ಎಣ್ಣೆ ಪಾರ್ಟಿ ನಡುವೆ ಸ್ನೇಹಿತರ ಮಧ್ಯೆ ಕಿರಿಕ್..! ಮೂರನೇಯವನ ಎಂಟ್ರಿ.. ಚಾಕು ಇರಿದು ಒಬ್ಬನ ಕೊಲೆ

ಮೂರ್ತಿ ಮತ್ತು ಶರಣಪ್ಪ ನಡುವೆ ಗಲಾಟೆಯಾಗಿ ಹಳೇ ವೈಷ್ಯಮ್ಯವೂ ಇತ್ತಂತೆ. ಇದೇ ಕೋಪದಲ್ಲಿದ್ದ ಶರಣಪ್ಪಗೆ ನಿನ್ನೆ ರಾತ್ರಿ ಸಚಿನ್ ಪ್ರಚೋದನೆ ಕೊಟ್ಟಿದ್ರಿಂದ ಈ ದುರಂತ ನಡೆದಿದೆ. ಘಟನೆಯ ಸಂಪೂರ್ಣ ವರದಿ ಇಲ್ಲಿದೆ ನೋಡಿ..

Written by - Krishna N K | Last Updated : May 3, 2024, 10:55 PM IST
    • ನಿನ್ನೆ ರಾತ್ರಿ ಮಾತ್ರ ಪಾರ್ಟಿ ವೇಳೆ ಇಬ್ಬರ ಮಧ್ಯೆ ಕಿರಿಕ್ ಆಗಿತ್ತು.
    • ಇಬ್ಬರ ಜಗಳಕ್ಕೆ ಎಂಟ್ರಿಯಾದ ಮತ್ತೊಬ್ಬ ರಕ್ತ ಹರಿಸಿ ಒಬ್ಬನ ಉಸಿರು ನಿಲ್ಸಿದ್ದಾನೆ.
    • ಎಣ್ಣೇ ಪಾರ್ಟಿ ವೇಳೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಎಣ್ಣೆ ಪಾರ್ಟಿ ನಡುವೆ ಸ್ನೇಹಿತರ ಮಧ್ಯೆ ಕಿರಿಕ್..! ಮೂರನೇಯವನ ಎಂಟ್ರಿ.. ಚಾಕು ಇರಿದು ಒಬ್ಬನ ಕೊಲೆ title=

ಬೆಂಗಳೂರು : ಅವರಿಬ್ಬರು ಒಂದೇ ಏರಿಯಾದಲ್ಲಿ ವಾಸ ಮಾಡ್ತಿದ್ರು.. ಆಗಾಗ ಪಾರ್ಟಿಗಂತ ಜೊತೆಗೆ ಕೂತ್ತಿರ್ತು. ಆದ್ರೆ ನಿನ್ನೆ ರಾತ್ರಿ ಮಾತ್ರ ಪಾರ್ಟಿ ವೇಳೆ ಇಬ್ಬರ ಮಧ್ಯೆ ಕಿರಿಕ್ ಆಗಿತ್ತು. ಇಬ್ಬರ ಜಗಳಕ್ಕೆ ಎಂಟ್ರಿಯಾದ ಮತ್ತೊಬ್ಬ ಪಾರ್ಟಿ ಜಾಗದಲ್ಲಿ ರಕ್ತ ಹರಿಸಿ ಒಬ್ಬನ ಉಸಿರು ನಿಲ್ಸಿದ್ದಾನೆ.

ಎಣ್ಣೇ ಪಾರ್ಟಿ ವೇಳೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಸಂಜಯ್ ನಗರ ಠಾಣಾ ವ್ಯಾಪ್ತಿಯ ನಾಗಶೆಟ್ಟಿಹಳ್ಳಿಯಲ್ಲಿ ನಡೆದಿದೆ.. ಆಟೋ ಡ್ರೈವರ್ ಆಗಿದ್ದ ಮೂರ್ತಿ ಎಂಬಾತನೇ ತನ್ನ ಸ್ನೇಹಿತ, ರೌಡಿಶೀಟರ್ ಶರಣಪ್ಪನಿಂದ ಕೊಲೆಯಾಗಿರೋ ದುರ್ದೈವಿ. ಆದ್ರೆ ಕೊಲೆಗಡುಕ ಶರಣಪ್ಪ ಇನ್ನೊಬ್ಬ ಸ್ನೇಹಿತನ ಮಾತು ಕೇಳಿ ಈ ಕೃತ್ಯ ಎಸಗಿದ್ದಾನೆ. 

ಇದನ್ನೂ ಓದಿ:ಎಸ್ಐಟಿ ವಿಚಾರಣೆಗೆ ಆಗಮಿಸಿದ ದೇವರಾಜೇಗೌಡ

ಹೌದು.. ಮೂರ್ತಿ, ಶರಣಪ್ಪ ಮತ್ತು ಸಚಿನ್ ಎಂಬುವರು ಒಂದೇ ಏರಿಯಾದಲ್ಲಿ ವಾಸವಿದ್ರು. ಆಗಾಗ ಮೂರು ಜನರು ಎಣ್ಣೆ ಪಾರ್ಟಿಗೆ ಸೇರ್ತಿದ್ರು. ನಿನ್ನೆ ರಾತ್ರಿ ಕೂಡ ಮೂರ್ತಿ ಮತ್ತು ಸಚಿನ್ ಎಣ್ಣೆ ಪಾರ್ಟಿ ಮಾಡಿದ್ರು.. ಆದ್ರೆ ಇಬ್ಬರ ಮಧ್ಯೆ ಗಲಾಟೆ ಶುರುವಾಗಿ ಇದೇ ಬಸ್ ಸ್ಟ್ಯಾಂಡ್ ಬಳಿ ಬಂದಿದ್ರು.. ಈ ವೇಳೆ ಸಚಿನ್ ಶರಣಪ್ಪನನ್ನ ಸ್ಥಳಕ್ಕೆ ಕರೆಸಿಕೊಂಡ. ಬಳಿಕ ಶರಣಪ್ಪ ತಾನು ತಂದಿದ್ದ ಚಾಕುವಿನಿಂದ ಮೂರ್ತಿಗೆ 7-8 ಬಾರಿ ಇರಿದು ಹತ್ಯೆ ಮಾಡಿದ್ದಾನೆ. 

ಇನ್ನು ಶರಣಪ್ಪ ಈ ಹಿಂದೆ ಕೊಲೆ ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿ ಬಂದಿದ್ದ. ಹಾಗೆ ಅನೇಕ ಕ್ರಿಮಿನಲ್ ಪ್ರಕರಣಗಳಲ್ಲೂ ಕೂಡ ಭಾಗಿಯಾಗಿದ್ದ. ಆದ್ರೆ ಮೂರ್ತಿ ಮತ್ತು ಶರಣಪ್ಪ ನಡುವೆ ಗಲಾಟೆಯಾಗಿ ಹಳೇ ವೈಷ್ಯಮ್ಯವೂ ಇತ್ತಂತೆ. ಇದೇ ಕೋಪದಲ್ಲಿದ್ದ ಶರಣಪ್ಪಗೆ ನಿನ್ನೆ ರಾತ್ರಿ ಸಚಿನ್ ಪ್ರಚೋದನೆ ಕೊಟ್ಟಿದ್ರಿಂದ ಈ ದುರಂತ ನಡೆದಿದೆ. ಇನ್ನು ಕೊಲೆಯಾದ ಮೂರ್ತಿಗೆ 20 ದಿನಗಳ ಹಿಂದಷ್ಟೆ ಮಗು ಜನಿಸಿತ್ತು. ನಿನ್ನೆಯಷ್ಟೇ ಪತ್ನಿ ಮಗು ಜೊತೆ ಮನೆಗೆ ಬಂದಿದ್ರು. ಆದ್ರೆ ಪಾಪಿ ಶರಣಪ್ಪನಿಂದ ಸಂಭ್ರಮದ ಮನೆ ಸೂತಕದ ಮನೆಯಾಗಿದೆ. 

ಇದನ್ನೂ ಓದಿ:ಸತೀಶ್ ಜಾರಕಿಹೋಳಿ ಸ್ವಕ್ಷೇತ್ರಕ್ಕೆ ಅಮಿತ್ ಷಾ ಎಂಟ್ರಿ

ಸದ್ಯ ಘಟನೆ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳ ಹುಡುಕಾಟ ನಡೀತಿದೆ. ಇನ್ನು ಕೊಲೆಯಾದ ಮೂರ್ತಿಗೆ 20 ದಿನಗಳ ಹಿಂದಷ್ಟೆ ಮಗು ಜನಿಸಿತ್ತು.. ನಿನ್ನೆಯಷ್ಟೇ ಪತ್ನಿ ಮಗು ಜೊತೆ ಮನೆಗೆ ಬಂದಿದ್ಲು.. ಆದ್ರೆ ಮೂರ್ತಿ ತನ್ನ ಮಗು ಜೊತೆ ಸಂತೋಷದಿಂದ ಕಾಲಕಳೆಯುವ ಅವಕಾಶ ಕಳೆದುಕೊಂಡು ಮಸಣ ಸೇರಿದ್ದಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News