BBK 10: ನೊಂದವರ ಸಂಘಕ್ಕೆ ವಿನಯ್ ಗೌಡ ಸೇರ್ಪಡೆಯಾದ್ರಾ? ಆಲ್ಮೋಸ್ಟ್ 50% ನಮ್ಮ ಕಡೆನೆ ಬಂದ ಹಾಗಿದೆಂದ ತುಕಾಲಿ!

Bigg Boss Kannada 10: ಬಿಗ್‌ಬಾಸ್‌ನಲ್ಲಿ ಹೋದ ವಾರ ನೊಂದವರ ಸಂಘ ಒಂದು ಪ್ರಾರಂಭವಾಗಿದ್ದು, ಈ ಗುಂಪಿಗೆ ಇತರ ಸ್ಪರ್ಧಿಗಳು ಸಂಘಕ್ಕೆ ಸೇರಿಕೊಂಡಿದ್ದಾರೆ ಎಂಬ ಬಗ್ಗೆ ಸಂಡೇ ವಿತ್ ಸುದೀಪ ಸಂಚಿಕೆಯಲ್ಲಿ ಮಜವಾದ ಸಂವಾದ ನಡೆದಿದೆ. 

Written by - Zee Kannada News Desk | Last Updated : Dec 4, 2023, 09:53 AM IST
  • ಕಿಚ್ಚ ಸುದೀಪ್ ಭಾನುವಾರ ಸೂಪರ್ ಸಂಡೇ ವಿತ್ ಸುದೀಪ ವಿಶೇಷ ಸಂಚಿಕೆಯಲ್ಲಿ ಕಳೆದ ಬಾರಿ ಉದ್ಘಾಟನೆಯಾದ 'ನೊಂದವರ ಸಂಘ'ದ ಬಗ್ಗೆ ಮಾತುಕತೆಯಾಗಿದೆ.
  • ತುಕಾಲಿ ಸಂತೋಷ್ ಆಲ್ಮೋಸ್ಟ್ ವಿನಯ್ ಒಂದು ಐವತ್ತು ಪರ್ಸೆಂಟ್ ನಮ್ಮ ಕಡೆನೆ ಬಂದಿರುವ ಹಾಗಿದೆ ಎಂದಿದ್ದಾರೆ.
  • ವರ್ತೂರ್‌ ಸಂತೋಷ್‌ ವಿನಯ್ ನಮ್ಮ ಸಂಘಕ್ಕೆ ಬಂದಿಲ್ಲ. ಮೊನ್ನೆ ಕೇಳಿದ ನಮ್ಮ ಗುಂಪಿಗೆ ಬಂದಿದ್ದಿರಾ ಎಂದು,ಅದಕ್ಕೆ ಅವರು ಇಲ್ಲ ಸುಮ್ಮನೆ ಮಾತಾಡೋಕೆ ಬಂದಿದ್ದಿನಿ ಎಂದರು ಎಂದು ಹೇಳಿದ್ದಾರೆ.
BBK 10: ನೊಂದವರ ಸಂಘಕ್ಕೆ ವಿನಯ್ ಗೌಡ ಸೇರ್ಪಡೆಯಾದ್ರಾ? ಆಲ್ಮೋಸ್ಟ್ 50% ನಮ್ಮ ಕಡೆನೆ ಬಂದ ಹಾಗಿದೆಂದ ತುಕಾಲಿ! title=

Vinay Joined Nondavara Sangha In BBK: ಬಿಗ್‌ಬಾಸ್ ಕನ್ನಡ ಸೀಸನ್ 10 ಎಂಟನೇ ವಾರಕ್ಕೆ ಬಂದಿದ್ದು, ಕಿಚ್ಚ ಸುದೀಪ್ ಭಾನುವಾರ ಸೂಪರ್ ಸಂಡೇ ವಿತ್ ಸುದೀಪ ವಿಶೇಷ ಸಂಚಿಕೆ ನಡೆಸಿಕೊಡಲಿದ್ದಾರೆ. ಇದರಲ್ಲಿ ಕಳೆದ ಬಾರಿ ಉದ್ಘಾಟನೆಯಾದ 'ನೊಂದವರ ಸಂಘ'ದ ಬಗ್ಗೆ ಮಾತುಕತೆಯಾಗಿದ್ದು, ಹಲವು ಪ್ರಶ್ನೆಗಳನ್ನು ಸುದೀಪ್ ಕೇಳಿದ್ದು, ತನಿಷಾ ಹಾಗೂ ತುಕಾಲಿ ಸಂತೋಷ್ ಉತ್ತರ ಮನೆಯವರನ್ನು ನಗೆ ಕಡಲಲ್ಲಿ ತೇಲಾಡಿಸಿದೆ. ಹೊಸದಾಗಿ ಆರಂಭವಾಗಿರುವ ನೊಂದವರ ಸಂಘಕ್ಕೆ ಹೊಸ ಎಂಟ್ರಿ ವಿನಯ್ ಎಂದು ಕೇಳಿದಕ್ಕೆ, ಇದಕ್ಕೆ ತನಿಷಾ ಕುಪ್ಪಂಡ ಮತ್ತು ತುಕಾಲಿ ಸಂತೋಷ್ ಎಸ್ ಎಂಬ ಪ್ಲಕಾರ್ಡ್ ಹಿಡಿದು ಹೌದು ಎಂದಿದ್ದಾರೆ. 

ಸ್ವತಃ ವಿನಯ್ ಗೌಡ ಇದನ್ನು ನಿರಾಕರಿಸಿದರು ಕೂಡ ಇಬ್ಬರು ಹೌದು ಎಂದಿದ್ದು, ಇದಕ್ಕೆ ಕಾರಣ ಕೊಟ್ಟಿರುವ ತನಿಷಾ, "ಅವರೇ ಅವಾಗವಾಗ ಅವರೇ ಹೇಳಿಕೊಂಡಿದ್ದರು. ಆಗಲ್ಲ ಗುರು ನಂಗೆ ಈ ಗುಂಪು ..ಗ್ಯಾಂಗ್ ಎಲ್ಲಾ ಸಾಕಾಯಿತು. ನಾನು ನೊಂದವರ ಗುಂಪಿಗೆ ಹೋಗುತ್ತೇನೆ ಎಂದು ಅವರೇ ಹೇಳಿದ್ದರು. ಹೀಗಾಗಿ ನಾನು ಎಸ್ ಎಂದಿದ್ದೇನೆ" ಎಂದು ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: BBK 10: ಪವಿ ಪೂವಪ್ಪಗೆ ಕ್ಲಾಸ್ ತಗೊಂಡ ಕಿಚ್ಚ: ವೈಲ್ಡ್ ಕಾರ್ಡ್ ಎಂಟ್ರಿಗೆ ಫಸ್ಟ್‌ ಟೈಮ್‌ ಇಂತಹ ಸುಸ್ವಾಗತ!

ಇನ್ನು ಎಸ್ ಎಂದು ಹೇಳಿರುವ ತುಕಾಲಿ ಸಂತೋಷ್‌ರನ್ನು ಸುದೀಪ್ ಪ್ರಶ್ನಿಸಿದಾಗ ತುಕಾಲಿ ಸಂತೋಷ್, "ಅಣ್ಣ, ಆಲ್ಮೋಸ್ಟ್ ಅವರು ಒಂದು ಐವತ್ತು ಪರ್ಸೆಂಟ್ ನಮ್ಮ ಕಡೆನೆ ಬಂದಿರುವ ಹಾಗಿದೆ. ಆನೆ ಹೋಗಿ ಬಾತ್‌ರೂಂನಲ್ಲಿ ಅತ್ತಿದೆ ಅಂದ್ರೆ ನಮ್ಮ ಗುಂಪಿಗೆ ಸ್ಟ್ರಾಂಗ್ ಕ್ಯಾಂಡಿಡೇಟ್ ಬಂದಿದೆ ಅಂತ ಅರ್ಥ. ನಾನು ಬೇಕಾದರೇ ಅಧ್ಯಕ್ಷ ಸ್ಥಾನ ತ್ಯಜಿಸಿ ಅವರಿಗೆ ಕೊಡೋಕೆ ಸಿದ್ಧವಾಗಿದ್ದಿನಿ" ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿರುವ ವರ್ತೂರ್ ಸಂತೋಷ್, "ಇಲ್ಲ ಅವರು ನಮ್ಮ ಸಂಘಕ್ಕೆ ಬಂದಿಲ್ಲ. ಮೊನ್ನೆ ಕೋಡ ನಾನು ಕೇಳಿದ ನಮ್ಮ ಗುಂಪಿಗೆ ಬಂದಿದ್ದಿರಾ ಎಂದು, ಇಲ್ಲ ಸುಮ್ಮನೆ ಮಾತಾಡೋಕೆ ಬಂದಿದ್ದಿನಿ. ಗುಂಪಿಗೆಲ್ಲಾ ಬರೋದಿಲ್ಲ ಅಂದ್ರು" ಎಂದು ಹೇಳಿದ್ದಾರೆ. ಇದಕ್ಕೆ ಮಧ್ಯೆ ಮಾತಾಡಿರುವ ತುಕಾಲಿ ಸಂತೋಷ್, 'ಹೀಗೆ ಮಾತಾಡೋಕೆ ಬರೋದೆ ಮೊದಲ ಸ್ಟೆಪ್. ಜಾಯಿನ್ ಆಗೋದು ಸೆಕೆಂಡ್ ಸ್ಟೆಪ್ ಎಂದು ಹೇಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News