ನವದೆಹಲಿ: ಕೇಂದ್ರ ಸಚಿವ ಮತ್ತು ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ (Nitin Gadkari) ಅವರು ರಾಮಜನ್ಮಭೂಮಿ ಆಂದೋಲನಕ್ಕೆ ಸಂಬಂಧಪಟ್ಟ ಜನರನ್ನು ಸ್ಮರಿಸಿದರು ಮತ್ತು ಇಂದು ಐತಿಹಾಸಿಕ ದಿನ ಎಂದು ಬಣ್ಣಿಸಿದರು.
ಶ್ರೀರಾಮ ಮಂದಿರಕ್ಕೆ ಅಡಿಗಲ್ಲು ಹಾಕಲು ಅಯೋಧ್ಯೆಯತ್ತ ತೆರಳಿದ ಪ್ರಧಾನಿ ಮೋದಿ
भगवान श्रीराम भारतीय इतिहास, संस्कृति और हमारी आस्था के प्रतीक हैं। आज का दिन हर भारतीय के लिए हर्षोल्लास का दिन है। वर्षाें से हम सभी का सपना रहा है कि अयोध्या में भव्य राम मंदिर का निर्माण हो। #JaiShriRam pic.twitter.com/PsTH8ljyM7
— Nitin Gadkari (@nitin_gadkari) August 5, 2020
ಇಂದು ಇಡೀ ದೇಶದ ಜನರ ಆಸೆ ಈಡೇರುತ್ತಿದೆ. ಜನರು ಈ ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದ್ದಾರೆ ಎಂದಿದ್ದಾರೆ.
आज के दिन मैं उन सभी को याद करता हूं, जिन्होंने देश में राम जन्मभूमि आंदोलन की शुरुआत की और इस आंदोलन में अपनी आहुति दी, उन सभी को मैं अभिवादन करता हूं। #JaiShriRam
— Nitin Gadkari (@nitin_gadkari) August 5, 2020
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ನಿತಿನ್ ಗಡ್ಕರಿ ಭಗವಾನ್ ಶ್ರೀ ರಾಮ್ ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ನಮ್ಮ ನಂಬಿಕೆಯ ಸಂಕೇತವಾಗಿದೆ. ಇಂದು ಪ್ರತಿಯೊಬ್ಬ ಭಾರತೀಯನಿಗೂ ಸಂತೋಷದ ದಿನ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರವನ್ನು ನಿರ್ಮಿಸುವುದು ನಮ್ಮೆಲ್ಲರ ಕನಸಾಗಿದೆ ಎಂದು ಬರೆದಿದ್ದಾರೆ.