ರಾಷ್ಟ್ರಪತಿ ಚುನಾವಣೆ 2022 : ವಿಮಾನದ ಮೂಲಕ ಜೈಪುರ ತಲುಪಿದ 'ಮಿಸ್ಟರ್ ಬ್ಯಾಲೆಟ್ ಬಾಕ್ಸ್'!

'ಮಿಸ್ಟರ್ ಬ್ಯಾಲೆಟ್ ಬಾಕ್ಸ್' ಎಂಬುದು ಜುಲೈ 18 ರಂದು ರಾಷ್ಟ್ರಪತಿ ಚುನಾವಣೆಗೆ ಬಳಸಲಾಗುವ ಮತಪೆಟ್ಟಿಗೆಯಾಗಿದೆ.

Written by - Channabasava A Kashinakunti | Last Updated : Jul 14, 2022, 04:13 PM IST
  • ನವದೆಹಲಿಯಿಂದ ಜೈಪುರ ತಲುಪಿದ ತಂಡ
  • ಸೀಲ್ ಮಾಡಲಾಗಿದೆ ಸ್ಟ್ರಾಂಗ್ ರೂಮ್
  • ಜುಲೈ 18 ರಂದು ಮತದಾನ
ರಾಷ್ಟ್ರಪತಿ ಚುನಾವಣೆ 2022 : ವಿಮಾನದ ಮೂಲಕ ಜೈಪುರ ತಲುಪಿದ 'ಮಿಸ್ಟರ್ ಬ್ಯಾಲೆಟ್ ಬಾಕ್ಸ್'! title=

President Elction 2022 : ರಾಷ್ಟ್ರಪತಿ ಚುನಾವಣೆಗಾಗಿ 'ಮಿಸ್ಟರ್ ಬ್ಯಾಲೆಟ್ ಬಾಕ್ಸ್' ವಿಮಾನದ ಮೂಲಕ ಜೈಪುರ ತಲುಪಿದ್ದು, ಬಿಗಿ ಭದ್ರತೆಯ ನಡುವೆ ವಿಧಾನಸಭೆ ಕಾಂಪ್ಲೆಕ್ಸ್ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದೆ. 'ಮಿಸ್ಟರ್ ಬ್ಯಾಲೆಟ್ ಬಾಕ್ಸ್' ಎಂಬುದು ಜುಲೈ 18 ರಂದು ರಾಷ್ಟ್ರಪತಿ ಚುನಾವಣೆಗೆ ಬಳಸಲಾಗುವ ಮತಪೆಟ್ಟಿಗೆಯಾಗಿದೆ. ಬಿಗಿ ಭದ್ರತೆಯ ನಡುವೆ ಬುಧವಾರ ಈ ಮತಪೆಟ್ಟಿಗೆಯನ್ನು ದೆಹಲಿಯಿಂದ ಜೈಪುರಕ್ಕೆ ಕಳುಹಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಇದಕ್ಕಾಗಿ ವಿಮಾನದ ಸಂಪೂರ್ಣ ಸೈಟ್ ಗಳನ್ನು 'ಮಿಸ್ಟರ್ ಬ್ಯಾಲೆಟ್ ಬಾಕ್ಸ್' ಹೆಸರಿನಲ್ಲಿ ಕಾಯ್ದಿರಿಸಲಾಗಿತ್ತು.

ನವದೆಹಲಿಯಿಂದ ಜೈಪುರ ತಲುಪಿದ ತಂಡ

ಈ  ಆಗ್ಗೆ ಮಾಹಿತಿ ನೀಡಿದ  ಮುಖ್ಯ ಚುನಾವಣಾಧಿಕಾರಿ ಪ್ರವೀಣ್ ಗುಪ್ತಾ, ರಾಷ್ಟ್ರಪತಿ ಚುನಾವಣೆಗೆ ಬಿಗಿ ಭದ್ರತೆಯೊಂದಿಗೆ ಬುಧವಾರ ಸಂಜೆ ಹೊಸದಿಲ್ಲಿಯಿಂದ ಜೈಪುರಕ್ಕೆ ಮತಪೆಟ್ಟಿಗೆಗಳು ಇತರ ಚುನಾವಣಾ ಸಾಮಗ್ರಿಗಳನ್ನು ತರಲಾಯಿತು. ಅವುಗಳನ್ನ ವಿಧಾನಸಭೆ ಆವರಣದಲ್ಲಿರುವ ಸ್ಟ್ರಾಂಗ್ ರೂಂನಲ್ಲಿ ಬಿಗಿ ಭದ್ರತೆಯಲ್ಲಿ ಸೀಲ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ : Maharashtra Politics : ಶಿಂಧೆ ಸರ್ಕಾರದಲ್ಲಿ 'ಠಾಕ್ರೆ ಕುಟುಂಬದ' ಕುಡಿಗೆ ಸಚಿವ ಸ್ಥಾನ..!

ಚುನಾವಣಾ ಆಯೋಗದ ಸೂಚನೆ ಮೇರೆಗೆ ‘ಮಿಸ್ಟರ್ ಬ್ಯಾಲೆಟ್ ಬಾಕ್ಸ್’ ಹೆಸರಿನಲ್ಲಿ ವಿಮಾನದಲ್ಲಿ ಅಧಿಕಾರಿಗಳ ಜೊತೆಗೆ ಮತಪೆಟ್ಟಿಗೆಗೆ ಸಂಪೂರ್ಣ ಸೀಟು ಮೀಸಲಿಡಲಾಗಿತ್ತು. ಇದಕ್ಕಾಗಿ ಪ್ರತ್ಯೇಕ ಟಿಕೆಟ್ ತೆಗೆದುಕೊಳ್ಳಲಾಗಿದೆ. ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನವದೆಹಲಿಯಿಂದ ಜೈಪುರಕ್ಕೆ ಮತಪೆಟ್ಟಿಗೆಯನ್ನು ತರಲಾಗಿದೆ.

ಸೀಲ್ ಮಾಡಲಾಗಿದೆ ಸ್ಟ್ರಾಂಗ್ ರೂಮ್

ಇದಕ್ಕೂ ಮುನ್ನ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದ ಈ ಪ್ರಮುಖ ಮತದಾನ ಸಾಮಗ್ರಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಕಚೇರಿಯಿಂದ ದೆಹಲಿ ಪೊಲೀಸ್ ತಂಡ ಮತ್ತು ಆರ್‌ಎಸಿ ಹೊಸ ದೆಹಲಿ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಯಿತು. ಜೈಪುರದ ಸಂಗನೇರ್ ವಿಮಾನ ನಿಲ್ದಾಣದಿಂದ ವಿಧಾನಸಭಾ ಕಟ್ಟಡದಲ್ಲಿರುವ ಸ್ಟ್ರಾಂಗ್ ರೂಮ್‌ಗೆ ತಲುಪುವ ಸಂಪೂರ್ಣ ಪ್ರಕ್ರಿಯೆಯ ವೀಡಿಯೊ ರೆಕಾರ್ಡಿಂಗ್ ಮತ್ತು ಸ್ಟ್ರಾಂಗ್ ರೂಮ್‌ನಲ್ಲಿ ಸೀಲಿಂಗ್ ಅನ್ನು ಸಹ ಮತಪೆಟ್ಟಿಗೆಗಳು ಮತ್ತು ಚುನಾವಣಾ ಸಾಮಗ್ರಿಗಳಿಗಾಗಿ ಆಯೋಗವು ಒದಗಿಸಿದ ಪ್ರೋಟೋಕಾಲ್ ಮತ್ತು ಮಾರ್ಗಸೂಚಿಗಳೊಂದಿಗೆ ಮಾಡಲಾಯಿತು. ವಿಧಾನಸಭಾ ಸಚಿವಾಲಯದ ಕೊಠಡಿ ಸಂಖ್ಯೆ 751 ರೊಳಗೆ ಈಗಾಗಲೇ 'ಸ್ಯಾನಿಟೈಸ್ ಮಾಡಿದ' ಸ್ಟ್ರಾಂಗ್ ರೂಮ್‌ನಲ್ಲಿ ಚುನಾವಣಾ ಸಾಮಗ್ರಿಗಳನ್ನು ಇಡಲಾಗಿದೆ.

ಜುಲೈ 18 ರಂದು ಮತದಾನ

ಮತದಾನದ ದಿನವಾದ ಜುಲೈ 18 ರಂದು ಬೆಳಿಗ್ಗೆ 9 ಗಂಟೆಗೆ ಸ್ಟ್ರಾಂಗ್ ರೂಂ ತೆರೆದು ಮತಯಂತ್ರ ಹಾಗೂ ಇತರೆ ಮತಯಂತ್ರಗಳನ್ನು ಹೊರ ತೆಗೆಯಲಾಗುವುದು ಎಂದು ತಿಳಿಸಿದರು. ಮತದಾನ ಮುಗಿದ ನಂತರ, ಅದೇ ದಿನ, ಅಧಿಕೃತ ಅಧಿಕಾರಿಗಳು ಮತಪೆಟ್ಟಿಗೆ ಮತ್ತು ಇತರ ಮತದಾನ ಸಾಮಗ್ರಿಗಳನ್ನು ವಿಮಾನದ ಮೂಲಕ ನವದೆಹಲಿಗೆ ತೆಗೆದುಕೊಂಡು ಹೋಗಿ ರಾಜ್ಯಸಭಾ ಸಚಿವಾಲಯದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಠೇವಣಿ ಮಾಡುತ್ತಾರೆ. ಮತಪೆಟ್ಟಿಗೆ ಮತ್ತು ಇತರ ದಾಖಲೆಗಳನ್ನು ಸಾಗಿಸಲು ಪ್ರತ್ಯೇಕ ವಿಮಾನ ಟಿಕೆಟ್ ಕಾಯ್ದಿರಿಸಲಾಗಿದೆ.

ಇದನ್ನೂ ಓದಿ : Congress : ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಕಾಂಗ್ರೆಸ್‌ ಹಿರಿಯ ನಾಯಕ!

ರಾಷ್ಟ್ರಪತಿ ಚುನಾವಣೆಗೆ, ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ತನ್ನ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ನಾಮನಿರ್ದೇಶನ ಮಾಡಿದ್ದು, ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ನಾಮನಿರ್ದೇಶನ ಮಾಡಿದೆ. ಮುರ್ಮು ಮತ್ತು ಸಿನ್ಹಾ ಇತ್ತೀಚೆಗೆ ಜೈಪುರಕ್ಕೆ ಬಂದಿದ್ದರು. ರಾಜಸ್ಥಾನ ವಿಧಾನಸಭೆಯಲ್ಲಿ ಒಟ್ಟು 200 ಶಾಸಕರಿದ್ದು, ರಾಜ್ಯದಿಂದ 25 ಲೋಕಸಭೆ ಮತ್ತು 10 ರಾಜ್ಯಸಭಾ ಸದಸ್ಯರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News