ನವದೆಹಲಿ: ಕರಾಚಿಯಲ್ಲಿ ಗುರುವಾರ ನಡೆದ ಒಂದು ಗ್ರೆನೇಡ್ ದಾಳಿಯಲ್ಲಿ ಒಬ್ಬ ಮೃತಪಟ್ಟು ಐದು ಮಂದಿ ಗಾಯಗೊಂಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಖರದಾರ್ನ ಚಾಗ್ಲಾ ರಸ್ತೆಯಲ್ಲಿ ಗ್ರೆನೇಡ್ ದಾಳಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಪೊಲೀಸ್ (ಎಸ್ಎಸ್ಪಿ) ಸಿಟಿ ಅದಿಲ್ ಚಾಂಡಿಯೊ ಹೇಳಿದರು.ದಾಳಿಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ ಎಂದು ಅವರು ತಿಳಿಸಲಾಗಿದೆ.


ಸಿಂಧ್ ಗೃಹ ಸಚಿವ ಸೊಹೈಲ್ ಅನ್ವರ್ ಸಿಯಾಲ್ ಅವರು ದಕ್ಷಿಣದ ಉಪ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ರವರಿಗೆ ವಿವರವಾದ ತನಿಖಾ ವರದಿಯನ್ನು ಕೇಳಿದ್ದಾರೆ ಎಂದು ಹೇಳಲಾಗಿದೆ.


ಇದೆ ಹಿಂದಿನ ಭಾನುವಾರ, ಮುತಾಹಿದಾ ಖೌಮಿ ಮೂಮೆಂಟ್ (ಎಮ್ಕ್ಯೂಎಂ) ನಾಯಕ ಡಾ ಹಸನ್ ಜಾಫರ್ ಆರಿಫ್ ಅವರು ಕರಾಚಿಯ ಇಲ್ಯಾಸ್ ಗಾಥ್ ಪ್ರದೇಶದಲ್ಲಿ ಕಾರಿನಲ್ಲಿ ಮೃತಪಟ್ಟಿದ್ದಾರೆ. MQM- ಲಂಡನ್ನ ಉಪ ಸಂಚಾಲಕರಾಗಿದ್ದ ಡಾ ಆರಿಫ್, ಕರಾಚಿಯ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರವನ್ನು ಕಲಿಸುತ್ತಿದ್ದರು ಎಂದು ಡಾನ್ ತನ್ನ ವರದಿ ತಿಳಿಸಿದೆ.