ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ.
ಭಾನುವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ "ಚುನಾವಣೋತ್ತರ ಸಮೀಕ್ಷೆಯನ್ನು ಪರ ಅಥವಾ ವಿರೋಧವಾಗಿ ಬಂದರೂ ಕೂಡ ನಂಬುವುದಿಲ್ಲ ,ಇನ್ನು ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಪರಿಸ್ಥಿತಿಯು ಉದ್ಭವಿಸುವುದಿಲ್ಲ, ಅದರ ಬಗ್ಗೆ ನಾವು ನಿಮಗೆ ಭರವಸೆ ನೀಡಬಲ್ಲೆವು" ಎಂದು ತಿಳಿಸಿದರು.
ಶನಿವಾರದಂದು ಮುಗಿದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಶೇ 70ರಷ್ಟು ಮತದಾನವಾಗಿದೆ,ಇದರ ನಂತರ ಬಹುತೇಕ ಮಾಧ್ಯಮಗಳು ಅತಂತ್ರ ಸರ್ಕಾರದ ಫಲಿತಾಂಶದ ಭವಿಷ್ಯವನ್ನು ನುಡಿದಿವೆ. ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊಮ್ಮಲಿದೆ ಹೇಳಿದರೆ, ಇನ್ನು ಕೆಲವು ಬಿಜೆಪಿಗೆ ಅಧಿಕ ಸ್ಥಾನ ಬರಲಿದೆ ಎಂದು ಹೇಳಿವೆ .ಅಲ್ಲದೆ ಜೆಡಿಎಸ್ ಪಕ್ಷವು ಕಿಂಗ್ ಮೇಕರ್ ಆಗಿ ಹೊರ ಹೊಮ್ಮುತ್ತದೆ ಎಂದು ಬಹುತೇಕ ಸಮೀಕ್ಷೆಗಳು ತಿಳಿಸಿವೆ. ಈ ಹಿನ್ನಲೆಯಲ್ಲಿ ಈಗ ಮೈತ್ರಿ ಸರ್ಕಾರದ ಲೆಕ್ಕಾಚಾರ ಈಗಿನಿಂದಲೇ ಪ್ರಾರಂಭವಾಗಿದೆ.