ಕರ್ನಾಟಕ ಶಾಸಕರ ಖರೀದಿಯಲ್ಲಿ ಗುಜರಾತ್ ಉದ್ಯಮಿ ಕೈವಾಡ?

ಆ ಉದ್ಯಮಿಗೂ ಬಿಜೆಪಿಗೂ ಏನು ಸಂಬಂಧ..? ಎಐಸಿಸಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಪ್ರಶ್ನೆ

Last Updated : May 16, 2018, 04:47 PM IST
ಕರ್ನಾಟಕ ಶಾಸಕರ ಖರೀದಿಯಲ್ಲಿ ಗುಜರಾತ್ ಉದ್ಯಮಿ ಕೈವಾಡ? title=

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅತಂತ್ರ ಪರಿಸ್ಥಿತಿ ಎದುರಾಗಿದ್ದು, ಬಿಜೆಪಿ ಪಕ್ಷವು ಆಪರೇಷನ್ ಕಮಲಕ್ಕೆ ಮುಂದಾಗಿದೆ. ಆಪರೇಷನ್ ಕಮಲದ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿರುವ ಸಮಯದಲ್ಲೇ ಎಐಸಿಸಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ  ರಮ್ಯಾ(ದಿವ್ಯ ಸ್ಪಂದನ) ಹೊಸ ಬಾಂಬ್ ಸಿಡಿಸಿದ್ದಾರೆ.

ಕರ್ನಾಟಕ ಶಾಸಕರ ಖರೀದಿಯಲ್ಲಿ ಗುಜರಾತ್ ಉದ್ಯಮಿ ಕೈವಾಡ? ಆ ಉದ್ಯಮಿಗೂ ಬಿಜೆಪಿಗೂ ಏನು ಸಂಬಂಧ..? ಬಿಜೆಪಿಯ ಈ ಭ್ರಷ್ಟಾಚಾರಕ್ಕೆ ಬ್ಯಾಂಕ್​​ಗಳು ಸಹಾಯ ಮಾಡ್ತಿವೆಯಾ? ಈ ಬಗ್ಗೆ ನಮ್ಮ ತಾತ್ಕಾಲಿಕ ವಿತ್ತಸಚಿವ ಪಿಯೂಷ್​ ಗೋಯಲ್​ ಪ್ರತಿಕ್ರಿಯೆ ಕೊಡ್ತಾರಾ? ಎಂದು ಟ್ವಿಟ್ಟರ್ ನಲ್ಲಿ ಎಐಸಿಸಿ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯ ಪ್ರಶ್ನಿಸಿದ್ದಾರೆ.

Trending News