ಅಯೋಧ್ಯೆಯಲ್ಲಿ ಸನ್‌ಗ್ಲಾಸ್‌ ಧರಿಸಿ ಕಸ ಗುಡಿಸಿದ ಕಂಗನಾ ವಿಡಿಯೋ ವೈರಲ್!

Kangana Ranaut: ಬಾಲಿವುಡ್‌ ನಟಿ ಕಂಗನಾ ರನೌತ್‌ ನಿನ್ನೆ ಅಯೋಧ್ಯೆ ತಲುಪಿ ಅಲ್ಲಿಯ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರ ಜೊತೆಗೆ, ರಾಮ ಮಂದಿರದಲ್ಲಿ ರೇಷ್ಮನೆ ಸೀರೆಯಲ್ಲಿ ಸನ್‌ಗ್ಲಾಸ್‌ ಧರಿಸಿ ಪೊರಕೆ ಹಿಡಿದು ನೆಲ ಸ್ವಚ್ಚಗೊಳಿಸುತ್ತಿರುವ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.  

Written by - Zee Kannada News Desk | Last Updated : Jan 22, 2024, 09:25 AM IST
  • ನಿನ್ನೆಯೇ ಬಾಲಿವುಡ್ ನಟಿ ಕಂಗನಾ ರನೌತ್ ಅಯೋಧ್ಯೆ ತಲುಪಿ ಅಲ್ಲಿಯ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
  • ನಟಿ ಕಂಗನಾ ಅಯೋಧ್ಯೆಯ ದೇವಾಲಯದಲ್ಲಿ ಪೊರಕೆ ಹಿಡಿದು ಆವರಣವನ್ನು ಸ್ವಚ್ಛಗೊಳಿಸಿದ್ದಾರೆ.
  • ನಟಿ ಕಂಗನಾ ರನೌತ್‌ ಇನ್‌ಸ್ಟಾಗ್ರಾಮ್‌ನಲ್ಲಿ ಅಯೋಧ್ಯಾ ಧಾಮದಲ್ಲಿ ಶ್ರೀರಾಮನನ್ನು ಸ್ವಾಗತಿಸಲು ಎಲ್ಲರೂ ಸಂತೋಷಪಡುತ್ತಾರೆ ಎಂದು ಬರೆದಿದ್ದಾರೆ.
ಅಯೋಧ್ಯೆಯಲ್ಲಿ ಸನ್‌ಗ್ಲಾಸ್‌ ಧರಿಸಿ ಕಸ ಗುಡಿಸಿದ ಕಂಗನಾ ವಿಡಿಯೋ ವೈರಲ್! title=

Kangana Ranaut At Ayodhya: ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ  ಇಡೀ ದೇಶವೆ ಕಾತುರದಿಂದ ಕಾಯುತ್ತಿದ್ದು, ಈ ಸಮಾರಂಭಕ್ಕೆ ಸೆಲಬ್ರಿಟಿಗಳು ದಂಡು ದಂಡಾಗಿ ತೆರಳುತಿದ್ದಾರೆ. ದಶಕಗಳಿಂದ ಇದ್ದ ಕೋಟ್ಯಾಂತರ ಮಂದಿಯ ಕನಸು ನನಸಾಗಿದ್ದು, ಇಂದು ಹೊಸ ರಾಮಮಂದಿರದಲ್ಲಿ ರಾಮ್ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗುತ್ತಿದ್ದು, ನಿನ್ನೆಯೇ ಬಾಲಿವುಡ್ ನಟಿ ಕಂಗನಾ ರನೌತ್ ಅಯೋಧ್ಯೆ ತಲುಪಿ ಅಲ್ಲಿಯ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ನಟಿ ಕಂಗನಾ ಜನವರಿ 21 ರ ಭಾನುವಾರದಂದು ಅಯೋಧ್ಯೆ ತಲುಪಿ ಪೂಜಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಯಾಗದಲ್ಲಿ ಪಾಲ್ಗೊಂಡು, ಅಯೋಧ್ಯೆಯ ದೇವಾಲಯದಲ್ಲಿ ಪೊರಕೆ ಹಿಡಿದು ಆವರಣವನ್ನು ಸ್ವಚ್ಛಗೊಳಿಸಿದ್ದಾರೆ. ಈ ನಟಿ ಆ ವೇಳೆ ರೇಷ್ಮೆ ಸೀರೆ ತೊಟ್ಟು, ಭಾರವಾದ ಒಡವೆಗಳು ಮತ್ತು ಸನ್‌ಗ್ಲಾಸ್ ಧರಿಸಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 
ಕಂಗನಾ ಭಾನುವಾರ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನ್ಲಲಿ ಸರಣಿ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪಿಎಂ ಮೋದಿಗೆ ʼಆಂಜನಾಸುತʼ ಫೋಟೋ ಗಿಫ್ಟ್‌ ನೀಡಿದ ನಟ ಅರ್ಜುನ್ ಸರ್ಜಾ..!

ಕಂಗನಾ ಇನ್‌ಸ್ಟಾಗ್ರಾಮ್‌ನಲ್ಲಿ ಅಯೋಧ್ಯೆಗೆ ಹೋಗುತ್ತಿರುವುದು, ಅಲ್ಲಿ ದೇವಾಲಯದ ಕಸ ಗುಡಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸಕತ್ ಚೆನ್ನಾಗಿ ತಯಾರಾಗಿದ್ದ ಅವರು, ದೇವಸ್ಥಾನದಲ್ಲಿ ದೇವರ ಸೇವೆ ಒದಗಿಸುವ ಭಾಗವಾಗಿ ಕೈಯಲ್ಲಿ ಪೊರಕೆ ಹಿಡಿದು ನೆಲ ಸ್ವಚ್ಚಗೊಳಿಸಿದ್ದಾರೆ. ಇವುಗಳ ಜೊತೆಗೆ ಅಯೋಧ್ಯೆಯಲ್ಲಿಯ ಸ್ವಾಮಿಜೀ, ಗುರೂಜಿಗಳನ್ನು ಭೇಟಿಯಾಗಿ, ಕೆಲವು ಸಂತರು ಮತ್ತು ಋಷಿಗಳೊಂದಿಗೆ ಯಾಗವನ್ನು ನಿರ್ವಹಿಸುತ್ತಿರುವ ಚಿತ್ರಗಳನ್ನು ಸಹ ಶೇರ್‌ ಮಾಡಿ, ಮತ್ತೆ ಸಂತ ರಾಮಭದ್ರಾಚಾರ್ಯರ ಆಶೀರ್ವಾದವನ್ನು ತೆಗೆದುಕೊಂಡು, ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. 

ನಟಿ ಕಂಗನಾ ರನೌತ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹಿಂದಿಯಲ್ಲಿ, "ಕೆಲಸದಲ್ಲಿಯೂ ರಾಮನಿದ್ದಾನೆ. ಇಂದು ನಾನು ಅತ್ಯಂತ ಪೂಜ್ಯ ಶ್ರೀ ರಾಮಭದ್ರಾಚಾರ್ಯರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದೆ. ಅವರು ಆಯೋಜಿಸಿದ್ದ ಶಾಸ್ತ್ರಾವತ್ ಸಾಮೂಹಿಕ ಹನುಮಾನ್ ಜೀ ಯಾಗದಲ್ಲಿ ಭಾಗವಹಿಸಿದೆ. ಅಯೋಧ್ಯಾ ಧಾಮದಲ್ಲಿ ಶ್ರೀರಾಮನನ್ನು ಸ್ವಾಗತಿಸಲು ಎಲ್ಲರೂ ಸಂತೋಷಪಡುತ್ತಾರೆ. ನಾಳೆ ಅಯೋಧ್ಯೆಯ ರಾಜ ದೀರ್ಘ ವನವಾಸದ ನಂತರ ತನ್ನ ಮನೆಗೆ ಬರುತ್ತಿದ್ದಾನೆ. ಬಾ ನನ್ನ ರಾಮ, ಬಾ ನನ್ನ ರಾಮ" ಎನ್ನುತ್ತಾ ಸಂಭ್ರಮಿಸಿದ್ದಾರೆ. 

ಇದನ್ನೂ ಓದಿ: ಸರಿಗಮಪ ತನುಶ್ರೀ ಕಂಠಸಿರಿಯಲ್ಲಿ ʼಸನಾತನ ಅಯೋಧ್ಯಾ ಕಾ ರಾಮ್ʼ..! ತಪ್ಪದೇ ಕೇಳಿ

ಕಂಗನಾ ರನೌತ್‌ "ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಬಗ್ಗೆ ಇಡೀ ದೇಶವೇ ಭಾವುಕವಾಗಿದೆ. ಶತಮಾನಗಳ ನಂತರ ರಾಮಲಲ್ಲ ತನ್ನ ಮನೆಗೆ ಮರಳುತ್ತಿದ್ದಾರೆ. ಇದು ಅತ್ಯಂತ ಅದೃಷ್ಟದ ದಿನ. ಈ ದಿನವನ್ನು ವಿವರಿಸಲು ನಮ್ಮಲ್ಲಿ ಪದಗಳಿಲ್ಲ" ಎಂದು ಹೇಳಿದ್ದರು. ಇದಕ್ಕೂ ಮುನ್ನ ಅಯೋಧ್ಯೆಯ ದೇವಾಲಯದ ಗರ್ಭಗುಡಿಯೊಳಗೆ ಇರಿಸಲಾಗಿರುವ ಬಾಲರಾಮನ ವಿಗ್ರಹವನ್ನು ನಟಿ ಕಂಗನಾ ಹೊಗಳಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News