Ram Mandir: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ವೇಳೆ ಹರ್ಷೋಲಾಸದಿಂದ 'ಜೈ ಶ್ರೀರಾಮ್' ಘೋಷಣೆ ಮೊಳಗಿಸಿದ ಕಂಗನಾ ರಣಾವತ್

Ram Mandir Pran Pratisthapana: ಇಂದು, ಸೋಮವಾರ, ಜನವರಿ 22 ರಂದು, ಅಯೋಧ್ಯಾ ನಗರಿಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹರ್ಷೋಲ್ಲಾಸದಿಂದ ನೆರವೇರಿದೆ.  ಇಂದು ಅಯೋಧ್ಯೆಯಲ್ಲಿ ರಾಜಕೀಯ ಮುಖಂದರಿಂದ ಹಿಡಿದು ನಟ-ನಟಿಯರ ದಂಡೆ ನೆರದಿತ್ತು.  ಈ ಮಧ್ಯೆ ರಾಮಭಕ್ತರ ಮನಗೆದ್ದಿರುವ ಕಂಗನಾ ರಣಾವತ್ ಅವರ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. (Entertainment News In Kannada)  

Written by - Nitin Tabib | Last Updated : Jan 22, 2024, 05:02 PM IST
  • ಈ ಅದ್ಧೂರಿ ಸಮಾರಂಭದಲ್ಲಿ, ರಾಜಕಾರಣಿಗಳಿಂದ ಹಿಡಿದು ನಟರು ಮತ್ತು ಗಾಯಕರು ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲು ಅಯೋಧ್ಯೆಗೆ ತೆರಳಿದ್ದರು.
  • ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿದ್ದು,
  • ಅವುಗಳಿಗೆ ಸಾಕಷ್ಟು ಲೈಕ್ ಗಳು ಕೂಡ ಬರುತ್ತಿವೆ.
Ram Mandir: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ವೇಳೆ ಹರ್ಷೋಲಾಸದಿಂದ 'ಜೈ ಶ್ರೀರಾಮ್' ಘೋಷಣೆ ಮೊಳಗಿಸಿದ ಕಂಗನಾ ರಣಾವತ್  title=

Ram Mandir Pran Pratisthapana: ಇಂದು, ಸೋಮವಾರ, ಜನವರಿ 22 ರಂದು, ಅಯೋಧ್ಯಾ ನಗರಿಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹರ್ಷೋಲ್ಲಾಸದಿಂದ ನೆರವೇರಿದೆ.  ಇಂದು ಅಯೋಧ್ಯೆಯಲ್ಲಿ ರಾಜಕೀಯ ಮುಖಂದರಿಂದ ಹಿಡಿದು ನಟ-ನಟಿಯರ ದಂಡೆ ನೆರದಿತ್ತು.  ಈ ಮಧ್ಯೆ ರಾಮಭಕ್ತರ ಮನಗೆದ್ದಿರುವ ಕಂಗನಾ ರಣಾವತ್ ಅವರ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. (Entertainment News In Kannada)

Ayodhya Ram Mandir: ಇಂದು, ಸೋಮವಾರ, ಜನವರಿ 22, ದೇಶದ ಪಾಲಿಗೆ ಒಂದು ಮಹತ್ವದ ದಿನವಾಗಿದೆ. ಇಂದು, ಅಯೋಧ್ಯಾ ಧಾಮದಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ರಾಮಮಂದಿರದಲ್ಲಿ ಶ್ರೀರಾಮನ ಬಾಲ ರೂಪದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ದೇಶಾದ್ಯಂತ ಜನರು ತಮ್ಮ ತಮ್ಮ ಸ್ಥಳಗಳಿಂದ ಈ ವಿಶೇಷ ಕ್ಷಣವನ್ನು ವೀಕ್ಷಿಸಿದ್ದಾರೆ ಮತ್ತು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲ ಎಲ್ಲರೂ ಸಾಮಾಜಿಕ ಜಾಲತಾಣಗಳ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೇಶದ ಎಲ್ಲಾ ದೊಡ್ಡ ವ್ಯಕ್ತಿಗಳು ಉಪಸ್ಥಿತರಿದ್ದರು.

ಈ ಅದ್ಧೂರಿ ಸಮಾರಂಭದಲ್ಲಿ, ರಾಜಕಾರಣಿಗಳಿಂದ ಹಿಡಿದು ನಟರು ಮತ್ತು ಗಾಯಕರು ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲು ಅಯೋಧ್ಯೆಗೆ ತೆರಳಿದ್ದರು. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿದ್ದು, ಅವುಗಳಿಗೆ ಸಾಕಷ್ಟು ಲೈಕ್ ಗಳು ಕೂಡ ಬರುತ್ತಿವೆ. ಏತನ್ಮಧ್ಯೆ, ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅವರು ತಮ್ಮ ಮಾತಿನ ಶೈಲಿ ಮತ್ತು ಹೇಳಿಕೆಗಳಿಂದ ಹೆಡ್ ಲೈನ್ಸ್‌ ಸೃಷ್ಟಿಸುತ್ತಿದ್ದಾರೆ. ಅವರ  ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಅವರು 'ರಾಮ್‌ಮಯ್' ಮೇಲೆ ನೃತ್ಯ ಮಾಡುತ್ತಿದ್ದಾರೆ. 'ಜೈ ಶ್ರೀ ರಾಮ್' ಘೋಷಣೆಗಳನ್ನು ಮೊಳಗಿಸಿದ್ದಾರೆ.

 ರಾಮಾಮಯವಾದ ಕಂಗನಾ ರಣಾವತ್
ವೀಡಿಯೊದಲ್ಲಿ ನಟಿಯ ಮುಖದಲ್ಲಿ ಅದ್ಭುತ ಸಂಭ್ರಮವನ್ನು ನೀವು ನೋಡಬಹುದು. ಈ ವೀಡಿಯೋವನ್ನು ಖುದ್ದು ನಟಿಯೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈ ಸಂದರ್ಭದಲ್ಲಿ, ನಟಿ ಬಿಳಿ ಮತ್ತು ಕೆಂಪು ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ, ಅದರೊಂದಿಗೆ ನಟಿ ಕೆಂಪು ಬಣ್ಣದ ಶಾಲನ್ನು ಹೊದ್ದುಕೊಂಡಿದ್ದಾಳೆ. ಅಲ್ಲದೆ, ನಟಿ ತುಂಬಾ ಸಾಂಪ್ರದಾಯಿಕ ನೋಟವನ್ನು ಅನುಸರಿಸುತ್ತಿರುವುದು ಕಂಡುಬಂದಿದೆ. ಈ ವೀಡಿಯೊವನ್ನು ಹಂಚಿಕೊಂಡ, ಕಂಗನಾ ಅವರು 'ರಾಮ ಆಗಮಿಸಿದ್ದಾರೆ' ಎಂಬ ಶೀರ್ಷಿಕೆ ಬರೆದುಕೊಂಡಿದ್ದಾರೆ ಮತ್ತು ಕೆಂಪು ಧ್ವಜದ ಎಮೋಜಿಯನ್ನು ಸಹ ಹಂಚಿಕೊಂಡಿದ್ದಾರೆ.

ಸಂಭ್ರಮದಿಂದ ಕುಣಿದು ಕುಪ್ಪಳಿಸಿ 'ಜೈಶ್ರೀರಾಮ್' ಘೋಷಣೆ ಮೊಳಗಿಸಿದ ಕಂಗನಾ ರಣಾವತ್
ಇದಲ್ಲದೆ, ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಕೆಲವು ಸುಂದರವಾದ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ, ಇದರಲ್ಲಿ ನಟಿ ಅಯೋಧ್ಯೆಯ ರಾಮ ಮಂದಿರದ ಹೊರಗೆ ನಿಂತಿರುವುದನ್ನು ಕಂಡುಬರುತ್ತಿದೆ  ಮತ್ತು ಅವರ ಮುಖದಲ್ಲಿ ಸಂತೋಷವು ಸ್ಪಷ್ಟವಾಗಿ ಗೋಚರಿಸುತಿದೆ. ಆದರೆ, ನಾವು ನಟಿಯ ವೃತ್ತಿ ಜೀವನದ ಕುರಿತು ಹೇಳುವುದಾದರೆ, ಕಂಗನಾ ಕೊನೆಯ ಬಾರಿಗೆ 'ತೇಜಸ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಳು, ಅದರ ನಂತರ ಅವರು ಈಗ 'ಎಮರ್ಜೇಂಸಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ.  ಈ ಚಿತ್ರದಲ್ಲಿ ಅನೇಕ ದೊಡ್ಡ ತಾರೆಗಳು ಕೂಡ ಅವರೊಂದಿಗೆ ಕಾಣಿಸಿಕೊಳ್ಳುಲಿದ್ದಾರೆ. ಈ ಚಿತ್ರವು ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆ ಇದೆ, ಪ್ರಸ್ತುತ ಅದರ ಬಿಡುಗಡೆಯ ದಿನಾಂಕದ ಬಗ್ಗೆ ಯಾವುದೇ ಘೋಷಣೆ ಮಾಡಲಾಗಿಲ್ಲ.

ವೈರಲ್ ವಿಡಿಯೋ ಮತ್ತು ಚಿತ್ರಗಳು ಇಲ್ಲಿವೆ 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News