Afghanistan Crisis: ಅಫ್ಘಾನಿಸ್ತಾನವನ್ನು (Afghanistan)  ತಾಲಿಬಾನ್ (Taliban) ಆಕ್ರಮಿಸಿಕೊಂಡಿದೆ. ಈ ಕುರಿತಾದ ಮೂಲಗಳನ್ನು ನಂಬುವುದಾದರೆ, ಆಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ (Ashraf Ghani) ಹಾಗೂ ಉಪಾಧ್ಯಕ್ಷ ಅಮರುಲ್ಲಾ ಸಾಲೆಹ್ (Amrullah Saleh) ದೇಶವನ್ನು ತೊರೆದು ಕಜಾಕಿಸ್ತಾನಕ್ಕೆ ರವಾನೆಯಾಗಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಭಾರತ ಸೇರಿದಂತೆ ಇತರೆ ರಾಷ್ಟ್ರಗಳು ತಮ್ಮ ತಮ್ಮ ದೇಶದ ನಾಗರಿಕರ ರಕ್ಷಣೆಯಲ್ಲಿ ತೊಡಗಿವೆ.


Afghanistan Crisis: ತಾಲಿಬಾನಿಗಳ ಮುಂದೆ ಕಾಬೂಲ್ ಸರೆಂಡರ್! ಅಧಿಕಾರ ಹಸ್ತಾಂತರಕ್ಕೆ ಮಾತುಕತೆ ಆರಂಭ !


COMMERCIAL BREAK
SCROLL TO CONTINUE READING

ಏರ್ ಇಂಡಿಯಾ ಪೈಲಟ್ ಕೂಡ ತಮ್ಮ ಪ್ರಯಾಣ ಆರಂಭಿಸಿದ್ದಾರೆ
ಕಾಬುಲ್ ಹಾಗೂ ಅಫ್ಘಾನಿಸ್ತಾನದಲ್ಲಿರುವ ತನ್ನ ನೂರಾರು ಅಧಿಕಾರಿಗಳನ್ನು ಹಾಗೂ ನಾಗರಿಕರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಭಾರತ ಸರ್ಕಾರ ತುರ್ತು ಪ್ಲಾನ್ ಸಿದ್ಧಪಡಿಸಿದೆ. ಆಫ್ಥಾನಿಸ್ತಾನ್ ದಲ್ಲಿ ತಾಲಿಬಾನ್ ಪ್ರವೇಶದ ಸುದ್ದಿಗಳು ಪ್ರಕಟವಾಗುತ್ತಲೇ ಅಲ್ಲಿನ ಜನರಲ್ಲಿ ಭಯದ ವಾತಾವರಣ ಮನೆ ಮಾಡಿದೆ. ಕಾಬೂಲ್ ನಿಂದ ದೆಹಲಿಗೆ ಏರ್ ಇಂಡಿಯಾ ವಿಮಾನ ಸುಮಾರು 129 ಯಾತ್ರಿಗಳನ್ನು ಹೊತ್ತು ತರುತ್ತಿದೆ. ಕಾಬೂಲ್ ನ ಭಾರತೀಯ ದೂತಾವಾಸದಲ್ಲಿರುವ ಅಧಿಕಾರಿಗಳನ್ನು ಹಾಗೂ ಭಾರತೀಯ ನಾಗರಿಕರ ಪ್ರಾಣವನ್ನು ಯಾವ ಕಾರಣಕ್ಕೂ ಕೂಡ ಅಪಾಯಕ್ಕೆ ತಳ್ಳುವ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇಲ್ಲ.


ಇದನ್ನೂ ಓದಿ-Afghanistan Crisis: ಅಫ್ಘಾನಿಸ್ತಾನದಲ್ಲಿ ಭಾರತೀಯರಿಗೆ ನಮ್ಮಿಂದ ಯಾವುದೇ ಅಪಾಯ ಇಲ್ಲ ಎಂದ ತಾಲಿಬಾನ್


IAFನ -17 ವಿಮಾನ ಕೂಡ ಸಿದ್ಧಗೊಂಡಿದೆ
ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ವಾಯು ಸೇನೆಯ ವಿಮಾನ c-17, ಗ್ಲೋಬ್ ಮಾಸ್ಟರ್ ನಲ್ಲಿರುವ ಒಂದು ಸಮೂಹದ ಜನರನ್ನು ಹಾಗೂ ನೌಕರರನ್ನು ರಕ್ಷಿಸಲು ಸಿದ್ಧಗೊಂಡಿದೆ. ಕಾಬೂಲ್ ನಿಂದ ದೊರೆಯುತ್ತಿರುವ ವರದಿಗಳ ಪ್ರಕಾರ, ತಾಲಿಬಾನ್ ಯೋಧರು ನಗರದ ಹೊರಭಾಗದಲ್ಲಿ ಈಗಾಗಲೇ ಎಂಟ್ರಿ ನೀಡಿದ್ದಾರೆ ಎನ್ನಲಾಗಿದ್ದು, ಇದರಿಂದ ಅಲ್ಲಿರುವ ಜನರ ಮನದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ ಎನ್ನಲಾಗಿದೆ.


ಇದನ್ನೂ ಓದಿ-Afghanistan: ಕಾಬೂಲ್ ಅನ್ನು ನಾಲ್ಕು ದಿಕ್ಕುಗಳಿಂದಲೂ ಸುತ್ತುವರೆದಿರುವ ತಾಲಿಬಾನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ