Puttakkana Makkalu: ಪುಟ್ಟಕ್ಕನ ಮನೆಯಲ್ಲಿ ಶೋಕ: ಸಹನಾ ಸಾವಿನ ಕುರಿತು ಬಿಗ್‌ ಟ್ವಿಸ್ಟ್!

Puttakkana Makkalu Kannada Serial: ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸಹನಾ ಸತ್ತು ಹೋಗಿದ್ದಾಳೆಂದು ಮನೆಯಲ್ಲಿ ಪುಟ್ಟಕ್ಕ ಸೇರಿ ಸ್ನೇಹಾ, ಸುಮ, ಮುರಳಿ ಹಾಗೂ ಎಲ್ಲರ ನೋವು ಮುಗಿಲು ಮುಟ್ಟಿದ್ದು, ಇನ್ನೊಂದೆಡೆ ಸಹನಾ ಸಾವಿನ ಬಗ್ಗೆ ವೀಕ್ಷಕರಿಗೆ ದೊಡ್ಡ ತಿರುವು ಸಿಕ್ಕಿದೆ. ಏನಿದು? ಇದೆ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.  

Written by - Zee Kannada News Desk | Last Updated : May 8, 2024, 11:18 AM IST
  • ಪುಟ್ಟಕ್ಕ ನನಗೆ ನನ್ನ ಮಗಳು ಬೇಕೆಂದು ಗೊಳಾಡುತ್ತಿರುವಾಗ, ಮುರಳಿ ಸಹನಾ ಎಂದುಕೊಂಡು ಬೇರೆ ಹೆಂಗಸಿನ ಚಿತೆಗೆ ಬೆಂಕಿ ಇಡುತ್ತಾನೆ.
  • ಸಹನಾ ಅಗಲಿಕೆಯ ನೋವು ಮುಗಿಲು ಮುಟ್ಟಿದ್ದು, ಅಕ್ಕನ ನೆನಪಲ್ಲಿ ಸ್ನೇಹಾ ಹಾಗೂ ಸುಮಾ ಕೊರಗುತ್ತಾ ಇದ್ದಾರೆ.
  • ಅದೇ ವೇಳೆ ಅರ್ಚಕರು ಬಂದು ಏನಾಯಿತು ಎಂದಾಗ ಸಹನಾ ತಲೆ ತಿರುಗಿ ಬಿದ್ದ ವಿಚಾರವನ್ನು ಹೆಂಗಸರು ಹೇಳುತ್ತಾರೆ.
Puttakkana Makkalu: ಪುಟ್ಟಕ್ಕನ ಮನೆಯಲ್ಲಿ ಶೋಕ: ಸಹನಾ ಸಾವಿನ ಕುರಿತು ಬಿಗ್‌ ಟ್ವಿಸ್ಟ್! title=

Sahana Is Alive In Puttakkana Makkalu: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸಹನಾ ಸಾವಿನ ದುಖಃದಲ್ಲಿ ಮನೆಯವರೆಲ್ಲರೂ ಇದ್ದೇ ಇನ್ನೊಂದು ಕಡೆ ದೊಡ್ಡ ಟ್ವಿಸ್ಟ್‌ ನಡೆದಿದೆ. ಮನೆಯಲ್ಲಿ ಪುಟ್ಟಕ್ಕ ಸಹನಾ ಸತ್ತು ಹೋದಳು ನಾವು ಇನ್ನೂ ಯಾರನ್ನು ಸಹನಾ ಎಂದು ಕರೆಯಲಿಯೆಂದು ಅಳುತ್ತಿರುವಾಗ, ಇನ್ನೊಂದೆಡೆ ಮುರಳಿ ಸಹನಾ ಯಾವತ್ತೂ ಇಂತಹ ಕೆಲಸ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ತನ್ನ ಹೆಂಡತಿ ನನ್ನ ಒಬ್ಬಂಟಿ ಮಾಡಿ ಹೊರಟು ಹೋದಳಲ್ಲಾವೆಂದು ಬೇಸರಾಗಿರುತ್ತಾನೆ.

ಪುಟ್ಟಕ್ಕ ನನಗೆ ನನ್ನ ಮಗಳು ಬೇಕೆಂದು ಗೊಳಾಡುತ್ತಿರುವಾಗ, ಮುರಳಿ ಸಹನಾ ಎಂದುಕೊಂಡು ಬೇರೆ ಹೆಂಗಸಿನ ಚಿತೆಗೆ ಬೆಂಕಿ ಇಡುತ್ತಾನೆ. ಪುಟ್ಟಕ್ಕನಿಗೆ ಬಂಗಾರಮ್ಮ ಕೂಡ ಅದೆಷ್ಟೇ ಸಮಾಧಾನ ಹೇಳಿದರೂ ಕಣ್ಣೀರು ಹಾಕುತ್ತಾ ತನ್ನ ಮಗಳು ನಾನು ಕಷ್ಟದಲ್ಲಿ ಇರಬೇಕಾದರೆ ಹೆಗಲಿಗೆ ಹೆಗಲು ಕೊಟ್ಟಿದ್ದಳು, ಆದರೆ, ಇದೀಗ ಏನಾಗುತ್ತಿದೆ, ನನ್ನ ಮಗಳನ್ನು ಆ ದೇವರು ಕರೆದುಕೊಂಡು ಬಿಟ್ಟನಲ್ವ ಎಂದ್ಹೇಳುತ್ತಾಳೆ. ಇದೀಗ ಪುಟ್ಟಕ್ಕನ  ಮನೆಯಲ್ಲಿ ಸೂತಕದ ವಾತಾವರಣವಿದೆ.

ಇದನ್ನೂ ಓದಿ: Aishwarya Arjun: ಆಕ್ಷನ್‌ ಕಿಂಗ್‌ ಪುತ್ರಿ ಐಶ್ವರ್ಯಾ ವಿವಾಹ ಮುಹೂರ್ತ ಫಿಕ್ಸ್‌: ಮದುವೆ ಯಾವಾಗ ಗೊತ್ತೇ?

ಸಹನಾ ಅಗಲಿಕೆಯ ನೋವು ಮುಗಿಲು ಮುಟ್ಟಿದ್ದು,  ಅಕ್ಕನ ನೆನಪಲ್ಲಿ ಸ್ನೇಹಾ ಹಾಗೂ ಸುಮಾ ಕೊರಗುತ್ತಾ ಇದ್ದಾರೆ. ಮುರಳಿಯು ಸಹ ತನ್ನ ಹೆಂಡತಿ ಮದುವೆಯಾದ ನಂತರ ಅದೆಷ್ಟು ಕಷ್ಟ ಪಟ್ಟಳು. ಆದರೆ, ನಾನೇ ಆಕೆಯನ್ನು ಅರ್ಥ ಮಾಡಿಕೊಳ್ಳಲಿಲ್ಲ. ಇದೀಗ ನನ್ನನ್ನು ಬಿಟ್ಟು ದೂರ ಹೋಗಿ ಬಿಟ್ಟಳು. ಯಾವತ್ತೂ ನನ್ನ ಕೈಗೆ ಆಕೆ ಸಿಗಲಾರದಷ್ಟು ದೂರ ಹೋಗಿದ್ದಾಳೆಂದು ಅಳುತ್ತಿರುತ್ತಾನೆ.

ಸದ್ಯಕ್ಕೆ ಈ ಕಥೆಯಲ್ಲಿರುವ ಬಿಗ್‌ ಟ್ವಿಸ್ಟ್‌ ಎಂದರೆ ಸಹನಾ ಇನ್ನೂ ಬದುಕಿದ್ದಾಳೆ. ಹಳ್ಳಿಯಿಂದ ಬೆಂಗಳೂರಿಗೆ ಬಂದ ಸಹನಾ ರಾತ್ರಿ ಹೊತ್ತಲ್ಲಿ ದೇವಸ್ಥಾನದ ಹತ್ತಿರ ಆಶ್ರಯ ಪಡೆಯುತ್ತಾಳೆ. ಮರುದಿನ ಬೆಳಗ್ಗೆ ಆ ದೇವಾಲಯದ ಅರ್ಚಕರು ದೇವರ ಪೂಜೆ ಮಾಡಿ ಆರತಿ ಕೊಡುವಾಗ ಸಹನಾಳನ್ನು ಸ್ವಲ್ಪ ಹೊತ್ತು ನೋಡಿ ಅಲ್ಲಿಂದ ಹೋಗುತ್ತಾರೆ. ತದನಂತರ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗ ಸಹನಾಗೆ ತೆಲೆ ಸುತ್ತು ಬಂದಹಾಗೆಯಾಗಿ ತಿರುಗಿ ಬೀಳುತ್ತಾಳೆ. ಆಗ ಅಲ್ಲಿ  ಅಕ್ಕ ಪಕ್ಕದಲ್ಲಿದ್ದ ಹೆಂಗಸರು ಆಕೆಯ ಬಳಿ ಓಡಿ ಬರುತ್ತಾರೆ.

ಇದನ್ನೂ ಓದಿ: Salman Khan: ಹೆಂಡತಿ ಇಲ್ಲ, ಮಕ್ಕಳಿಲ್ಲ, ಸಲ್ಮಾನ್ ಅವರ ಕೋಟಿಗಟ್ಟಲೆ ಆಸ್ತಿ ಯಾರಿಗೆ ಸಿಗುತ್ತದೆ?

ದೇವಸ್ಥಾನದಲ್ಲಿಯಿದ್ದ ಮಹಿಳೆಯರು ಸಹನಾಗೆ ಏನಾಯಿತಮ್ಮ ಯಾಕೆ ಹೀಗೆಲ್ಲ ಆಯಿತೆಂದು ಕುಡಿಯಲು ನೀರು ಕೊಟ್ಟರು. ಬಳಿಕ ಆಕೆಯನ್ನು ಮೆಟ್ಟಿಲ ಹತ್ತಿರ ಕರೆದುಕೊಂಡು ಬಂದು ಕೂರಿಸುತ್ತಾರೆ. ಅದೇ ವೇಳೆ ಅರ್ಚಕರು ಬಂದು ಏನಾಯಿತು ಎಂದಾಗ ಸಹನಾ ತಲೆ ತಿರುಗಿ ಬಿದ್ದ ವಿಚಾರವನ್ನು ಹೆಂಗಸರು ಹೇಳುತ್ತಾರೆ. ನಂತರ ಅರ್ಚಕರು ಆಕೆಗೆ ತಿನ್ನಲು ಪ್ರಸಾದ ತನ್ನಿ ಎಂದು ಹೇಳಿ ಅಲ್ಲಿಂದ ಹೆಂಗಸರನ್ನು ಕಳುಹಿಸುತ್ತಾನೆ. ಮುಂದೆ ಸಹನಾ ಬದುಕುಳಿದಿರುವ ವಿಷಯ ಎಲ್ಲರಿಗೂ ಗೊತ್ತಾಗುತ್ತಾ? ದೊಡ್ಡ ಸಿಟಿಯಲ್ಲಿ ಸಹನಾ ಹೇಗಿರುತ್ತಾಳೆ ಎಂಬುದನ್ನು ಮುಂಬರುವ ಸಂಚಿಕೆಯಲ್ಲಿ ಕಾದು ನೋಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News