ ಅಪಾಯಕಾರಿ ಎಂದು ಆಗಾಗ್ಗೆ ಸಾಬೀತಾಗುತ್ತದೆ. ಚಿಕ್ಕಬಳ್ಳಾಪುರದ ಶ್ರೀನಿವಾಸ ಅಣೆಕಟ್ಟೆಯ ಗೋಡೆ ಏರಲು ಯುವಕನೋರ್ವ ಮುಂದಾಗಿದ್ದಾನೆ.  ಆದರೆ ಈ ಸಂದರ್ಭದಲ್ಲಿ ಅಣೆಕಟ್ಟಿನಿಂದ ನೀರು ನಿರಂತರವಾಗಿ ಸುರಿಯುತ್ತಿದೆ. ಹರಿಯುವ ನೀರಿನ ಮಧ್ಯೆ ಯುವಕನ ಸಾಹಸ ಮಾಡಲು ಮುಂದಾಗಿದ್ದಾನೆ. ಸುಮಾರು 30 ಅಡಿಗಳಷ್ಟು ಎತ್ತರಕ್ಕೆ ಹೀಗೆ ಏರಿದ್ದಾನೆ. ಕೆಲವರು ಈತನ ಸಾಹಸವನ್ನು ವಿಡಿಯೋ ಮಾಡುತ್ತಿದ್ದರೆ, ಇನ್ನೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 


ಹೊಳಪಾದ ತ್ವಚೆ ಹಾಗೂ ಆರೋಗ್ಯಕರ ಕೇಶಗಳನ್ನು ಹೊಂದಲು ಈ ಹಸಿರು ಪಾನೀಯ ಸೇವಿಸಿ


ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಶ್ರೀನಿವಾಸ ಅಣೆಕಟ್ಟಿನಲ್ಲಿ ನೀರು ಹರಿದು ಬರುತ್ತಿದೆ. ಈ ಸುಂದರ ಕ್ಷಣವನ್ನು ನೋಡಲು ಅನೇಕ ಪ್ರವಾಸಿಗರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಯುವಕನೊಬ್ಬ ಅಣೆಕಟ್ಟಿನ ಗೋಡೆಯಲ್ಲಿ ಸುಮಾರು 30 ಅಡಿಗಳಷ್ಟು ಎತ್ತರಕ್ಕೆ ಹತ್ತಿದ್ದಾನೆ. ಇದು ಅತ್ಯಂತ ಅಪಾಯಕಾರಿ ಮತ್ತು ಮಾರಣಾಂತಿಕ ಸಾಹಸವಾಗಿತ್ತು. ಇನ್ನು ಸ್ವಲ್ಪ ದೂರ ಹತ್ತಿದ ನಂತರ ಬ್ಯಾಲೆನ್ಸ್‌ ಮಾಡಲು ಸಾಧ್ಯವಾಗದೆ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ವ್ಯಕ್ತಿ ಕೆಳಗೆ ಬೀಳುತ್ತಿರುವ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಯಾರೋ ಸೆರೆಹಿಡಿದಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಯುವಕ ಚಿಕಿತ್ಸೆ ಪಡೆಯುತ್ತಿದ್ದಾನೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.