ಮತದಾರ ಗುರುತಿನ ಚೀಟಿ ಅಕ್ರಮ; ಕಾಂಗ್ರೆಸ್ಗೆ ಸದಾನಂದ ಗೌಡ ಸವಾಲು

ಮತದಾರರ ಗುರುತಿನ ಚೀಟಿ ಪತ್ತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಡಿರುವ ಆರೋಪವನ್ನು ಸಾಬೀತುಪಡಿಸುವಂತೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸವಾಲು ಹಾಕಿದ್ದಾರೆ. 

Last Updated : May 9, 2018, 11:22 AM IST
ಮತದಾರ ಗುರುತಿನ ಚೀಟಿ ಅಕ್ರಮ; ಕಾಂಗ್ರೆಸ್ಗೆ ಸದಾನಂದ ಗೌಡ ಸವಾಲು title=

ಬೆಂಗಳೂರು : ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮತದಾರರ ಗುರುತಿನ ಚೀಟಿ ಪತ್ತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಡಿರುವ ಆರೋಪವನ್ನು ಸಾಬೀತುಪಡಿಸುವಂತೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸವಾಲು ಹಾಕಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಸದಾನಂದ ಗೌಡ, ಜಾಲಹಳ್ಳಿಯ ಎಸ್ಎಲ್ ವಿ ಅಪಾರ್ಟ್ಮೆಂಟ್ ಮಂಜುಳಾ ನಂಜಾಮರಿ ವರಿಗೆ ಸೇರಿದ್ದಾದರೂ, ರಾಕೇಶ್, ಮಂಜುಳಾ ಅವರ ಮಗನಲ್ಲ. ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಮಂಜುಳಾ, ರಾಕೇಶ್ ವಿರುದ್ಧವೇ ಕೆಲಸ ಮಾಡಿದ್ದಾರೆ. ಈಗ ಕಾಂಗ್ರೆಸ್ ಪ್ರಕರಣದಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ನವರು ಪ್ರಜಾಪ್ರಭುತ್ವಕ್ಕೆ ವಂಚನೆ ಮಾಡಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೆ, ಚುನಾವಣಾ ಆಯೋಗದ ಹೇಳಿಕೆಯಲ್ಲಿ "ಮತದಾರರ ಗುರುತಿನ ಚೀಟಿ ಪತ್ತೆಯಾದ ಫ್ಲಾಟ್ ರಾಕೇಶ್ ಅವರಿಗೆ ಬಾಡಿಗೆ ನೀಡಿದ್ದು" ಎಂದು ಹೇಳಲಾಗಿದೆ. ಆದರೆ ಕಾಂಗ್ರೆಸ್ ವೃಥಾ ಆರೋಪ ಮಾಡುತ್ತಿದೆ ಎದ್ನಿರುವ ಸದಾನಂದ ಗೌಡ ಅವರು, ಚುನಾವಣಾ ಆಯೋಗ ಈ ಸಂಬಂಧ ಹೊರಡಿಸಿರುವ ಪತ್ರಿಕಾ ಪ್ರಕಟಣೆಯನ್ನೂ ಟ್ವೀಟ್ ನಲ್ಲಿ ಒದಗಿಸಿದ್ದಾರೆ. 

Trending News