ರವೀಂದ್ರನಾಥ ಟ್ಯಾಗೋರ್ ಅವರ ಜಾಗದಲ್ಲಿ ಕುಳಿತಿರಲಿಲ್ಲ ಎಂದ ಅಮಿತ್ ಶಾ

ಕಳೆದ ತಿಂಗಳು ಪಶ್ಚಿಮ ಬಂಗಾಳದ ಶಾಂತಿನಿಕೇತನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಸ್ಥಾನದಲ್ಲಿ ಕುಳಿತುಕೊಂಡಿದ್ದೇನೆ ಎಂಬ ಕಾಂಗ್ರೆಸ್ ಮುಖಂಡರ ಆರೋಪವನ್ನು ಗೃಹ ಸಚಿವ ಅಮಿತ್ ಶಾ ಇಂದು ನಿರಾಕರಿಸಿದ್ದಾರೆ.

Last Updated : Feb 9, 2021, 08:53 PM IST
ರವೀಂದ್ರನಾಥ ಟ್ಯಾಗೋರ್ ಅವರ ಜಾಗದಲ್ಲಿ ಕುಳಿತಿರಲಿಲ್ಲ ಎಂದ ಅಮಿತ್ ಶಾ title=
file photo

ನವದೆಹಲಿ: ಕಳೆದ ತಿಂಗಳು ಪಶ್ಚಿಮ ಬಂಗಾಳದ ಶಾಂತಿನಿಕೇತನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಸ್ಥಾನದಲ್ಲಿ ಕುಳಿತುಕೊಂಡಿದ್ದೇನೆ ಎಂಬ ಕಾಂಗ್ರೆಸ್ ಮುಖಂಡರ ಆರೋಪವನ್ನು ಗೃಹ ಸಚಿವ ಅಮಿತ್ ಶಾ ಇಂದು ನಿರಾಕರಿಸಿದ್ದಾರೆ.

ಲೋಕಸಭೆಯ ಕಾಂಗ್ರೆಸ್ ಮುಖಂಡರಾದ ಅಧೀರ್ ರಂಜನ್ ಚೌಧರಿ ಅವರು ಸಧನದಲ್ಲಿ ಮಾತನಾಡುತ್ತಾ, ಷಾ ಅವರು ಜನವರಿ 20 ರಂದು ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿದ್ದಾಗ ಟಾಗೋರ್ ಅವರ ಆಸನದ ಮೇಲೆ ಕುಳಿತು ಮಹಾನ್ ವ್ಯಕ್ತಿಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದರು.ಟಾಗೋರ್ ಸ್ಥಾಪಿಸಿದ ವಿಶ್ವವಿದ್ಯಾಲಯದ ಉಪಕುಲಪತಿಯೊಂದಿಗೆ ಅದನ್ನು ದೃಢಪಡಿಸಿದ್ದೇನೆ ಎಂದು ಗೃಹ ಸಚಿವರು ಉತ್ತರಿಸಿದರು.

ಇದನ್ನೂ ಓದಿ: 'ಟ್ಯಾಗೋರ್ ಅವರ ನಾಡಿನಲ್ಲಿ ಎಂದಿಗೂ ದ್ವೇಷದ ರಾಜಕಾರಣ ಗೆಲ್ಲಲು ಸಾಧ್ಯವಿಲ್ಲ'

'ನಾನು ಶಾಂತಿನಿಕೇತನ ಭೇಟಿಯ ಸಮಯದಲ್ಲಿ ರವೀಂದ್ರನಾಥ ಟ್ಯಾಗೋರ್ (Rabindranath Tagore) ಅವರ ಆಸನದ ಮೇಲೆ ಕುಳಿತುಕೊಂಡಿದ್ದೇನೆ ಎಂದು ಅಧೀರ್ ರಂಜನ್ ಚೌಧರಿ ನಿನ್ನೆ ತಮ್ಮ ಭಾಷಣದಲ್ಲಿ ಹೇಳಿದರು. ವಿಶ್ವ ಭಾರತದ ಉಪಕುಲಪತಿಯಿಂದ ನನ್ನ ಬಳಿ ಒಂದು ಪತ್ರವಿದೆ, ಅಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎಂದು ಗೃಹ ಸಚಿವರು ಹೇಳಿದರು.ಕಾಂಗ್ರೆಸ್ ನಾಯಕರು ತಮ್ಮ ಮೇಲೆ ಆರೋಪ ಹೊರಿಸಿದ್ದನ್ನು ಮಾಡಿದ್ದಾರೆ ಎಂದು ಶ್ರೀ ಷಾ ಹೇಳಿದರು.

ಇದನ್ನೂ ಓದಿ: ರವೀಂದ್ರನಾಥ ಟ್ಯಾಗೋರ್ ಜೀವನದ ಕುರಿತ ಅಪರೂಪದ ಮಾಹಿತಿಗಳು

'ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿ ಮತ್ತು ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅದೇ ಸ್ಥಳದಲ್ಲಿ ಕುಳಿತರು. ನಾನು ಟ್ಯಾಗೋರ್ ಅವರ ಆಸನದ ಮೇಲೆ ಕುಳಿತುಕೊಳ್ಳಲಿಲ್ಲ ಆದರೆ ಪಂಡಿತ್ ನೆಹರು ಮತ್ತು ರಾಜೀವ್ ಗಾಂಧಿ ಟ್ಯಾಗೋರ್ ಅವರ ಆಸನದಲ್ಲಿ ಕುಳಿತಿರುವುದನ್ನು ತೋರಿಸುವ ಎರಡು ಚಿತ್ರಗಳಿವೆ" ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News