Chhattisgarh : ಕಂಕೇರ್‌ನಲ್ಲಿ ಎನ್‌ಕೌಂಟರ್‌ : 29 ಮಾವೋವಾದಿಗಳ ಪೈಕಿ ಪ್ರಮುಖ ನಾಯಕ ಹತ್ಯೆ , 3 ಯೋಧರಿಗೆ ಗಾಯ

Chattisgarh : ಮಂಗಳವಾರ ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ  29 ನಕ್ಸಲರ ಪೈಕಿ 1 ಪ್ರಮುಖ ನಾಯಕನ ಹತ್ಯೆಯಾಗಿದೆ.

Written by - Zee Kannada News Desk | Last Updated : Apr 16, 2024, 08:00 PM IST
  • ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಎನ್‌ಕೌಂಟರ್‌ ನಡೆದಿದ್ದು, ಭದ್ರತಾ ಪಡೆ ಹಾಗೂ ಜಿಲ್ಲಾ ಮೀಸಲು ಪಡೆ ಸೇರಿ ನಡೆಸಿವೆ.
  • ನಾಯಕ ಶಂಕರ್ ರಾವ್ ಕುರಿತು ಮಾಹಿತಿ ನೀಡಿದವರಿಗೆ 25 ಲಕ್ಷ ರೂಪಾಯಿ ಬಹುಮಾನವನ್ನು ರಾಜ್ಯ ಪೊಲೀಸರು ಘೋಷಿಸಿದ್ದರು.
  • ಗುಂಡಿನ ಚಕಮಕಿಯಲ್ಲಿ ತನ್ನ ಒಬ್ಬ ಸಿಬ್ಬಂದಿಯ ಕಾಲಿಗೆ ಬುಲೆಟ್ ಗಾಯವಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಬಿಎಸ್‌ಎಫ್ ತಿಳಿಸಿದೆ.
Chhattisgarh : ಕಂಕೇರ್‌ನಲ್ಲಿ ಎನ್‌ಕೌಂಟರ್‌ : 29 ಮಾವೋವಾದಿಗಳ ಪೈಕಿ ಪ್ರಮುಖ ನಾಯಕ ಹತ್ಯೆ , 3 ಯೋಧರಿಗೆ ಗಾಯ title=

Kanker encounter : ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ  29 ನಕ್ಸಲರ ಪೈಕಿ 1 ಪ್ರಮುಖ ನಾಯಕನ ಹತ್ಯೆಯಾಗಿದೆ.

ಕಂಕೇರ್ ಜಿಲ್ಲೆಯಲ್ಲಿ ಎನ್‌ಕೌಂಟರ್‌ ನಡೆದಿದ್ದು, ಭದ್ರತಾ ಪಡೆ ಹಾಗೂ ಜಿಲ್ಲಾ ಮೀಸಲು ಪಡೆ ಸೇರಿ ನಡೆಸಿವೆ. ಈ ನಕಲ್ಸರಲ್ಲಿ ನಾಯಕ ಸೇರಿದಂತೆ 18 ಜನ ಹತರಾಗಿದ್ದಾರೆ. 

ಇದನ್ನು ಓದಿ : IPL 2024 : ಈಡೆನ್ ಗಾರ್ಡನ್ ನಲ್ಲಿ ಅಗ್ರ ಸ್ಥಾನದ ಎರಡು ತಂಡಗಳು ಮುಖಾಮುಖಿ

ಛೋಟೆಬೆಥಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಬಿನಗುಂದ ಮತ್ತು ಕೊರೊನಾರ್ ಗ್ರಾಮಗಳ ನಡುವಿನ ಹಪಟೋಲಾ ಅರಣ್ಯದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ನಕ್ಸಲ್ ನಾಯಕ ಶಂಕರ್ ರಾವ್ ಹತ್ಯೆಗೈದಿದ್ದಾರೆ. 

ನಾಯಕ ಶಂಕರ್ ರಾವ್ ಕುರಿತು ಮಾಹಿತಿ ನೀಡಿದವರಿಗೆ 25 ಲಕ್ಷ ರೂಪಾಯಿ ಬಹುಮಾನವನ್ನು ರಾಜ್ಯ ಪೊಲೀಸರು ಘೋಷಿಸಿದ್ದರು.  ಗುಂಡಿನ ಚಕಮಕಿಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ರಾಜ್ಯ ಪೊಲೀಸ್‌ನ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಜಂಟಿ ತಂಡ ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿ ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

"ಎನ್‌ಕೌಂಟರ್ ನಂತರ, ಪ್ರದೇಶವನ್ನು ಶೋಧ ಮಾಡಿದಾಗ 29 ನಕ್ಸಲರ ಮೃತ ದೇಹಗಳು ಮತ್ತು AK 47 ರೈಫಲ್, INSAS/SLR/Carbine/.303 ರೈಫಲ್‌ಗಳು ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮದ್ದುಗುಂಡುಗಳು ಸ್ಥಳದಿಂದ ವಶಪಡಿಸಿಕೊಂಡವು" ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ : RCB ಮಾಲೀಕ ಯಾರು ಗೊತ್ತಾ? ಇವರ ನಿವ್ವಳ ಮೌಲ್ಯ ಎಷ್ಟೆಂದು ತಿಳಿದರೆ ಶಾಕ್ ಆಗೋದು ಗ್ಯಾರಂಟಿ

ಈ ಪ್ರದೇಶದಲ್ಲಿ ಹಿರಿಯ ನಕ್ಸಲರಾದ ಶಂಕರ್, ಲಲಿತಾ ಮತ್ತು ರಾಜು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು. ಗುಂಡಿನ ಚಕಮಕಿಯಲ್ಲಿ ತನ್ನ ಒಬ್ಬ ಸಿಬ್ಬಂದಿಯ ಕಾಲಿಗೆ ಬುಲೆಟ್ ಗಾಯವಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಬಿಎಸ್‌ಎಫ್ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News