ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ಈ ಪ್ರದೇಶಗಳಲ್ಲಿ ಭಾರೀ ಮಳೆ ಬಿರುಗಾಳಿ : ರೈಲ್ವೇ ಸೇವೆ ರದ್ದು

Rain laert Today : ಭಾರೀ ಗಾಳಿ ಮಳೆ ಹಿನ್ನೆಲೆಯಲ್ಲಿ ತಮಿಳುನಾಡಿಗೆ ತೆರಳುವ ರೈಲು ಸೇವೆ ರದ್ದುಗೊಳಿಸಲಾಗಿದೆ.  ತಮಿಳುನಾಡು ಭಾಗಕ್ಕೆ ಇಂದು  ರೈಲ್ವೇ ಸೇವೆ ಸಂಚಾರ  ಇರುವುದಿಲ್ಲ ಎಂದು ಇಲಾಖೆ ಹೇಳಿದೆ. 

Written by - Ranjitha R K | Last Updated : Dec 4, 2023, 02:22 PM IST
  • ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ
  • ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ
  • ಯಾವ ಯಾವ ರೈಲು ಸೇವೆ ರದ್ದಾಗಿದೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ಈ ಪ್ರದೇಶಗಳಲ್ಲಿ ಭಾರೀ ಮಳೆ ಬಿರುಗಾಳಿ : ರೈಲ್ವೇ ಸೇವೆ ರದ್ದು title=

Rain laert Today : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ  ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಗುಡ್ಡ ಕುಸಿತ ಸೇರಿದಂತೆ ಹಲವಾರು ವಿಧಗಳಲ್ಲಿ ಸಂಚಾರಕ್ಕೆ ಮಳೆ ಅಡ್ಡಿಯಾಗಿದೆ.  ಭಾರೀ ಗಾಳಿ ಮಳೆ ಹಿನ್ನೆಲೆಯಲ್ಲಿ ತಮಿಳುನಾಡಿಗೆ ತೆರಳುವ ರೈಲು ಸೇವೆ ರದ್ದುಗೊಳಿಸಲಾಗಿದೆ. 

ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ತಮಿಳುನಾಡಿನ ಬಹುತೇಕ ರೈಲ್ವೇ ನಿಲ್ದಾಣಗಳು ಮಳೆ ನೀರಿನಿಂದ ಕೂಡಿವೆ. ಇದರಿಂದ ರೈಲು ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಿಂದ ಹೊರಡುವ ಹತ್ತಕ್ಕು ಹೆಚ್ಚು ರೈಲ್ವೇ ಸೇವೆ ರದ್ದುಗೊಳಿಸಲಾಗಿದೆ. ತಮಿಳುನಾಡಿಗೆ ತೆರಳುವ ಎಲ್ಲಾ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ನೈರುತ್ಯ ರೈಲ್ವೆ ಇಲಾಖೆ ಈ ವಿಷಯವನ್ನು ಸ್ಪಷ್ಟಪಡಿಸಿದೆ. ಹಲವೆಡೆ ಗುಡ್ಡ ಕುಸಿತ  ಉಂಟಾಗಿ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಹೀಗಾಗಿ ತಮಿಳುನಾಡು ಭಾಗಕ್ಕೆ ಇಂದು  ರೈಲ್ವೇ ಸೇವೆ ಸಂಚಾರ  ಇರುವುದಿಲ್ಲ ಎಂದು ಇಲಾಖೆ ಹೇಳಿದೆ. 

ಇದನ್ನೂ ಓದಿ ಹೊಗೆನಕಲ್ ನಲ್ಲಿ ಅಂಬಿಗರ ಮುಷ್ಕರ: ಪ್ರವಾಸಿಗರಿಗಿಲ್ಲ ಪ್ರವೇಶ

ಯಾವ ಯಾವ ರೈಲು ಸೇವೆ ರದ್ದಾಗಿದೆ : 
ರೈಲಿನ ಸಂಖ್ಯೆ:12007 -ಡಾ. ಎಂಜಿಆರ್ ಚೈನೈ – ಮೈಸೂರು    
ರೈಲಿನ‌ ಸಂಖ್ಯೆ:12008 -ಮೈಸೂರು - Dr. MGR ರೈಲ್ವೇ ನಿಲ್ದಾಣ (ಸೆಂಟ್ರಲ್)  
ರೈಲಿನ‌ ಸಂಖ್ಯೆ : 22625 Dr. MGR ಚೆನೈ ಸೆಂಟ್ರಲ್-  KSR ಬೆಂಗಳೂರು
ರೈಲಿನ ಸಂಖ್ಯೆ 22626    -KSR ಬೆಂಗಳೂರು - Dr. MGR ಚೆನೈ ಸೆಂಟ್ರಲ್
ರೈಲಿನ ಸಂಖ್ಯೆ12639    -Dr. MGR ಚೆನೈ ಸೆಂಟ್ರಲ್ – KSR ಬೆಂಗಳೂರು
ರೈಲಿನ ಸಂಖ್ಯೆ :12640    -KSR ಬೆಂಗಳೂರು - Dr. MGR ಚೆನೈ ಸೆಂಟ್ರಲ್
ರೈಲಿನ ಸಂಖ್ಯೆ :12027 - Dr. MGR ಚೆನೈ ಸೆಂಟ್ರಲ್-  KSR ಬೆಂಗಳೂರು
ರೈಲಿನ ಸಂಖ್ಯೆ :12028 - KSR ಬೆಂಗಳೂರು - Dr. MGR ಚೆನೈ ಸೆಂಟ್ರಲ್
ರೈಲಿನ ಸಂಖ್ಯೆ : 2608    -KSR ಬೆಂಗಳೂರು - Dr. MGR ಚೆನೈ    ಸೆಂಟ್ರಲ್
ರೈಲಿನ ಸಂಖ್ಯೆ :12609 - Dr. MGR ಚೆನೈ ಸೆಂಟ್ರಲ್ – ಮೈಸೂರು

ಇನ್ನು ರಾಜ್ಯದಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಲಘು ಮಳೆಯಾಗುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ : "ಹಿರಿಯ ನಟಿ ಲೀಲಾವತಿ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ" : ಸಿ ಎಂ ಸಿದ್ದರಾಮಯ್ಯ ಹೇಳಿಕೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News