Assembly Elections 2018: ಇದು ಕಾಂಗ್ರೆಸ್ ಗೆಲುವಲ್ಲ; ಜನತೆಯ ಸಿಟ್ಟಿನ ಫಲ

ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್ಘಡ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. 

Last Updated : Dec 11, 2018, 01:18 PM IST
Assembly Elections 2018: ಇದು ಕಾಂಗ್ರೆಸ್ ಗೆಲುವಲ್ಲ; ಜನತೆಯ ಸಿಟ್ಟಿನ ಫಲ title=

ನವದೆಹಲಿ: ಪಂಚ ರಾಜ್ಯಗಳ ಚುನಾವಣಾ ಮತಎಣಿಕೆ ಅಂತಿಮ ಹಂತದಲ್ಲಿದ್ದು, ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್ಘಡ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ ನಾಯಕ ಸಂಜಯ್ ರಾವತ್, "ಇದು ಕಾಂಗ್ರೆಸ್ ಗೆಲುವೆಂದು ನಾನು ಹೇಳುವುದಿಲ್ಲ, ಇದು ಜನತೆಯ ಸಿಟ್ಟಿನ, ಅಸಮಾಧಾನದ ಫಲ. ಬಿಜೆಪಿಗೆ ಆತ್ಮಾವಲೋಕನದ ಅಗತ್ಯವಿದೆ" ಎಂದಿದ್ದಾರೆ. 

ಇತ್ತೀಚಿನ ವರದಿಗಳ ಪ್ರಕಾರ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ್ದರೂ ಸಹ, ದೇಶಕ್ಕೆ ಉತ್ತಮ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದೆ. ಆದರೆ, ಇತ್ತೀಚಿನ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ಗಮನಿಸಿದರೆ, ವಿರೋಧ ಪಕ್ಷಕ್ಕೆ ಜನತೆ ಒಲವು ತೋರಿಸಿರುವುದು ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ. 

Trending News