Ram Mandir ಶಂಕುಸ್ಥಾಪನೆಯ ಮುಹೂರ್ತವನ್ನು ಪ್ರಶ್ನಿಸಿದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಹೇಳಿದ್ದೇನು?

ರಾಮಮಂದಿರದ ಶಂಕುಸ್ಥಾಪನೆಗೆ ನಿಗದಿಪಡಿಸಲಾಗಿರುವ ಮುಹೂರ್ತವನ್ನು ಪ್ರಶ್ನಿಸಿರುವ ಜಗದ್ಗುರು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ, ಅದೊಂದು ಅಶುಭ ಮುಹೂರ್ತವಾಗಿದೆ ಎಂದು ಹೇಳಿದ್ದಾರೆ.

Last Updated : Jul 23, 2020, 10:55 AM IST
Ram Mandir ಶಂಕುಸ್ಥಾಪನೆಯ ಮುಹೂರ್ತವನ್ನು ಪ್ರಶ್ನಿಸಿದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಹೇಳಿದ್ದೇನು? title=

ಭೋಪಾಲ್: ಜಗದ್ಗುರು ಶಂಕರಾಚಾರ್ಯ ಸ್ವರೂಪಾನಂದ್ ಸರಸ್ವತಿ ಅವರು ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣದ ಶಂಕುಸ್ಥಾಪನೆಯ ದಿನಾಂಕವನ್ನು ಪ್ರಶ್ನಿಸಿದ್ದು, ಇದೊಂದು ಅಶುಭ ವೇಳೆಯಾಗಿದೆ ಎಂದು ಹೇಳಿದ್ದಾರೆ. ಸರಸ್ವತಿ ನಾವು ಶ್ರೀರಾಮನ ಭಕ್ತರಾಗಿದ್ದು, ಶ್ರೀರಾಮನ ಭವ್ಯ ದೇಗುಲವನ್ನು ನಿರ್ಮಿಸಲು ಹೊರಟಿದ್ದೇವೆ., ಇದರಲ್ಲಿ ಯಾವುದೇ ರಾಜಕೀಯ ಇರಬಾರದು ಎಂದು ಹೇಳಿದ್ದಾರೆ. ರಾಜಕೀಯದಿಂದಾಗಿ, ಹಿಂದೂಗಳ ಮಧ್ಯೆ ಹುಳಿ ಹಿಂಡಿದಂತಾಗುತ್ತದೆ. ಆದರೆ ಶಂಕುಸ್ಥಾಪನೆಯ ಸಮಯ ಒಳ್ಳೆಯದಲ್ಲ, ಅದೊಂದು ಅಶುಭ ಗಳಿಗೆಯಾಗಿದೆ ಎಂದು ಜಗದ್ಗುರು ಶಂಕರಾಚಾರ್ಯ ಹೇಳಿದ್ದಾರೆ.

ನರಸಿಂಗಪುರ ಜಿಲ್ಲೆಯ ತಮ್ಮ ಆಶ್ರಮದಲ್ಲಿ ಈ ಕುರಿತು ಮಾತನಾಡಿರುವ ಜಗದ್ಗುರು ಶಂಕರಾಚಾರ್ಯ ಸ್ವರೂಪಾನಂದ್ ಸರಸ್ವತಿ, ಸನಾತನ ಧರ್ಮದ ಮೂಲ ಅಡಿಪಾಯ ವೇದವಾಗಿದೆ ಎಂದು ಹೇಳಿದ್ದಾರೆ. ವೇದಗಳ ಪ್ರಕಾರ ಮಾಡುವ ಕರ್ಮವನ್ನು ಯಜ್ಞ ಎಂದು ಕರೆಯಲಾಗುತ್ತದೆ, ಇದು ಕೇವಲ ಕಾಲದ ಎಣಿಕೆಯನ್ನು ಆಧರಿಸಿದೆ. ಒಂದು ನಿರ್ದಿಷ್ಟ ಅವಧಿಯ ಶುಭ ಮತ್ತು ಅಶುಭ ಲೆಕ್ಕಾಚಾರ ಮತ್ತು ಜ್ಞಾನವು ಜ್ಯೋತಿಷ್ಯದಿಂದ ಬಂದಿದೆ. ಅದಕ್ಕಾಗಿಯೇ ಜ್ಯೋತಿಷ್ಯವನ್ನು ವೇದಾಂಗ್ ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಸನಾತನ ಧರ್ಮದ ಪ್ರತಿಯೊಬ್ಬ ಅನುಯಾಯಿ ಶುಭ ಸಮಯ ಎಂದು ಕರೆಯಲ್ಪಡುವ ಅತ್ಯುತ್ತಮ ಅವಧಿಯಲ್ಲಿ ತನ್ನ ಕೆಲಸವನ್ನು ಪ್ರಾರಂಭಿಸುತ್ತಾನೆ ಎಂದಿದ್ದಾರೆ.

ಸನಾತನ ಸಮಾಜದಲ್ಲಿ ಇದರಿಂದ ಅಸಮಾಧಾನ ಇದೆ: ಶಂಕರಾಚಾರ್ಯ
ಪ್ರತಿ ಸಣ್ಣ ಮತ್ತು ದೊಡ್ಡ ಕಾರ್ಯಗಳನ್ನು ಶುಭ ಮುಹೂರ್ತದಲ್ಲಿ ಆರಂಭಿಸಿರುವ  ಸನಾತನ ಸಮಾಜವು, ದೇಶಾದ್ಯಂತ ಕೋಟ್ಯಂತರ ಜನರ ನಂಬಿಕೆಯ ಕೇಂದ್ರವಾದ ರಾಮ ದೇವಾಲಯವು ಶುಭ ಅಶುಭ ಸಮಯದಲ್ಲಿ ಪ್ರಾರಂಭವಾಗುತ್ತಿರುವುದರ ಬಗ್ಗೆ ತೀವ್ರ ಅಸಮಾಧಾನ ಹೊಂದಿದೆ ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಶ್ರೀ ರಾಮ್ ಜನಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೂಲಕ 2020 ರ ಆಗಸ್ಟ್ 5 ರಂದು ಶಂಕುಸ್ಥಾಪನೆಯ ಸಮಯ ಘೋಷಿಸಲಾಗಿದೆ. ಅಯೋಧ್ಯೆಯಲ್ಲಿ ಪೂಜಾ ಸ್ಥಳ ಅಂದರೆ ದೇವಾಲಯವನ್ನು ನಿರ್ಮಿಸಬೇಕಾದರೆ ಅದನ್ನು ಶುಭ ಸಮಯದಲ್ಲಿ ಧರ್ಮಗ್ರಂಥಗಳ ಪ್ರಕಾರ ಮಾಡಬೇಕು ಎಂದು ಜಗದ್ಗುರು ಹೇಳಿದ್ದಾರೆ. ಆದರೆ ಅನಿಯಂತ್ರಿತವಾಗಿ ಹಾಗೆ ಮಾಡದಿದ್ದಲ್ಲಿ, ದೇವಾಲಯವಲ್ಲ, ಸಂಘದ ಕಚೇರಿಯನ್ನು ಅಲ್ಲಿ ನಿರ್ಮಿಸಲಾಗುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದಿದ್ದಾರೆ.

2020 ರ ಆಗಸ್ಟ್ 5 ರಂದು ದಕ್ಷಿಣಾಯನ್ ಭಾದ್ರಪದ ತಿಂಗಳು ಕೃಷ್ಣ ಪಕ್ಷದ ಎರಡನೇ ತಿಥಿಯಾಗಿದೆ ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಅಷ್ಟೇ ಅಲ್ಲ ಧರ್ಮಗ್ರಂಥಗಳಲ್ಲಿ, ಭಾದ್ರಪದ ತಿಂಗಳಿನಲ್ಲಿ  ಮನೆ-ದೇವಾಲಯ ನಿರ್ಮಾಣ ಪ್ರಾರಂಭಿಸುವುದನ್ನು ನಿಷಿದ್ಧ ಎನ್ನಲಾಗಿದೆ. ಕಾಶಿಯ ವಿಶ್ವನಾಥ ದೇವಾಲಯದ ಸುತ್ತಮುತ್ತಲಿನ ದೇವಾಲಯಗಳನ್ನು ಕೆಡಹುವಾಗ, ಈ ಕಾರ್ಯವು ಇಡೀ ಜಗತ್ತಿಗೆ ಸಮಸ್ಯೆಯನ್ನುಂಟು ಮಾಡಲಿದೆ ಎಂದು ನಾವು ಎಚ್ಚರಿಸಿದ್ದೆವು. ಆದರೆ, ಅದನ್ನು ನಿರ್ಲಕ್ಷಿಸಿದ್ದರ ಪರಿಣಾಮ ಇಂದು ನಾವೆಲ್ಲರೂ ನೋಡುತ್ತಿದ್ದೇವೆ ಎಂದು ಶಂಕರಾಚಾರ್ಯ ಹೇಳಿದ್ದಾರೆ.

Trending News