22 ಬಂಡಾಯ ಕಾಂಗ್ರೆಸ್ ಶಾಸಕರನ್ನು ಹಿಂತಿರುಗಿಸಲು ಅಮಿತ್ ಶಾಗೆ ಸಿಎಂ ಕಮಲ್ ನಾಥ್ ಪತ್ರ

ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿದಾಗಿನಿಂದ ಕಾಂಗ್ರೆಸ್ ಶಾಸಕರು ಸಹ ಈಗ ಬಿಜೆಪಿ ಮುಖ ಮಾಡಿರುವ ಬೆನ್ನಲ್ಲೇ ತಮ್ಮ ಶಾಸಕರನ್ನು ಹಿಂತಿರುಗಿಸಬೇಕೆಂದು ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಕೇಂದ್ರ ಗೃಹ ಸಚಿವ ಅಮಿತ್ ಷಾ ಗೆ ಪತ್ರ ಬರೆದಿದ್ದಾರೆ.

Last Updated : Mar 14, 2020, 10:00 PM IST
22 ಬಂಡಾಯ ಕಾಂಗ್ರೆಸ್ ಶಾಸಕರನ್ನು ಹಿಂತಿರುಗಿಸಲು ಅಮಿತ್ ಶಾಗೆ ಸಿಎಂ ಕಮಲ್ ನಾಥ್ ಪತ್ರ  title=

ನವದೆಹಲಿ: ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿದಾಗಿನಿಂದ ಕಾಂಗ್ರೆಸ್ ಶಾಸಕರು ಸಹ ಈಗ ಬಿಜೆಪಿ ಮುಖ ಮಾಡಿರುವ ಬೆನ್ನಲ್ಲೇ ತಮ್ಮ ಶಾಸಕರನ್ನು ಹಿಂತಿರುಗಿಸಬೇಕೆಂದು ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಕೇಂದ್ರ ಗೃಹ ಸಚಿವ ಅಮಿತ್ ಷಾ ಗೆ ಪತ್ರ ಬರೆದಿದ್ದಾರೆ.

ಮಾರ್ಚ್ 16 ರಂದು ರಾಜ್ಯ ಬಜೆಟ್ ಅಧಿವೇಶ ಪ್ರಾರಂಭವಾಗುವ ಹಿನ್ನಲೆಯಲ್ಲಿ ಈಗ ಕಮಲ್ ನಾಥ್ ಅವರ ಪತ್ರ ಬಂದಿದೆ.ಕಾಂಗ್ರೆಸ್ ಶಾಸಕರನ್ನು ಪ್ರಸ್ತುತ ಬೆಂಗಳೂರಿನ ಹೊರವಲಯದಲ್ಲಿರುವ ರಾಜ್ಯ ಪೊಲೀಸರು ರಕ್ಷಿಸಿರುವ ಕರ್ನಾಟಕ ರೆಸಾರ್ಟ್‌ನಲ್ಲಿ ಇರಿಸಲಾಗಿದೆ.

ಈ ಹಿಂದೆ ಕಮಲ್ ನಾಥ್ ಸರ್ಕಾರದಲ್ಲಿ ಸಚಿವರಾಗಿ ವಜಾಗೊಳಿಸಿದ್ದ ಆರು ಕಾಂಗ್ರೆಸ್ ಶಾಸಕರ ರಾಜೀನಾಮೆಯನ್ನು ಸ್ವೀಕರಿಸಲು ವಿಧಾನಸಭೆ ಸ್ಪೀಕರ್ ಶನಿವಾರ ತೆಗೆದುಕೊಂಡ ನಿರ್ಧಾರವನ್ನು ಈ ಬೆಳವಣಿಗೆ ಅನುಸರಿಸುತ್ತದೆ. "ಇಮರತಿ ದೇವಿ, ತುಳಸಿ ಸಿಲಾವತ್, ಗೋವಿಂದ್ ಸಿಂಗ್ ರಜಪೂತ್, ಮಹೇಂದ್ರ ಸಿಂಗ್ ಸಿಸೋಡಿಯಾ, ಪ್ರದ್ಯುಮ್ಮ್ ಸಿಂಗ್ ತೋಮರ್ ಮತ್ತು ಪ್ರಭುರಾಮ್ ಚೌಧರಿ ಅವರ ರಾಜೀನಾಮೆಯನ್ನು ನಾನು ಸ್ವೀಕರಿಸಿದ್ದೇನೆ" ಎಂದು ಪ್ರಜಾಪ್ತಿ ಹೇಳಿದ್ದಾರೆ.

ಈ ಸ್ಪೀಕರ್ ನಿರ್ಧಾರದಿಂದಾಗಿ 228 ಸದಸ್ಯರ ಸದನದ ಬಲ 222 ಕ್ಕೆ ಕುಸಿದಿದ್ದರಿಂದ ಕಾಂಗ್ರೆಸ್ ಪಕ್ಷದ ಶಾಸಕಾಂಗಕ್ಕೆ ಹಿನ್ನಡೆಯಾಗಿದೆ.ಕಾಂಗ್ರೆಸ್ ಶಾಸಕರ ಬಂಡಾಯಕ್ಕೂ ಮುಂಚಿತವಾಗಿ, ಕಾಂಗ್ರೆಸ್ 114 ಸದಸ್ಯರನ್ನು ಹೊಂದಿತ್ತು ಮತ್ತು ನಾಲ್ಕು ಸ್ವತಂತ್ರರ ಬೆಂಬಲದೊಂದಿಗೆ ಇಬ್ಬರು ಬಹುಜನ ಸಮಾಜ ಪಕ್ಷದ ಶಾಸಕರು ಮತ್ತು ಒಬ್ಬ ಸಮಾಜವಾದಿ ಪಕ್ಷದ ಸದಸ್ಯರ ಬೆಂಬಲವನ್ನು ಹೊಂದಿತ್ತು.

ಬಿಜೆಪಿಗೆ ಸೇರಲು ಕಾಂಗ್ರೆಸ್ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಬೆಂಬಲಿಸಿ ಪಕ್ಷದ ಇತರ 16 ಶಾಸಕರೊಂದಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ ನಂತರ ಈ ಆರು ಶಾಸಕರನ್ನು ರಾಜ್ಯ ಸಚಿವ ಸಂಪುಟದಿಂದ ವಜಾ ಮಾಡಲಾಯಿತು.ಸ್ಪೀಕರ್ ಎನ್.ಪಿ.ಪ್ರಜಪತಿ ಅವರು ಎಲ್ಲಾ 22 ಬಂಡುಕೋರರಿಗೆ ಗುರುವಾರ ನೋಟಿಸ್ ನೀಡಿದ್ದು, ಅವರು ಸ್ವಯಂಪ್ರೇರಣೆಯಿಂದ ತ್ಯಜಿಸಿದ್ದಾರೆಯೇ ಅಥವಾ ಒತ್ತಡದಲ್ಲಿದ್ದಾರೆಯೇ ? ಎಂದು ವಿವರಿಸಲು ಶುಕ್ರವಾರ ಖುದ್ದಾಗಿ ಹಾಜರಾಗುವಂತೆ ಕೋರಿದ್ದರು.

'ಅವರ ರಾಜೀನಾಮೆ ಪರಿಶೀಲನೆಗಾಗಿ ಬಂದ ನಂತರ ಶುಕ್ರವಾರ ಮತ್ತು ಶನಿವಾರ ವೈಯಕ್ತಿಕವಾಗಿ ಹಾಜರಾಗಲು ನಾನು ಅವರಿಗೆ ಸಮಯ ನೀಡಿದ್ದೆ. ಆದರೆ ಅವರು ಬರಲಿಲ್ಲ, ”ಎಂದು ಅವರು ಶನಿವಾರ ಹೇಳಿದ್ದಾರೆ.

Trending News