“ಮನಸ್ಸು ಹಗುರಾಗಿದೆ ಸರ್…”- ಕಿಚ್ಚನ ಚಪ್ಪಾಳೆ ಪಡೆದ ಡ್ರೋಣ್ ಪ್ರತಾಪ್ ಸುದೀಪ್ ಜೊತೆ ಮನಬಿಚ್ಚಿ ಹೇಳಿದ್ದು ಹೀಗೆ...

Kiccha Sudeep Appreciates Drone Prathap: ಕಳೆದ ವಾರ ನಡೆದ ಕಿಚ್ಚನ ಪಂಚಾಯ್ತಿಗೆ ಸಖತ್ ರೇಟಿಂಗ್ ಪಡೆದುಕೊಂಡಿದ್ದು, ಈ ವಾರವೂ ಮತ್ತೆ ಕಿರುತೆರೆಯಲ್ಲಿ ಮಿಂಚುವುದು ಪಕ್ಕಾ ಆಗಿದೆ. ಇದಕ್ಕೆ ಕಾರಣವಾಗಿರೋದು ಡ್ರೋಣ್ ಪ್ರತಾಪ್’ಗೆ ಕಿಚ್ಚ ಕೊಟ್ಟಿರುವ ‘ಮೆಚ್ಚುಗೆಯ ಚಪ್ಪಾಳೆ’.

Written by - Bhavishya Shetty | Last Updated : Nov 11, 2023, 04:56 PM IST
    • ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10
    • ಡ್ರೋಣ್ ಪ್ರತಾಪ್’ಗೆ ಕಿಚ್ಚನ ‘ಮೆಚ್ಚುಗೆಯ ಚಪ್ಪಾಳೆ’.
    • ಈ ಸಂದರ್ಭದಲ್ಲಿ ಭಾವುಕರಾದ ಡ್ರೋಣ್ ಪ್ರತಾಪ್
“ಮನಸ್ಸು ಹಗುರಾಗಿದೆ ಸರ್…”- ಕಿಚ್ಚನ ಚಪ್ಪಾಳೆ ಪಡೆದ ಡ್ರೋಣ್ ಪ್ರತಾಪ್ ಸುದೀಪ್ ಜೊತೆ ಮನಬಿಚ್ಚಿ ಹೇಳಿದ್ದು ಹೀಗೆ...  title=
Drone Pratap

Kiccha Sudeep Appreciates Drone Prathap: ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಸದ್ಯ ಸಖತ್ ರೇಟಿಂಗ್ ಪಡೆದುಕೊಂಡು ಮುನ್ನಡೆಯುತ್ತಿದೆ. ಕಳೆದ ವಾರ ನಡೆದ ಕಿಚ್ಚನ ಪಂಚಾಯ್ತಿಗೆ ಸಖತ್ ರೇಟಿಂಗ್ ಪಡೆದುಕೊಂಡಿದ್ದು, ಈ ವಾರವೂ ಮತ್ತೆ ಕಿರುತೆರೆಯಲ್ಲಿ ಮಿಂಚುವುದು ಪಕ್ಕಾ ಆಗಿದೆ. ಇದಕ್ಕೆ ಕಾರಣವಾಗಿರೋದು ಡ್ರೋಣ್ ಪ್ರತಾಪ್’ಗೆ ಕಿಚ್ಚ ಕೊಟ್ಟಿರುವ ‘ಮೆಚ್ಚುಗೆಯ ಚಪ್ಪಾಳೆ’.

ಇದನ್ನೂ ಓದಿ: ದೀಪಾವಳಿ ಹಬ್ಬದಂದು ಯಾವ ರಾಶಿಯವರು ಯಾವ ಬಣ್ಣದ ಬಟ್ಟೆ ಧರಿಸಿದ್ರೆ ಅದೃಷ್ಟ ಬರುತ್ತೆ ಗೊತ್ತೆ..!

ಹೌದು.. ಡ್ರೋಣ್ ಪ್ರತಾಪ್ ಅವರು ಈ ವಾರ ಅತ್ಯುತ್ತಮವಾಗಿ ಆಟವಾಡಿದ್ದು ಮಾತ್ರವಲ್ಲ. ಇಡೀ ತಂಡವೇ ಎದುರಾದರೂ ಪ್ರಾಮಾಣಿಕವಾಗಿ ಆಟವಾಡಿದ್ದಾರೆ, ತಂಡವನ್ನು ಮುನ್ನಡೆಸಿದ್ದಾರೆ. ಈ ಕಾರಣಕ್ಕೆ ಅವರನ್ನು ಮನಃಪೂರ್ವಕವಾಗಿ ಮೆಚ್ಚಿ, ಬಿಗ್ ಬಾಸ್ ಹೋಸ್ಟ್ ಕಿಚ್ಚ ಸುದೀಪ್ ಅವರು, ‘ಕಿಚ್ಚನ ಮೆಚ್ಚುಗೆಯ ಚಪ್ಪಾಳೆ’ಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಭಾವುಕರಾದ ಡ್ರೋಣ್ ಪ್ರತಾಪ್ ಅವರು, “ಇದು ನನ್ನ ಜೀವನದ ಅತಿದೊಡ್ಡ ಕ್ಷಣ. ಹೊರಗಿನ ಪ್ರಪಂಚದಲ್ಲಿ ಎರಡೂ ಕಡೆಗಳಲ್ಲಿ ಏನು ತಪ್ಪಾಗುತ್ತೆ ಅನ್ನೋದು ಕಾಣಿಸಲ್ಲ. ಹೌದು ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ. ಅದನ್ನು ಹೇಳಿಕೊಳ್ಳೋಕೆ ಯಾವುದೇ ಮುಜುಗರ ಇಲ್ಲ ಸರ್, ಆದ್ರೆ ನನ್ನನ್ನು ಕಳ್ಳ ಅಂದವರು, ಸುಳ್ಳ ಅಂದವರು, ನನ್ನ ಬಗ್ಗೆ ಹೀಯಾಳಿಸಿದವರು… ಈಗ ನೆನಪಿಸಿಕೊಂಡ್ರೆ ಮನಸು ತುಂಬಾ ಹಗುರ ಅನಿಸ್ತಿದೆ” ಎಂದು ಮನಬಿಚ್ಚಿ ಕಿಚ್ಚನ ಮುಂದೆ ಮಾತನಾಡಿದ್ದಾರೆ.

ಇದನ್ನೂ ಓದಿ: ನೆದರ್ಲ್ಯಾಂಡ್ ಪಂದ್ಯಕ್ಕೆ ಹೀಗಿರಲಿದೆ ಟೀಂ ಇಂಡಿಯಾದ ಪ್ಲೇಯಿಂಗ್ 11

ಸದ್ಯ ಈ ವಿಡಿಯೋವನ್ನು colorskannadaofficial ಪೇಜ್’ನಲ್ಲಿ ಶೇರ್ ಮಾಡಲಾಗಿದೆ. ಡ್ರೋಣ್ ಪ್ರತಾಪ್ ಅವರಿಗೆ ಕಿಚ್ಚ ಮೆಚ್ಚುಗೆಯ ಚಪ್ಪಾಳೆ ನೀಡಿದ್ದೇ ತಡ ಅವರ ಅಭಿಮಾನಿಗಳು ಸಂತಸದಲ್ಲಿ ಕುಣಿದಾಡಿದ್ದಾರೆ. “ಪ್ರತಾಪ್ ಗೆದ್ದಷ್ಟೇ ಖುಷಿಯಾಯ್ತು” ಎಂದು ಒಬ್ಬರು ಹೇಳಿದ್ರೆ, “ಒಳ್ಳೆಯದಾಗಲಿ ಪ್ರತಾಪ್ ನೀನು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು” ಮತ್ತೊಬ್ಬರು ಹೇಳಿದ್ದಾರೆ.

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News